ಆ್ಯಪ್ನಗರ

ಪಾತಕಿ ದುಬೆಗೆ ಖಾಕಿ ಬೆಂಬಲ: ವೇಗ ಪಡೆದುಕೊಂಡ ತನಿಖೆ, ಪೊಲೀಸರಿಗೆ ಭಯ ಶುರು?

ರೌಡಿ ವಿಕಾಸ್‌ ದುಬೆಗೆ ಪೊಲೀಸ್‌ ಇಲಾಖೆಯಲ್ಲೇ ಹಲವರಿಂದ ರಹಸ್ಯ ಬೆಂಬಲದ ಕುರಿತು ಎಸ್‌ಐಟಿ ತನಿಖೆಯನ್ನ ಚುರುಕುಗೊಳಿಸಿದೆ. ಬಿಕ್ರೂ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿ ಮಹತ್ತರದ ಮಾಹಿತಿಯನ್ನ ಪಡೆದುಕೊಂಡಿದೆ.

TIMESOFINDIA.COM 13 Jul 2020, 8:29 am
ಕಾನ್ಪುರ: ಎನ್‌ಕೌಂಟರ್‌ನಲ್ಲಿ ಬಲಿಯಾದ ಗ್ಯಾಂಗ್‌ಸ್ಟರ್‌ ವಿಕಾಸ್‌ ದುಬೆಗೆ ಪೊಲೀಸ್‌ ಇಲಾಖೆಯಲ್ಲೇ ಹಲವರಿಂದ ರಹಸ್ಯ ಬೆಂಬಲದ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿ (ವಿಶೇಷ ತನಿಖಾ ತಂಡ) ಭಾನುವಾರ ಕಾನ್ಪುರ ಬಳಿಯ ಬಿಕ್ರೂ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
Vijaya Karnataka Web EcdbmzXU0AALms_


ದುಬೆಯ ತವರೂರು ಬಿಕ್ರೂದಲ್ಲಿ ಜುಲೈ 2ರಂದು ರಾತ್ರಿ ಕಾರ್ಯಾಚರಣೆಗೆ ಬಂದ ಪೊಲೀಸರ ಮೇಲೆ ಗ್ಯಾಂಗ್‌ಸ್ಟರ್‌ನ ಸಹಚರರು ದಾಳಿ ನಡೆಸಿದ ಸ್ಥಳವನ್ನು ತನಿಖಾಧಿಕಾರಿಗಳು ಪರಿಶೀಲಿಸಿದರು. ಪೊಲೀಸರ ವಾಹನವನ್ನು ತಡೆದದ್ದು ಹೇಗೆ, ಪೊಲೀಸರು ಬರುವ ಮುನ್ನವೇ ರಸ್ತೆಯಂಚಿನ ಕಟ್ಟಡಗಳ ಮೇಲೇರಿದ್ದ ದುಬೆ ಬೆಂಬಲಿಗರು ಗುಂಡಿನ ಮಳೆಗರೆದಿದ್ದು ಹೇಗೆ ಎಂಬ ಬಗ್ಗೆ ಖುದ್ದು ಪರಿಶೀಲಿಸಿ ಮಾಹಿತಿ ಪಡೆದುಕೊಂಡರು.

ಸ್ಥಳೀಯರನ್ನು ವಿಚಾರಿಸಿ ವಿವರ ಸಂಗ್ರಹಿಸಿದರು. ದುಬೆ ಬೆಳೆದು ಬಂದ ರೀತಿ ಹಾಗೂ ಆತನ ವಿರುದ್ಧ ಇರುವ ಪ್ರಕರಣಗಳ ಬಗ್ಗೆ ಜಿಲ್ಲಾ ದಂಡಾಧಿಕಾರಿಗಳಿಂದ ಎಸ್‌ಐಟಿ ತಂಡ ಮಾಹಿತಿ ಸಂಗ್ರಹಿಸಿತು. ಈ ಮುನ್ನ ಪ್ರಕರಣಗಳಲ್ಲಿ ದುಬೆಯ ಜಾಮೀನಿಗೆ ಏಕೆ ಆಕ್ಷೇಪ ಸಲ್ಲಿಸಲಿಲ್ಲ? ದುಬೆ ಸಹಚರರಿಗೆ ಶಸ್ತ್ರಾಸ್ತ್ರ ಲೈಸೆನ್ಸ್‌ ಕೊಟ್ಟಿದ್ದೇಕೆ ಎಂದು ಜಿಲ್ಲಾ ದಂಡಾಧಿಕಾರಿಗಳು ಹಾಗೂ ವಿಶೇಷ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಎಸ್‌ಐಟಿ ತಂಡ ಪ್ರಶ್ನಿಸಿತು.

ಕೇರಳ ಚಿನ್ನ ಸ್ಮಗ್ಲಿಂಗ್‌ ಪ್ರಕರಣ: ಯುಎಇ ರಾಯಭಾರ ಕಚೇರಿ ಶಾಮೀಲು? ಪ್ರಭಾವಿಗಳ ಕೈವಾಡ?

ಪೊಲೀಸರು ಮಾತ್ರವಲ್ಲದೆ, ದುಬೆಗೆ ಬೆಂಬಲ ನೀಡಿದ್ದ ರಾಜಕಾರಣಿಗಳ ಜಾಡನ್ನೂ ಎಸ್‌ಐಟಿ ಭೇದಿಸಲಿದೆ. ಜತೆಗೆ ದುಬೆ ವಿಚಾರದಲ್ಲಿ ಹಳೆಯ ಪ್ರಕರಣಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಗಮನ ಹರಿಸಲಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ