64 ವರ್ಷದ ಪ್ರತಾಪ್ ಚಂದ್ರ ಸಾರಂಗಿ ಒಡಿಶಾದ ಬಾಲಾಸೋರ್ನಿಂದ ಇದೇ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ.
'ಒಡಿಶಾದ ಮೋದಿ', 'ನಾನಾ' ಎಂದೇ ಇವರು ಹೆಸರುವಾಸಿ. ಬಾಲ್ಯದಿಂದಲೂ ಆಧ್ಯಾತ್ಮದ ಕಡೆಗೆ ಸೆಳೆತ ಹೊಂದಿದ್ದ ಇವರು, ರಾಮಕೃಷ್ಣ ಮಠದಲ್ಲಿ ಸನ್ಯಾಸಿಯಾಗುವ ಇಚ್ಛೆ ಹೊಂದಿದ್ದರು. ತಾಯಿ ಜೀವಂತವಿದ್ದ ಕಾರಣ ಅವರ ನಿರ್ವಹಣೆ ಕರ್ತವ್ಯಕ್ಕೆ ಬದ್ಧರಾಗಿ ಗ್ರಾಮದಲ್ಲಿ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಪ್ರತಾಪ್ ಬೆರೆತರು.
ಆರ್ಎಸ್ಎಸ್, ವಿಎಚ್ಪಿ ಸಂಪರ್ಕಕ್ಕೆ ಬಂದ ಬಳಿಕ ಅವರು ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ ಗಣ ಶಿಕ್ಷಾ ಮಂದಿರ ಯೋಜನೆ ಅಡಿಯಲ್ಲಿ ಸಮರ್ ಕರಾ ಕೇಂದ್ರವನ್ನು ಆರಂಭಿಸಿದರು.
2004, 2009ರಲ್ಲಿ ನಿಲಗಿರಿ ಕ್ಷೇತ್ರದಿಂದ ಶಾಸಕರಾಗಿದ್ದರೂ ತಮಗಾಗಿ ಸ್ವಂತ ಸೂರನ್ನು ಕೂಡ ನಿರ್ಮಿಸಿಕೊಳ್ಳಲಿಲ್ಲ. ಗುಡಿಸಲಿನಲ್ಲಿ ವಾಸಮಾಡಿಕೊಂಡು, ಸೈಕಲ್ನಲ್ಲಿ ಸಂಚರಿಸುವ ಪ್ರತಾಪ್ ಸರಳತೆಗೆ ಜನಪ್ರಿಯರು.
ದ್ವಿಭಾಷಾ ನಿಪುಣ : ಒಡಿಯಾ ಮತ್ತು ಸಂಸ್ಕೃತದಲ್ಲಿ ಸರಾಗವಾಗಿ ಮಾತನಾಡಬಲ್ಲ ಇವರು ಸುತ್ತಮುತ್ತಲಿನ ಗ್ರಾಮಗಳಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಸದಾ ಬೈಸಿಕಲ್ ಮೇಲೆ ಸುತ್ತುತ್ತಿರುತ್ತಾರೆ .
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಡಿಯಿಂದ ಸಾರಂಗಿ ವಿರುದ್ಧ ಸ್ಪರ್ಧಿಸಿದ್ದು ರಬಿಂದ್ರ ಕುಮಾರ್ ಜೆನಾ. ಕೋಟ್ಯಧಿಪತಿ ಅಭ್ಯರ್ಥಿ ಜೆನಾ ವಿರುದ್ಧ ಸರಳ ಸಾರಂಗಿ ಅವರ ಸ್ಪರ್ಧೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು.
12,956 ಮತಗಳ ಅಂತರದಿಂದ ಸಾರಂಗಿ ಜಯಗಳಿಸಿದ್ದರು. ಆಟೋದಲ್ಲಿ ಲೋಕಸಭಾ ಚುನಾವಣಾ ಪ್ರಚಾರವನ್ನು ಸಾರಂಗಿ ನಡೆಸಿದ್ದು ವಿಶೇಷ.
'ಒಡಿಶಾದ ಮೋದಿ', 'ನಾನಾ' ಎಂದೇ ಇವರು ಹೆಸರುವಾಸಿ. ಬಾಲ್ಯದಿಂದಲೂ ಆಧ್ಯಾತ್ಮದ ಕಡೆಗೆ ಸೆಳೆತ ಹೊಂದಿದ್ದ ಇವರು, ರಾಮಕೃಷ್ಣ ಮಠದಲ್ಲಿ ಸನ್ಯಾಸಿಯಾಗುವ ಇಚ್ಛೆ ಹೊಂದಿದ್ದರು. ತಾಯಿ ಜೀವಂತವಿದ್ದ ಕಾರಣ ಅವರ ನಿರ್ವಹಣೆ ಕರ್ತವ್ಯಕ್ಕೆ ಬದ್ಧರಾಗಿ ಗ್ರಾಮದಲ್ಲಿ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಪ್ರತಾಪ್ ಬೆರೆತರು.
ಆರ್ಎಸ್ಎಸ್, ವಿಎಚ್ಪಿ ಸಂಪರ್ಕಕ್ಕೆ ಬಂದ ಬಳಿಕ ಅವರು ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ ಗಣ ಶಿಕ್ಷಾ ಮಂದಿರ ಯೋಜನೆ ಅಡಿಯಲ್ಲಿ ಸಮರ್ ಕರಾ ಕೇಂದ್ರವನ್ನು ಆರಂಭಿಸಿದರು.
2004, 2009ರಲ್ಲಿ ನಿಲಗಿರಿ ಕ್ಷೇತ್ರದಿಂದ ಶಾಸಕರಾಗಿದ್ದರೂ ತಮಗಾಗಿ ಸ್ವಂತ ಸೂರನ್ನು ಕೂಡ ನಿರ್ಮಿಸಿಕೊಳ್ಳಲಿಲ್ಲ. ಗುಡಿಸಲಿನಲ್ಲಿ ವಾಸಮಾಡಿಕೊಂಡು, ಸೈಕಲ್ನಲ್ಲಿ ಸಂಚರಿಸುವ ಪ್ರತಾಪ್ ಸರಳತೆಗೆ ಜನಪ್ರಿಯರು.
ದ್ವಿಭಾಷಾ ನಿಪುಣ : ಒಡಿಯಾ ಮತ್ತು ಸಂಸ್ಕೃತದಲ್ಲಿ ಸರಾಗವಾಗಿ ಮಾತನಾಡಬಲ್ಲ ಇವರು ಸುತ್ತಮುತ್ತಲಿನ ಗ್ರಾಮಗಳಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಸದಾ ಬೈಸಿಕಲ್ ಮೇಲೆ ಸುತ್ತುತ್ತಿರುತ್ತಾರೆ .
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಡಿಯಿಂದ ಸಾರಂಗಿ ವಿರುದ್ಧ ಸ್ಪರ್ಧಿಸಿದ್ದು ರಬಿಂದ್ರ ಕುಮಾರ್ ಜೆನಾ. ಕೋಟ್ಯಧಿಪತಿ ಅಭ್ಯರ್ಥಿ ಜೆನಾ ವಿರುದ್ಧ ಸರಳ ಸಾರಂಗಿ ಅವರ ಸ್ಪರ್ಧೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು.
12,956 ಮತಗಳ ಅಂತರದಿಂದ ಸಾರಂಗಿ ಜಯಗಳಿಸಿದ್ದರು. ಆಟೋದಲ್ಲಿ ಲೋಕಸಭಾ ಚುನಾವಣಾ ಪ್ರಚಾರವನ್ನು ಸಾರಂಗಿ ನಡೆಸಿದ್ದು ವಿಶೇಷ.