ಆ್ಯಪ್ನಗರ

ಡಿಮ್ಯಾಟ್ ಅಕೌಂಟ್ ತೆರೆದ ಸಿದ್ಧಿ ವಿನಾಯಕ

ಮುಂಬಯಿನ ಸಿದ್ಧಿವಿನಾಯಕನಿಗೆ ಷೇರ್‌ಗಳನ್ನು ಕೊಡುಗೆಯಾಗಿ ಸಲ್ಲಿಸುವುದಕ್ಕಾಗಿ ದೇಗುಲ ಟ್ರಸ್ಟ್ ಡಿಮ್ಯಾಟ್ ಅಕೌಂಟ್ ತೆರೆದಿದೆ.

ಟೈಮ್ಸ್ ಆಫ್ ಇಂಡಿಯಾ 20 Jul 2016, 2:23 pm
ಮುಂಬಯಿ: ದೇಶದ ಸಿರಿವಂತ ದೇವರುಗಳಲ್ಲಿ ಒಬ್ಬನಾಗಿರುವ ಮುಂಬಯಿನ ಸಿದ್ಧಿವಿನಾಯಕನಿಗೆ ಭಕ್ತರು ಇನ್ನು ಮುಂದೆ ಷೇರ್‌ಗಳನ್ನು ಕೊಡುಗೆಯಾಗಿ ಸಲ್ಲಿಸಲು ಅನುಕೂಲವಾಗುವಂತೆ ದೇಗುಲ ಟ್ರಸ್ಟ್ ಡಿಮ್ಯಾಟ್ ಅಕೌಂಟ್ ತೆರೆದಿದೆ.
Vijaya Karnataka Web c to accept shares
ಡಿಮ್ಯಾಟ್ ಅಕೌಂಟ್ ತೆರೆದ ಸಿದ್ಧಿ ವಿನಾಯಕ


ಬೆಸಿನೆಸ್‌ಮನ್‌ಗಳು ತಮ್ಮ ಇಚ್ಛೆ ಈಡೇರಿದರೆ ಷೇರ್‌ಗಳನ್ನು ಅರ್ಪಿಸುವುದಾಗಿ ಗಣೇಶನನ್ನು ಪ್ರಾರ್ಥಿಸಿ ಪ್ರಮಾಣ ಮಾಡುತ್ತಾರೆ. ಸ್ಟಾಕ್‌ ಮೌಲ್ಯ ಹೆಚ್ಚಿದರೆ ಷೇರ್‌ಗಳನ್ನೇ ಅರ್ಪಿಸುತ್ತಾರೆ. ಕೆಲವರು ಕಾಣಿಕೆ ಸಲ್ಲಿಸಲೆಂದೇ ಕೆಲವು ಷೇರ್‌ಗಳನ್ನು ಖರೀದಿಸುತ್ತಾರೆ. ಒಟ್ಟಿನಲ್ಲಿ ಇದು ದೇಗುಲಕ್ಕೆ ಹೆಚ್ಚಿನ ಆದಾಯ ತಂಡುಕೊಡಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ನರೇಂದ್ರ ರಾನೆ ಹೇಳಿದ್ದಾರೆ.

ಯೂನಿಯನ್ ಗವರ್ನಮೆಂಟ್ಸ್‌ ಸೆಂಟ್ರಲ್ ಡೆಪಾಸಿಟರಿ ಸರ್ವಿಸಸ್ ಅಡಿ ಎಸ್‌ಬಿಐಸಿಎಪಿ ಸಹಭಾಗಿತ್ವದಲ್ಲಿ ಟ್ರಸ್ ಡಿಮ್ಯಾಟ್ ಖಾತೆ ತೆರೆದಿದೆ.ಈಗ ಕೆಲವು ಕಂಪೆನಿಗಳ ಷೇರು ಸಲ್ಲಿಕೆಗೆ ಅವಕಾಶವಿದ್ದು, ಮುಂದೆ ಮ್ಯುಚುವಲ್ ಫಂಡ್, ಬಾಂಡ್, ಗೋಲ್ಡ್ ಎಕ್ಸಚೇಂಜ್ ಟ್ರೇಡೆಡ್ ಫಂಡ್ಗಳಿಗೂ ಅವಕಾಶ ವಿಸ್ತರಿಸಲಾಗುವುದು ಎಂದು ಟ್ರಸ್ಟ್ ತಿಳಿಸಿದೆ.

ಆನ್‌ಲೈನ್ ಮೂಲಕ ಷೇರ್‌ಗಳನ್ನು ವರ್ಗಾಯಿಸಲು ವ್ಯವಸ್ಥೆಗೊಳಿಸಲಾಗಿದೆ. ಇದು ತಿರುಪತಿ ದೇವಸ್ಥಾನದಿಂದ ತಿಳಿದು ಜಾರಿಗೊಳಿಸಿದ ಉಪಾಯ. ಅಲ್ಲಿ ಕಳೆದ ಆಗಸ್ಟ್‌ನಿಂದ ಈ ವ್ಯವಸ್ಥೆ ಜಾರಿಯಲ್ಲಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಷೇರ್‌ಗಳನ್ನು ಮಾರಾಟ ಮಾಡದೆ ಎರಡು ದಿನಗಳೊಳಗೆ ನಗದಾಗಿ ಪರಿವರ್ತಿಸಿಕೊಳ್ಳಲಾಗುವುದು.ಬಂದ ಹಣವನ್ನು ಉಳಿತಾಯ ಖಾತೆಗೆ ಜಮೆ ಮಾಡಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸೇವೆಗೆ ವಿನಿಯೋಗಿಸಲಾಗುವುದು ಎಂದು ರಾನೆ ವಿವರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ