ಆ್ಯಪ್ನಗರ

ಸ್ನೈಪಿಂಗ್ ಶಿರಚ್ಛೇದಕ್ಕಿಂತಲೂ ಭೀಕರ, ಪಾಕ್ ದಾಳಿಗೆ ಪ್ರತೀಕಾರ ತೀರಿಸಿಯೇ ಸಿದ್ಧ: ಸೇನೆ ಎಚ್ಚರಿಕೆ

ಶಿರಚ್ಛೇದನದಂತಹ ಕೃತ್ಯಕ್ಕೆ ಸಮವಾಗಿರುವ ಸ್ನೈಪರ್ ಬಳಕೆ ಮಾಡುತ್ತಿರುವ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಸೇನೆ ಎಚ್ಚರಿಸಿದೆ.

TIMESOFINDIA.COM 25 Dec 2018, 10:53 am
ಹೊಸದಿಲ್ಲಿ: ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಪಾಕಿಗಳು ಸ್ನೈಪರ್ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
Vijaya Karnataka Web India


ಶಿರಚ್ಛೇದನದಂತಹ ಕೃತ್ಯಕ್ಕೆ ಸಮವಾಗಿರುವ ಸ್ನೈಪರ್ ಬಳಕೆ ಮಾಡುತ್ತಿರುವ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಸೇನೆ ಎಚ್ಚರಿಸಿದೆ.

ಮೋರ್ಟರ್‌ಗಳು, ಫಿರಂಗಿ ಸೇರಿದಂತೆ ಟ್ಯಾಂಕರ್‌ಗಳನ್ನು ಉಡಾಯಿಸಬಲ್ಲ ಕ್ಷಿಪಣಿಗಳಿಗಿಂತ ಸ್ನೈಪರ್ ಕಾರ್ಯಾಚರಣೆ ಪ್ರಯೋಗ ಭೀಕರ ಪರಿಣಾಮಕಾರಿದ್ದು, ತೀವ್ರ ಭಯ ಹುಟ್ಟಿಸುವಂತಹ ಅಸ್ತ್ರವಾಗಿದೆ ಎಂದು ಹಿರಿಯ ಸೇನಾಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಶುಕ್ರವಾರ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಜುಮ್ಗುಂಡ್ ಎಂಬಲ್ಲಿ ಪಾಕಿಗಳು ನಡೆಸಿದ ಸ್ನೈಪಿಂಗ್ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಇಬ್ಬರು ಕಿರಿಯ ಅಧಿಕಾರಿಗಳು ಅಸುನೀಗಿದ್ದು, ಪ್ರತೀಕಾರ ತೀರಿಸಿಕೊಳ್ಳಲು ಭಾರತ ಸಕಲ ಸಿದ್ಧತೆ ನಡೆಸುತ್ತಿದೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತೀಕಾರ ತೀರಿಸಿಕೊಳ್ಳಲು ಸ್ಥಳ ಹಾಗೂ ಸಮಯವನ್ನು ಭಾರತೀಯ ಸೇನೆ ನಿರ್ಧರಿಸಲಿದೆ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಆದರೆ, ಭಾರತೀಯ ಸೇನೆ ಈಗಲೂ ಸಹ ರಷ್ಯಾ ಮೂಲದ 7.62 ಮಿ.ಮೀ ಸಾಮರ್ಥದ ಅರೆ ಸ್ವಯಂ ಚಾಲಿತ ಸ್ನೈಪರ್ ರೈಫಲ್‌ಗಳನ್ನೇ ಬಳಕೆ ಮಾಡುತ್ತಿದೆ. ಈ ರೈಫಲ್‌ಗಳು 1960ರ ದಶಕದಲ್ಲಿ ವಿನ್ಯಾಸಗೊಂಡಿದ್ದು, ಸೀಮಿತ (800 ಮೀಟರ್) ದೂರದ ಗುರಿ ತಲುಪಲು ಮಾತ್ರ ಶಕ್ತವಾಗಿವೆ. ಭಾರತೀಯ ಸೇನೆ ದೀರ್ಘ ಕಾಲದಿಂದಲೂ 8.6 ಎಂಎಂ ಗಾತ್ರದ 5,719 ಹೊಸ ಸ್ನೈಪರ್‌ಗಳ ಸೇರ್ಪಡೆ ಯತ್ನದಲ್ಲಿದೆ. ಈ ಅತ್ಯಾಧುನಿಕ ಸ್ನೈಪರ್ 1200 ಮೀಟರ್ ದೂರದ ಗುರಿ ತಲುಪುವ ಸಾಮರ್ಥ್ಯ ಹೊಂದಿರುತ್ತದೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ