ಆ್ಯಪ್ನಗರ

1 ರೂಪಾಯಿ ಕೊಟ್ಟಿಲ್ಲವೆಂದು ಕಾದ ಎಣ್ಣೆ ಎರಚಿದ ಅಂಗಡಿ ಮಾಲೀಕ

ಮಂಗಳವಾರ ಆಗ್ರಾದಲ್ಲಿ ಈ ಖಂಡನೀಯ ಘಟನೆ ನಡೆದಿದ್ದು, 26 ವರ್ಷದ ಹೇಮರಾಜ್ ಮತ್ತು ಅಂಗಡಿ ಮಾಲೀಕನ ನಡುವೆ 1 ರೂಪಾಯಿಗಾಗಿ ನಡೆದ ವ್ಯಾಜ್ಯ ಇಷ್ಟು ಕ್ರೂರ ರೀತಿಯಲ್ಲಿ ಅಂತ್ಯ ಕಂಡಿದೆ.

TIMESOFINDIA.COM 19 Jun 2019, 1:56 pm
ಆಗ್ರಾ: ಸಮೋಸಾ ಖರೀದಿಸಿ 1 ರೂಪಾಯಿ ಕಡಿಮೆ ಕೊಟ್ಟಿದ್ದಕ್ಕೆ ಆಕ್ರೋಶಕ್ಕೊಳಗಾದ ವ್ಯಾಪಾರಿ ಗ್ರಾಹಕನ ಸಹೋದರನ ಮೈಮೇಲೆ ಕಾದ ಎಣ್ಣೆ ಎರಚಿದ ಅಮಾನವೀಯ ಕೃತ್ಯ ಉತ್ತರ ಪ್ರದೇಶದಲ್ಲಿ ನಡೆದಿದೆ.
Vijaya Karnataka Web Hemraj


ಮಂಗಳವಾರ ಆಗ್ರಾದಲ್ಲಿ ಈ ಖಂಡನೀಯ ಘಟನೆ ನಡೆದಿದ್ದು, 26 ವರ್ಷದ ಹೇಮರಾಜ್ ಮತ್ತು ಅಂಗಡಿ ಮಾಲೀಕನ ನಡುವೆ 1 ರೂಪಾಯಿಗಾಗಿ ನಡೆದ ವ್ಯಾಜ್ಯ ಇಷ್ಟು ಕ್ರೂರ ರೀತಿಯಲ್ಲಿ ಅಂತ್ಯ ಕಂಡಿದೆ.

ಸಂತ್ರಸ್ತ ಹೇಮರಾಜ್‌ನ ತಮ್ಮ ವಿಷ್ಣು (22) ರೆಟಿಯಾ ಮಾರುಕಟ್ಟೆಯಲ್ಲಿರುವ ಸ್ವೀಟ್ ಅಂಗಡಿಗೆ ಹೋಗಿ ಸಮೋಸಾ ಕೊಂಡಿದ್ದ. ಅವನ ಬಳಿ ಕೇವಲ ಐದು ರೂಪಾಯಿ ಇತ್ತು. ಅಷ್ಟೇ ಕೂಟ್ಟು ಮರಳಲು ಯತ್ನಿಸಿದಾಗ ಇನ್ನೊಂದು ರೂಪಾಯಿ ಕೊಡೆಂದು ಅಂಗಡಿ ಮಾಲೀಕ ಸುರೇಶ್ ಮತ್ತವನ ಮಕ್ಕಳು ಜಗಳ ಆರಂಭಿಸಿದರು. ಅವನನ್ನು ಮನ ಬಂದಂತೆ ಬೈದು ಥಳಿಸಿದರು.

ತಮ್ಮನ ರಕ್ಷಣೆಗೆ ಹೇಮರಾಜ್ ಬಂದಾಗ ಅವರಿಬ್ಬರ ಮೇಲೆ ಕಾದ ಎಣ್ಣೆಯನ್ನು ಎರಚಿ ಕ್ರೂರತೆ ಮೆರೆದಿದ್ದಾರೆ.

ಘಟನೆಯಲ್ಲಿ ಹೇಮರಾಜ್‌ಗೆ ಗಂಭೀರ ಗಾಯಗಳಾಗಿದ್ದು, ವಿಷ್ಣುಗೆ ಅಲ್ಪಸ್ವಲ್ಪ ಗಾಯಗಳಾಗಿವೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಉದ್ದೇಶಪೂರ್ವಕವಾಗಿ ಎಣ್ಣೆ ಎರಚಿದರೋ ಅಥವಾ ಆಕಸ್ಮಿಕವಾಗಿ ಅವರ ಮೈಮೇಲೆ ಚೆಲ್ಲಿತೋ ಎಂದು ತನಿಖೆ ನಡೆಸುತ್ತಿದ್ದಾರೆ.

ಆದರೆ ಆರೋಪಿ ಸುರೇಶ್ ತಮ್ಮ ತಪ್ಪೇನು ಇಲ್ಲ ಎಂದಿದ್ದು, 1 ರೂಪಾಯಿ ಕೊಡಿ ಎಂದಿದ್ದಕ್ಕೆ ಸಹೋದರರು ನಮ್ಮ ಅಂಗಡಿಯನ್ನು ಧ್ವಂಸ ಮಾಡಿ, ಹಣ ಲೂಟಿ ಹೊಡೆದರು ಎಂದು ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ