ಹೊಸದಿಲ್ಲಿ: ಖ್ಯಾತ ಸಾಹಿತಿ ಎಸ್.ಎಲ್.ಬೈರಪ್ಪ, ರಿಲಯನ್ಸ್ ಇಂಡಸ್ಟ್ರೀಸ್ನ ಸಂಸ್ಥಾಪಕ ದಿ. ಧೀರೂಭಾಯಿ ಅಂಬಾನಿ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಬಾಲಿವುಡ್ ನಟ ಅಜಯ್ ದೇವಗನ್ ಸೇರಿದಂತೆ 56 ಪ್ರತಿಭಾವಂತ ಖ್ಯಾತನಾಮರು ಇಂದು ರಾಷ್ಟ್ರಪತಿಯಿಂದ ಪದ್ಮಪ್ರಶಸ್ತಿ ಗೌರವಕ್ಕೆ ಪಾತ್ರರಾಗುವರು.
ರಾಷ್ಟ್ರಪತಿ ಭವನದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 5 ಪದ್ಮ ವಿಭೂಷಣ, 8 ಪದ್ಮ ಭೂಷಣ ಹಾಗೂ 43 ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರಣಬ್ ಮುಖರ್ಜಿಯವರು ವಿತರಿಸಲಿದ್ದಾರೆ.
ಯಾರ್ಯಾರಿಗೆ ಪದ್ಮವಿಭೂಷಣ: ಧೀರೂಭಾಯಿ ಹೀರಾಚಂದ್ ಅಂಬಾನಿ (ಮರಣೋತ್ತರ), ಅವಿನಾಶ್ ಕಮಲಾಕರ್ ದೀಕ್ಷಿತ್, ಜಗಮೋಹನ್, ಯಾಮಿನಿ ಕೃಷ್ಣಮೂರ್ತಿ, ಶ್ರೀ ರವಿಶಂಕರ್ ಗುರೂಜಿ.
ಯಾರಿಗೆ ಪದ್ಮ ಭೂಷಣ: ಹಫೀಜ್ ಸೋರಭ್ ಕಾಂಟ್ರಾಕ್ಟರ್, ಭರ್ಜಿಂದರ್ ಸಿಂಗ್ ಹಮ್ದರ್ದ್, ಅನುಪಮ್ ಪುಷ್ಕರ್ನಾಥ್ ಖೇರ್, ಪಲ್ಲೋಂಜಿ ಶಪೂರ್ಜಿ ಮಿಸ್ಟ್ರಿ, ಸೈನಾ ನೆಹ್ವಾಲ್, ವಿನೋದ್ ರೈ, ಅಲ್ಲ ವೆಂಕಟ ರಾಮರಾವ್ ಮತ್ತು ದುವ್ವರ್ ನಾಗೇಶ್ವರ್ ರೆಡ್ಡಿ.
ಇನ್ನು ಬೈರಪ್ಪ, ಮೈಲ್ಸ್ವಾಮಿ ಅಣ್ಣಾದೊರೈ, ಮಧುರ್ ಆರ್. ಭಂಡಾರ್ಕರ್, ಅಜಯ್ ದೇವ್ಗನ್, ದೀಪಿಕಾ ಕುಮಾರಿ, ಮೊಹಮ್ಮದ್ ಇಮ್ತಿಯಾಜ್ ಖುರೇಷಿ ಸೇರಿದಂತೆ 43 ಸಾಧಕರಿಗೆ ಪದ್ಮಶ್ರೀ ಪ್ರದಾನ ಮಾಡಲಾಗುತ್ತಿದೆ.
ಗಣರಾಜ್ಯೋತ್ಸವ ದಿನದಂದು ಸರಕಾರವು 112 ಮಂದಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಿತ್ತು. ರಜನಿಕಾಂತ್, ಪ್ರಿಯಾಂಕಾ ಛೋಪ್ರಾ, ಸಾನಿಯಾ ಮಿರ್ಜಾ ಸೇರಿದಂತೆ ಉಳಿದ 56 ಗೌರವಾನ್ವಿತರಿಗೆ ಮುಂದಿನ ತಿಂಗಳು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಗುತ್ತಿದೆ.
ರಾಷ್ಟ್ರಪತಿ ಭವನದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 5 ಪದ್ಮ ವಿಭೂಷಣ, 8 ಪದ್ಮ ಭೂಷಣ ಹಾಗೂ 43 ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರಣಬ್ ಮುಖರ್ಜಿಯವರು ವಿತರಿಸಲಿದ್ದಾರೆ.
ಯಾರ್ಯಾರಿಗೆ ಪದ್ಮವಿಭೂಷಣ: ಧೀರೂಭಾಯಿ ಹೀರಾಚಂದ್ ಅಂಬಾನಿ (ಮರಣೋತ್ತರ), ಅವಿನಾಶ್ ಕಮಲಾಕರ್ ದೀಕ್ಷಿತ್, ಜಗಮೋಹನ್, ಯಾಮಿನಿ ಕೃಷ್ಣಮೂರ್ತಿ, ಶ್ರೀ ರವಿಶಂಕರ್ ಗುರೂಜಿ.
ಯಾರಿಗೆ ಪದ್ಮ ಭೂಷಣ: ಹಫೀಜ್ ಸೋರಭ್ ಕಾಂಟ್ರಾಕ್ಟರ್, ಭರ್ಜಿಂದರ್ ಸಿಂಗ್ ಹಮ್ದರ್ದ್, ಅನುಪಮ್ ಪುಷ್ಕರ್ನಾಥ್ ಖೇರ್, ಪಲ್ಲೋಂಜಿ ಶಪೂರ್ಜಿ ಮಿಸ್ಟ್ರಿ, ಸೈನಾ ನೆಹ್ವಾಲ್, ವಿನೋದ್ ರೈ, ಅಲ್ಲ ವೆಂಕಟ ರಾಮರಾವ್ ಮತ್ತು ದುವ್ವರ್ ನಾಗೇಶ್ವರ್ ರೆಡ್ಡಿ.
ಇನ್ನು ಬೈರಪ್ಪ, ಮೈಲ್ಸ್ವಾಮಿ ಅಣ್ಣಾದೊರೈ, ಮಧುರ್ ಆರ್. ಭಂಡಾರ್ಕರ್, ಅಜಯ್ ದೇವ್ಗನ್, ದೀಪಿಕಾ ಕುಮಾರಿ, ಮೊಹಮ್ಮದ್ ಇಮ್ತಿಯಾಜ್ ಖುರೇಷಿ ಸೇರಿದಂತೆ 43 ಸಾಧಕರಿಗೆ ಪದ್ಮಶ್ರೀ ಪ್ರದಾನ ಮಾಡಲಾಗುತ್ತಿದೆ.
ಗಣರಾಜ್ಯೋತ್ಸವ ದಿನದಂದು ಸರಕಾರವು 112 ಮಂದಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಿತ್ತು. ರಜನಿಕಾಂತ್, ಪ್ರಿಯಾಂಕಾ ಛೋಪ್ರಾ, ಸಾನಿಯಾ ಮಿರ್ಜಾ ಸೇರಿದಂತೆ ಉಳಿದ 56 ಗೌರವಾನ್ವಿತರಿಗೆ ಮುಂದಿನ ತಿಂಗಳು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಗುತ್ತಿದೆ.