ಆ್ಯಪ್ನಗರ

ಕೇರಳ ಆರೆಸ್ಸೆಸ್‌ ಮುಖಂಡರ ಹತ್ಯೆಗೆ ಐಸಿಸ್‌ ಉಗ್ರರ ಸಂಚು

ಶ್ರೀಲಂಕಾ ಸರಣಿ ಸ್ಫೋಟ ಹಿನ್ನೆಲೆಯಲ್ಲಿ ಕೇರಳದಲ್ಲಿ ನಡೆಸುತ್ತಿರುವ ತನಿಖೆಯ ಸಂದರ್ಭದಲ್ಲಿ ಈ ವಿಷಯ ಬಹಿರಂಗಗೊಂಡಿದೆ. ಐಸಿಸ್‌ ಕೇರಳ ಘಟಕ ಆರಂಭಗೊಂಡಿರುವ ಬಗ್ಗೆ ಹೊರ ಜಗತ್ತಿಗೆ ತಿಳಿಸಲು ಇಂತಹ ಹತ್ಯೆ ನಡೆಸುವ ಯೋಜನೆಯನ್ನು ಐಸಿಸ್‌ ಹಾಕಿಕೊಂಡಿದೆ. ಈ ಘಟಕಕ್ಕೆ 'ಅನ್ಸಾರ್‌ ಉಲ್‌ ಖಲೀಫ್‌ ಕೇರಳ' ಎಂಬ ಹೆಸರಿಡಲಾಗಿದೆ. 'ಬಾಬ್‌ ಅಲ್‌ ನೂರ್‌' ಹೆಸರಿನ ತಂಡವೊಂದನ್ನು ರಚಿಸಿ, ಅದರಲ್ಲಿರುವ 25 ಮಂದಿ ನೆರವಿನಿಂದ ಮಾಹಿತಿ ಸಂಗ್ರಹಿಸಲಾಗಿದೆ ಎಂಬುದು ಎನ್‌ಐಎ ತನಿಖೆಯಿಂದ ಬೆಳಕಿಗೆ ಬಂದಿದೆ.

Vijaya Karnataka 20 May 2019, 5:00 am
ಕಾಸರಗೋಡು : ಉತ್ತರ ಕೇರಳದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರನ್ನು ಹತ್ಯೆ ಮಾಡಲು ಉಗ್ರ ಸಂಘಟನೆ ಐಸಿಸ್‌ ಸಂಚು ರೂಪಿಸಿರುವುದು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ತನಿಖೆಯಿಂದ ತಿಳಿದುಬಂದಿದೆ.
Vijaya Karnataka Web sketch to kill rss leaders by isis
ಕೇರಳ ಆರೆಸ್ಸೆಸ್‌ ಮುಖಂಡರ ಹತ್ಯೆಗೆ ಐಸಿಸ್‌ ಉಗ್ರರ ಸಂಚು


ಶ್ರೀಲಂಕಾ ಸರಣಿ ಸ್ಫೋಟ ಹಿನ್ನೆಲೆಯಲ್ಲಿ ಕೇರಳದಲ್ಲಿ ನಡೆಸುತ್ತಿರುವ ತನಿಖೆಯ ಸಂದರ್ಭದಲ್ಲಿ ಈ ವಿಷಯ ಬಹಿರಂಗಗೊಂಡಿದೆ. ಐಸಿಸ್‌ ಕೇರಳ ಘಟಕ ಆರಂಭಗೊಂಡಿರುವ ಬಗ್ಗೆ ಹೊರ ಜಗತ್ತಿಗೆ ತಿಳಿಸಲು ಇಂತಹ ಹತ್ಯೆ ನಡೆಸುವ ಯೋಜನೆಯನ್ನು ಐಸಿಸ್‌ ಹಾಕಿಕೊಂಡಿದೆ. ಈ ಘಟಕಕ್ಕೆ 'ಅನ್ಸಾರ್‌ ಉಲ್‌ ಖಲೀಫ್‌ ಕೇರಳ' ಎಂಬ ಹೆಸರಿಡಲಾಗಿದೆ. 'ಬಾಬ್‌ ಅಲ್‌ ನೂರ್‌' ಹೆಸರಿನ ತಂಡವೊಂದನ್ನು ರಚಿಸಿ, ಅದರಲ್ಲಿರುವ 25 ಮಂದಿ ನೆರವಿನಿಂದ ಮಾಹಿತಿ ಸಂಗ್ರಹಿಸಲಾಗಿದೆ ಎಂಬುದು ಎನ್‌ಐಎ ತನಿಖೆಯಿಂದ ಬೆಳಕಿಗೆ ಬಂದಿದೆ.

ಆರ್‌ಎಸ್‌ಎಸ್‌ ಮುಖಂಡರಾದ ಮಾರಾಡ್‌ ಸುರೇಶ್‌, ವತ್ಸನ್‌ ತಿಲ್ಲೇಂಗೇರಿ, ಇಬ್ಬರು ಹಿರಿಯ ಹೈಕೋಟ್‌ ನ್ಯಾಯಮೂರ್ತಿಗಳು, ಹಿರಿಯ ಪೊಲೀಸ್‌ ಅಧಿಕಾರಿ ಪಿ.ಎ. ಉಣ್ಣಿರಾಜನ್‌ ಎಂಬವರ ಹತ್ಯೆ ನಡೆಸಲು ಯೋಜನೆ ಇತ್ತೆಂದು ಎನ್‌ಐಎ ತಿಳಿಸಿದೆ.

ಕೋಝಿಕೋಡ್‌ ಎನ್‌ಐಟಿಯಲ್ಲಿ ಕಲಿತ ಷಾಜೀರ್‌ ಮಂಗಲಶ್ಯೇರಿ ಅಬ್ದುಲ್ಲ ಕೇರಳ ಘಟಕ ಐಸಿಸ್‌ನಲ್ಲಿ ಅಮೀರ್‌ ಅಬು ಆಯಿಷಾ ಎಂಬ ಹೆಸರಿನಲ್ಲಿ ಗುರುತಿಸಲ್ಪಟ್ಟಿದ್ದ. ಈತ 2016ರಲ್ಲಿ ಅಫ್ಘಾನಿಸ್ತಾನದಲ್ಲಿ ಮೃತಪಟ್ಟಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ