ಆ್ಯಪ್ನಗರ

ಹಾವು ಕಡಿತ, ಮ್ಯಾನ್‌ಹೋಲ್ ಸಾವಿಗೂ ಪ್ರಕೃತಿ ವಿಕೋಪ ಪರಿಹಾರ

ಹಾವು ಕಡಿತ, ದೋಣಿ ದುರಂತ, ಒಳಚರಂಡಿ ಸ್ವಚ್ಚಗೊಳಿಸುವ ವೇಳೆ ಮ್ಯಾನ್‌ಹೋಲ್‌ ಬಿದ್ದು ಮೃತಪಡುವುದು ಸೇರಿದಂತೆ ಅನೇಕ ಅವಘಡಗಳನ್ನು ಉತ್ತರ ಪ್ರದೇಶ ಸರಕಾರವು ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿ ಸೇರಿಸಿದೆ.

Vijaya Karnataka 6 Aug 2018, 10:53 am
ಶಹಜಹಾನ್‌ಪುರ: ಹಾವು ಕಡಿತ, ದೋಣಿ ದುರಂತ, ಒಳಚರಂಡಿ ಸ್ವಚ್ಚಗೊಳಿಸುವ ವೇಳೆ ಮ್ಯಾನ್‌ಹೋಲ್‌ ಬಿದ್ದು ಮೃತಪಡುವುದು ಸೇರಿದಂತೆ ಅನೇಕ ಅವಘಡಗಳನ್ನು ಉತ್ತರ ಪ್ರದೇಶ ಸರಕಾರವು ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿ ಸೇರಿಸಿದೆ.
Vijaya Karnataka Web snake bite


ಭೂಕಂಪ ಹಾಗೂ ಪ್ರಾಕೃತಿಕ ವಿಕೋಪಗಳಿಗಷ್ಟೇ ಸೀಮಿತವಾಗಿದ್ದ 4 ಲಕ್ಷ ರೂ. ಪರಿಹಾರ ಮೊತ್ತ ಇನ್ಮುಂದೆ ಹಾವು ಕಡಿತ, ದೋಣಿ ದುರಂತ, ಮ್ಯಾನ್‌ಹೋಲ್‌, ಬೋರ್‌ವೆಲ್‌ಗೆ ಬಿದ್ದು ಮೃತಪಡುವುದು, ಅನಿಲ ಸೋರಿಕೆಯಿಂದ ಸಾವನ್ನಪ್ಪುವ ಪ್ರಕರಣಗಳಲ್ಲೂ ಸಿಗಲಿದೆ. ರಾಜ್ಯ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿ ಬರುವ ಪ್ರಕರಣಗಳ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಭಾನುವಾರ ಘೋಷಿಸಿದರು. ಇದಕ್ಕೂ ಮೊದಲು ಅವರು ಲಿಖಿಂಪುರ ಗ್ರಾಮದ ಸಮೀಪದ ಶಾರದಾ ನಗರ ಬ್ಯಾರೇಜ್‌ನ ಪ್ರವಾಹ ಸಂತ್ರಸ್ತರ ಜತೆ ಮಾತನಾಡಿ ಅಹವಾಲು ಸ್ವೀಕರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ