ಆ್ಯಪ್ನಗರ

ಮುಸ್ಲಿಂ ಸ್ನೇಹಿತೆಗೆ ಕಿಡ್ನಿ ದಾನ ಮಾಡಲು ಹೊರಟಿರುವ ಸಿಖ್ ಸಖಿ

ಸಿಖ್ ಧರ್ಮೀಯಳಾಗಿರುವ ಮಂಜೋತ್ ಸಿಂಗ್ ಕೊಹ್ಲಿ (23) ಉಧಮ್‌ಪುರ್ ಜಿಲ್ಲೆಯ ನಿವಾಸಿಯಾಗಿದ್ದು ಸಾಮಾಜಿಕ ಹೋರಾಟಗಾರ್ತಿಯಾಗಿದ್ದಾಳೆ. ಸಮರೀನ್ ಅಕ್ತರ್ (22) ಮತ್ತು ಅವರದು ಬರೋಬ್ಬರಿ ನಾಲ್ಕು ವರ್ಷಗಳ ಗೆಳೆತನ.

Navbharat Times 1 Dec 2018, 11:40 am
ಉಧಮ್‌ಪುರ: ನಿಜವಾದ ಸ್ನೇಹವೆಂದರೆ ಹಾಗೆ, ಒಬ್ಬರಿಗೊಬ್ಬರು ಪ್ರಾಣ ಕೊಡಲು ಹಿಂದೆ ಮುಂದೆ ನೋಡಲಾರರು. ಇವರಿಬ್ಬರದು ಕೂಡ ಅಪರೂಪದ ಸ್ನೇಹ. ಒಬ್ಬರನೊಬ್ಬರು ಅಗಲಿರಲಾರದ ಬಂಧ. ಆಕೆ ಮುಸ್ಲಿಂ, ಈಕೆ ಸಿಖ್. ಆದರೆ ಧರ್ಮದ ಗೋಡೆಗಳು ಅವರಿಬ್ಬರ ಮಧ್ಯೆ ಏಳಲೇ ಇಲ್ಲ. ಸುಂದರ ಸ್ನೇಹದಿಂದ ಬೆಸೆದಿದ್ದರವರು.
Vijaya Karnataka Web Kidney 2


ಸಿಖ್ ಧರ್ಮೀಯಳಾಗಿರುವ ಮಂಜೋತ್ ಸಿಂಗ್ ಕೊಹ್ಲಿ (23) ಉಧಮ್‌ಪುರ್ ಜಿಲ್ಲೆಯ ನಿವಾಸಿಯಾಗಿದ್ದು ಸಾಮಾಜಿಕ ಹೋರಾಟಗಾರ್ತಿಯಾಗಿದ್ದಾಳೆ. ಸಮರೀನ್ ಅಕ್ತರ್ (22) ಮತ್ತು ಅವರದು ಬರೋಬ್ಬರಿ ನಾಲ್ಕು ವರ್ಷಗಳ ಗೆಳೆತನ.

ಸ್ವಚ್ಛಂದವಾಗಿ ಹಾರಾಡಿಕೊಂಡಿದ್ದ ಅವರಿಬ್ಬರ ಬದುಕಲ್ಲಿ ಆಘಾತವೊಂದು ಎದುರಾಯ್ತು. ಸಮರೀನ್‌ಗೆ ಕಿಡ್ನಿ ವೈಫಲ್ಯವಾಗಿತ್ತು. ಇದನ್ನು ತಿಳಿದ ಮಂಜೋತ್ ಕೂಡಲೇ ಗೆಳತಿಗೆ ಪೋನ್ ಕರೆ ಮಾಡಿ ತಾನು ಒಂದು ಮೂತ್ರಪಿಂಡವನ್ನು ದಾನ ಮಾಡುವುದಾಗಿ ಹೇಳಿದ್ದಾಳೆ. ಒಂದು ಕ್ಷಣ ಸಮರೀನ್‌ಗೆ ತಾನು ಕೇಳುತ್ತಿರುವುದು ಸತ್ಯವೆಂದು ನಂಬಲಾಗಲಿಲ್ಲ. ತನ್ನ ಗೆಳತಿಗೆ ಅಂತ ತ್ಯಾಗ ಬೇಡವೆಂದರೂ ಆಕೆ ಕೇಳಲು ತಯಾರಿರಲಿಲ್ಲ.

ಮಂಜೋತ್ ಈ ನಿರ್ಧಾರಕ್ಕೆ ಆಕೆಯ ಪರಿವಾರದ ಕಡೆಯಿಂದ ವಿರೋಧ ವ್ಯಕ್ತವಾಗಿದೆ. ಆದರೆ ಆಕೆ ಮಾತ್ರ ತನ್ನ ನಿರ್ಧಾರಕ್ಕೆ ಬದ್ಧಳಾಗಿದ್ದಾಳೆ. ನಾನು ಮತ್ತು ಸಮರೀನ್ ಭಾವನಾತ್ಮಕವಾಗಿ ಬೆಸೆದಿದ್ದೇವೆ. ನನಗೆ ಮಾನವೀಯತೆ ಮೇಲೆ ಬಹಳ ವಿಶ್ವಾಸವಿದೆ ಎನ್ನುತ್ತಾರೆ ಆಕೆ.

ಕಿಡ್ನಿ ದಾನಕ್ಕೆ ಸಂಬಂಧಿತ ಅಧಿಕಾರಿಗಳು ಅನುಮತಿ ಕೊಟ್ಟಿದ್ದಾರೆ. ಆದರು ಕೂಡ ಶಸ್ತ್ರಚಿಕಿತ್ಸೆಗೆ ವಿಳಂಬವಾಗುತ್ತಿರುವುದರಿಂದ ಸರ್ಜರಿಗೆ ಅನುಮತಿ ನೀಡುವಂತೆ ಕೋರಿ ಮಂಜೋತ್ ಕೋರ್ಟ್ ಮೆಟ್ಟಿಲೇರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ