ಆ್ಯಪ್ನಗರ

ಪತ್ನಿ ಜತೆ ಪರಾರಿಯಾದವನ ಸಹಿತ ಆತನ ಸಹೋದರಿಯನ್ನು ಮರಕ್ಕೆ ಕಟ್ಟಿ ಥಳಿಸಿದ ಪತಿ

ವಿವಾಹಿತ ಮಹಿಳೆ ಜತೆ ಪರಾರಿಯಾಗಿದ್ದ ವ್ಯಕ್ತಿ ಹಾಗೂ ಆತನ ಇಬ್ಬರು ಸಹೋದರಿಯರನ್ನು (ಸಹೋದರ ಸಂಬಂಧಿ) ಮರಕ್ಕೆ ಕಟ್ಟಿಹಾಕಿ ಗಂಟೆಗಟ್ಟಲೇ ಥಳಿಸಿರುವ ಅಮಾನುಷ ಘಟನೆ ಮಧ್ಯ ಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ.

TIMESOFINDIA.COM 16 May 2019, 3:47 pm
ಭೋಪಾಲ: ವಿವಾಹಿತ ಮಹಿಳೆ ಜತೆ ಪರಾರಿಯಾಗಿದ್ದ ವ್ಯಕ್ತಿ ಹಾಗೂ ಆತನ ಇಬ್ಬರು ಸಹೋದರಿಯರನ್ನು (ಸಹೋದರ ಸಂಬಂಧಿ) ಮರಕ್ಕೆ ಕಟ್ಟಿಹಾಕಿ ಗಂಟೆಗಟ್ಟಲೇ ಥಳಿಸಿರುವ ಅಮಾನುಷ ಘಟನೆ ಮಧ್ಯ ಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ.

ಥಳಿತಕ್ಕೊಳಗಾಗಿರುವ ವ್ಯಕ್ತಿ ವಿವಾಹಿತ ಮಹಿಳೆಯನ್ನು ಪ್ರೀತಿಸುತ್ತಿದ್ದು, ಆಕೆಯ ಜತೆ ಪರಾರಿಯಾಗಿದ್ದ. ಇದರಿಂದ ರೊಚ್ಚಿಗೆದ್ದ ಆಕೆಯ ಪತಿ, ಈ ದುಷ್ಕೃತ್ಯ ಎಸಗಿದ್ದಾನೆ. ವ್ಯಕ್ತಿ ಸಹಿತ ಯುವತಿಯರನ್ನು ಥಳಿಸಿದಷ್ಟೆ ಅಲ್ಲದೆ, ಅವರಿಗೆ ಕಿರುಕುಳು ಸಹ ನೀಡಲಾಗಿದೆ ಎಂದು ವರದಿಯಾಗಿದೆ.

ಹತ್ತಾರು ಜನರ ಸಮ್ಮುಖದಲ್ಲೇ ಈ ಅಮಾನವೀಯ ಘಟನೆ ನಡೆದಿದ್ದು, ಯಾರೊಬ್ಬರು ಸಹ ವ್ಯಕ್ತಿ ಹಾಗೂ ಆತನ ಸಹೋದರಿಯರ ರಕ್ಷಣೆಗೆ ಬಾರದಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ.

ಘಟನೆ ಸಂಬಂಧ 9 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಪೋಕ್ಸೋ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ದುಷ್ಕೃತ್ಯ ಎಸಗಿದ 9 ಜನರ ಪೈಕಿ ಮೂವರು ಮಹಿಳೆಯರು ಸೇರಿದಂತೆ ಐವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ