ಆ್ಯಪ್ನಗರ

ಅಮೇಠಿಗೆ ನಾನು 'ಅತಿಥಿ'ಯಲ್ಲ, ಕಾಯಂ ನಿವಾಸಿ: ಸ್ಮೃತಿ ಇರಾನಿ

'ಅಮೇಠಿಗೆ ಇದುವರೆಗೂ ಸಿಗದೆ ಇದ್ದ ಮತ್ತು ಸಿಗಲೇಬೇಕಾದ ಸೌಲಭ್ಯಗಳನ್ನು ಒದಗಿಸುವ ಸಚಿವೆ ಸ್ಮೃತಿ ಇರಾನಿ ಅವರ ಉದ್ದೇಶವನ್ನು ಬೆಂಬಲಿಸಲು ನಾನು ಇಲ್ಲಿಗೆ ಆಗಮಿಸಿದ್ದೇನೆ. ಈ ಕ್ಷೇತ್ರದಲ್ಲಿ ಸಚಿವೆಯನ್ನು ಭೇಟಿಯಾಗಿ ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳಲು ಜನತೆಗೆ ಅನುಕೂಲವಾಗುವಂತೆ ನನ್ನ ಸಚಿವಾಲಯ (ಪಿಡಬ್ಲ್ಯುಡಿ) ಸರಕಾರಿ ಅತಿಥಿಗೃಹವೊಂದನ್ನು ಒದಗಿಸಲಿದೆ' ಎಂದು ಮೌರ್ಯ ತಿಳಿಸಿದರು.

TNN 23 Jun 2019, 10:37 am
ಅಮೇಠಿ: ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಶೀಘ್ರವೇ ಅಮೇಠಿಯ ಗೌರಿಗಂಜ್‌ನಲ್ಲಿ ಶೀಘ್ರವೇ ಸ್ವಂತ ಮನೆ ಮಾಡಿಕೊಂಡು ನೆಲೆಸಲಿದ್ದಾರೆ. ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಪಿಡಬ್ಲ್ಯುಡಿ ಸಚಿವ ಕೇಶವ ಪ್ರಸಾದ್ ಮೌರ್ಯ ಈ ವಿಷಯ ಪ್ರಕಟಿಸಿದರು.
Vijaya Karnataka Web Smriti Irani


ಅಮೇಠಿಯಲ್ಲಿ 30 ಕೋಟಿ ರೂ.ಗಳ ರಸ್ತೆ ನಿರ್ಮಾಣ ಯೋಜನೆಗಳು ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ ಮನೆಗಳ ಕೀಲಿಕೈ ಹಸ್ತಾಂತರ ಕಾರ್ಯಕ್ರಮ ಉದ್ಘಾಟನೆ ವೇಳೆ ಮೌರ್ಯ ಈ ವಿಷಯ ತಿಳಿಸಿದರು.

'ಅಮೇಠಿಗೆ ಇದುವರೆಗೂ ಸಿಗದೆ ಇದ್ದ ಮತ್ತು ಸಿಗಲೇಬೇಕಾದ ಸೌಲಭ್ಯಗಳನ್ನು ಒದಗಿಸುವ ಸಚಿವೆ ಸ್ಮೃತಿ ಇರಾನಿ ಅವರ ಉದ್ದೇಶವನ್ನು ಬೆಂಬಲಿಸಲು ನಾನು ಇಲ್ಲಿಗೆ ಆಗಮಿಸಿದ್ದೇನೆ. ಈ ಕ್ಷೇತ್ರದಲ್ಲಿ ಸಚಿವೆಯನ್ನು ಭೇಟಿಯಾಗಿ ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳಲು ಜನತೆಗೆ ಅನುಕೂಲವಾಗುವಂತೆ ನನ್ನ ಸಚಿವಾಲಯ (ಪಿಡಬ್ಲ್ಯುಡಿ) ಸರಕಾರಿ ಅತಿಥಿಗೃಹವೊಂದನ್ನು ಒದಗಿಸಲಿದೆ' ಎಂದು ಮೌರ್ಯ ತಿಳಿಸಿದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಅಮೇಠಿಯಲ್ಲಿ ಭರ್ಜರಿ ಜಯಗಳಿಸಿರುವ ಸ್ಮೃತಿ ಇರಾನಿ, ಕ್ಷೇತ್ರದಲ್ಲಿ ನಡೆಸಿದ ಮೊದಲ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ಬೆಂಬಲಿಗರು, ಕಾಂಗ್ರೆಸ್ ಬೆಂಬಲಿಗರೆಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನವಾಗಿ ಅಗತ್ಯ ಸಹಾಯಗಳನ್ನು ಒದಗಿಸುವುದಾಗಿ ಘೋಷಿಸಿದ್ದರು.

'ಸುಮಾರು 4 ಲಕ್ಷ ಜನರು ಕಾಂಗ್ರೆಸ್ ಪರ ಮತ ಹಾಕಿದ್ದೀರಿ ಎಂಬುದು ನನಗೆ ಗೊತ್ತು. ಆದರೆ ಅದಕ್ಕಾಗಿ ಯಾರೂ ಚಿಂತಿಸಬೇಕಿಲ್ಲ. ಉಜ್ವಲಾ, ಪಿಎಂಎವೈ, ಸ್ವಚ್ಛ ಭಾರತ್‌ನಂತಹ ಕೇಂದ್ರೀಯ ಯೋಜನೆಗಳ ವಿಚಾರದಲ್ಲಿ ಯಾರಿಗೂ ತಾರತಮ್ಯ ಮಾಡುವುದಿಲ್ಲ' ಎಂದು ಸ್ಮೃತಿ ಇರಾನಿ ನುಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ