ಆ್ಯಪ್ನಗರ

Shraddha Walker Murder: ಶ್ರದ್ಧಾಳನ್ನು ಕೊಂದ ಬಳಿಕ ಮನೋವೈದ್ಯೆ ಜತೆ ಹಂತಕ ಅಫ್ತಾಬ್ ಡೇಟಿಂಗ್

Shraddha Walker Murder Case: ತನ್ನ ಲಿವ್ ಇನ್ ಟುಗೆದರ್ ಸಂಗಾತಿ ಶ್ರದ್ಧಾ ವಾಲ್ಕರ್‌ಳನ್ನು ಕೊಂದು, ಆಕೆಯ ದೇಹದ ಭಾಗಗಳನ್ನು ಮನೆಯೊಳಗೆ ಅಡಗಿಸಿಟ್ಟ ಬಳಿಕ ಮತ್ತೊಬ್ಬ ಮಹಿಳೆ ಜತೆ ಅಫ್ತಾಬ್ ಪೂನಾವಾಲಾ ಡೇಟಿಂಗ್ ನಡೆಸಿದ್ದ. ಆಕೆ ವೃತ್ತಿಯಿಂದ ವೈದ್ಯೆ ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

Authored byಅಮಿತ್ ಎಂ.ಎಸ್ | Vijaya Karnataka Web 26 Nov 2022, 4:58 pm

ಹೈಲೈಟ್ಸ್‌:

  • ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣದ ಮತ್ತಷ್ಟು ಸಂಗತಿಗಳು ತನಿಖೆಯಿಂದ ಬಹಿರಂಗ
  • ಶ್ರದ್ಧಾಳನ್ನು ಕೊಂದ ಬಳಿಕ ಮತ್ತೊಬ್ಬ ಮಹಿಳೆ ಜತೆ ಅಫ್ತಾಬ್ ಪೂನಾವಾಲಾ ಡೇಟಿಂಗ್
  • ವೃತ್ತಿಯಿಂದ ಮನೋವೈದ್ಯೆಯಾಗಿರುವ ಮಹಿಳೆಯನ್ನು ಸಂಪರ್ಕಿಸಿದ ದಿಲ್ಲಿ ಪೊಲೀಸರು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Aftab
ಹೊಸದಿಲ್ಲಿ: ತನ್ನ ಪ್ರೇಯಸಿ ಶ್ರದ್ಧಾ ವಾಲ್ಕರ್‌ಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಅಫ್ತಾಬ್ ಅಮೀನ್ ಪೂನಾವಾಲಾ, ಕೆಲವೇ ದಿನಗಳಲ್ಲಿ ಮತ್ತೊಬ್ಬ ಮಹಿಳೆ ಜತೆ ಡೇಟಿಂಗ್ ನಡೆಸಿದ್ದ. ಆಕೆ ವೃತ್ತಿಯಿಂದ ವೈದ್ಯೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.
ಶ್ರದ್ಧಾಳನ್ನು 2019ರಲ್ಲಿ ಮೊದಲ ಬಾರಿಗೆ ಭೇಟಿಯಾದ ಡೇಟಿಂಗ್ ಆಪ್ ಬಂಬಲ್‌ನಲ್ಲಿಯೇ ಈ ಮಹಿಳೆಯನ್ನು ಕೂಡ ಅಫ್ತಾಬ್ ಭೇಟಿಯಾಗಿದ್ದ ಎನ್ನಲಾಗಿದೆ. ದಿಲ್ಲಿ ಪೊಲೀಸರು ಆ ಮಹಿಳೆಯನ್ನು ಸಂಪರ್ಕಿಸಿದ್ದು, ಅವರು ಮನೋವೈದ್ಯೆ ಎಂದು ತಿಳಿಸಿದ್ದಾರೆ. ಶ್ರದ್ಧಾಳನ್ನು ಹತ್ಯೆ ಮಾಡಿದ ಬಳಿಕ ಅಫ್ತಾಬ್ ಆಕೆಯ ದೇಹದ ಭಾಗಗಳನ್ನು ಕತ್ತರಿಸಿ, ಫ್ರಿಡ್ಜ್‌ನಲ್ಲಿ ಇರಿಸಿದ್ದ.
Shraddha Walker Murder: ಮುಸ್ಲಿಂ ಹೆಸರಿನಲ್ಲಿ ಅಫ್ತಾಬ್ ಕೃತ್ಯಕ್ಕೆ ಬೆಂಬಲ: ಉತ್ತರ ಪ್ರದೇಶದಲ್ಲಿ ಕಿಡಿಗೇಡಿ ಬಂಧನ

ಎರಡು ವಾರಗಳಲ್ಲಿಯೇ ಅದೇ ಡೇಟಿಂಗ್ ಆಪ್‌ನಲ್ಲಿ ಮತ್ತೊಬ್ಬ ಮಹಿಳೆಯ ಜತೆ ಸ್ನೇಹ ಬೆಳೆಸಿದ್ದ ಅಫ್ತಾಬ್, ಆಕೆಯನ್ನು ಮನೆಗೆ ಕರೆದುಕೊಂಡು ಬಂದು ಸರಸ ಸಲ್ಲಾಪ ನಡೆಸಿದ್ದ. ಆ ವೇಳೆ ಶ್ರದ್ಧಾಳ ದೇಹದ ಭಾಗಗಳನ್ನು ಫ್ರಿಡ್ಜ್ ಮತ್ತು ಕಪಾಟುಗಳಲ್ಲಿ ಇರಿಸಿದ್ದ ಎಂದು ಈ ಹಿಂದೆ ತನಿಖೆಯಿಂದ ಬೆಳಕಿಗೆ ಬಂದಿತ್ತು.

ತನ್ನ ತನಿಖೆಗೆ ಸಂಬಂಧಿಸಿದಂತೆ ವಿವರಗಳನ್ನು ನೀಡುವಂತೆ ಬಂಬಲ್ ಡೇಟಿಂಗ್ ಆಪ್‌ಗೆ ದಿಲ್ಲಿ ಪೊಲೀಸರು ಪತ್ರ ಬರೆದಿದ್ದರು. ಅಫ್ತಾಬ್ ಇದರಲ್ಲಿ ಅನೇಕ ಮಹಿಳೆಯರ ಜತೆ ಸ್ನೇಹ ಸಂಪಾದಿಸಿದ್ದ ಎನ್ನಲಾಗಿದೆ.
Delhi Murder Case : ಹರಿಯಾಣದ ಅರಣ್ಯದಲ್ಲಿ ದೇಹದ ಭಾಗ ಇರುವ ಸೂಟ್‌ಕೇಸ್‌ ಪತ್ತೆ; ಶ್ರದ್ಧಾ ವಾಕರ್‌ ಹತ್ಯೆಗೆ ಸಂಪರ್ಕ ಇದ್ಯಾ?

ಅಫ್ತಾಬ್‌ನನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಿದ್ದು, ಬಳಿಕ ಮಂಪರು ವಿಶ್ಲೇಷಣೆ ಪರೀಕ್ಷೆಗೆ ಕೂಡ ಒಳಪಡಿಸಲಾಗಿದೆ. ಮೂರನೇ ಅವಧಿಯ ಸುಳ್ಳು ಪತ್ತೆ ಪರೀಕ್ಷೆಗಾಗಿ ಆತನನ್ನು ರೋಹಿಣಿಯ ಎಫ್‌ಎಸ್‌ಎಲ್ ಕೇಂದ್ರಕ್ಕೆ ಶುಕ್ರವಾರ ಕರೆದೊಯ್ಯಲಾಗಿತ್ತು. ಸುಮಾರು ಎರಡೂವರೆ ಗಂಟೆ ಕಾಲ ಆತನನ್ನು ಅಲ್ಲಿರಿಸಲಾಗಿತ್ತು. ಪರೀಕ್ಷೆಗೆ ಸಂಬಂಧಿಸಿದ ಪ್ರಾಥಮಿಕ, ಮುಖ್ಯ ಹಾಗೂ ಅಂತಿಮ ಹಂತದ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಎಫ್‌ಎಸ್‌ಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಅಫ್ತಾಬ್‌ನ ಪೊಲೀಸ್ ಕಸ್ಟಡಿ ಶನಿವಾರ ಅಂತ್ಯಗೊಂಡಿದ್ದು, ಆತನನ್ನು ದಿಲ್ಲಿ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆತನನ್ನು ಮತ್ತೆ ಮಂಪರು ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಇದೆ.
Shraddha Walker Murder: ಶ್ರದ್ಧಾಳನ್ನು ನಾನೇ ಕೊಂದಿದ್ದು: ಕೋರ್ಟ್‌ನಲ್ಲಿ ಒಪ್ಪಿಕೊಂಡ ಅಫ್ತಾಬ್

ಸೋಮವಾರ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಆತನ ಮಂಪರು ಪರೀಕ್ಷೆ ನಡೆಸುವ ಸಂಭವವಿದೆ. ಸುಳ್ಳು ಪತ್ತೆ ಪರೀಕ್ಷೆಯಲ್ಲಿ ಆತನಿಗೆ ಕೊಲೆಗೆ ಪ್ರಚೋದನೆ ನೀಡಿದ ಅಂಶಗಳ ಕುರಿತು ಪ್ರಶ್ನೆಗಳನ್ನು ಕೇಳಲಾಗಿದೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ