ಆ್ಯಪ್ನಗರ

ಯೋಧನ ಅಪಹರಣವಾಗಿಲ್ಲ: ರಕ್ಷಣಾ ಸಚಿವಾಲಯ

ಜಮ್ಮು ಮತ್ತು ಕಾಶ್ಮೀರ ಇನ್‌ಫ್ರೆಂಟಿಯ ಯೋಧ ಮೊಹಮ್ಮದ್ ಯಾಸೀನ್ ಭಟ್ ಅವರು ರಜೆಯ ಮೇಲೆ ಮನೆಗೆ ತೆರಳಿದ್ದಾಗ ಅವರನ್ನು ಅಪಹರಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿತ್ತು. ಬುದ್ಗಾಮ್ ಜಿಲ್ಲೆಯ ಖ್ವಾಜಿಪೋರಾ ಚಡೂರಾ ಪ್ರದೇಶದಲ್ಲಿರುವ ಮನೆಯಲ್ಲಿದ್ದಾಗ ಉಗ್ರರು ಅವರನ್ನು ಎಳೆದೊಯ್ದಿದ್ದಾರೆ, ಎಂದು ಹೇಳಲಾಗಿತ್ತು.

TIMESOFINDIA.COM 9 Mar 2019, 10:43 am
ಬುದ್ಗಾಮ್: ಯೋಧ ಮೊಹಮ್ಮದ್ ಯಾಸೀನ್ ಭಟ್ (27) ಅಪಹರಣವಾಗಿದೆ ಎಂಬುದು ಸುಳ್ಳು ಸುದ್ದಿ, ಅವರು ಸುರಕ್ಷಿತವಾಗಿದ್ದಾರೆ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ.
Vijaya Karnataka Web soldier



ಜಮ್ಮು ಮತ್ತು ಕಾಶ್ಮೀರ ಇನ್‌ಫ್ರೆಂಟಿಯ ಯೋಧ ಮೊಹಮ್ಮದ್ ಯಾಸೀನ್ ಭಟ್ ಅವರು ರಜೆಯ ಮೇಲೆ ಮನೆಗೆ ತೆರಳಿದ್ದಾಗ ಅವರನ್ನು ಅಪಹರಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿತ್ತು. ಬುದ್ಗಾಮ್ ಜಿಲ್ಲೆಯ ಖ್ವಾಜಿಪೋರಾ ಚಡೂರಾ ಪ್ರದೇಶದಲ್ಲಿರುವ ಮನೆಯಲ್ಲಿದ್ದಾಗ ಉಗ್ರರು ಅವರನ್ನು ಎಳೆದೊಯ್ದಿದ್ದಾರೆ, ಎಂದು ಹೇಳಲಾಗಿತ್ತು.


ಫೆಬ್ರವರಿ 26 ರಿಂದ ಮಾರ್ಚ್ 31 ರವರೆಗೆ ಭಟ್ ರಜೆಯಲ್ಲಿದ್ದಾರೆ.

ಈ ಸುದ್ದಿ ಜೂನ್ 14, 2018 ರಂದು ಅಪಹರಣ ಮತ್ತೆ ಹತ್ಯೆಗೀಡಾದ ಮತ್ತು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ರೈಫಲ್ ಮ್ಯಾನ್ ಔರಂಗಜೇಬ್ ಹತ್ಯೆ ಪ್ರಕರಣವನ್ನು ನೆನಪಿಸಿತ್ತು. ಈದ್ ಆಚರಿಸಲು ಮನೆಗೆ ತೆರಳುತ್ತಿದ್ದ ಔರಂಗ್‌ಜೇಬ್ ಅವರನ್ನು ಪುಲ್ವಾಮದ ಗಾಸು ಗ್ರಾಮದಲ್ಲಿ ಅಪಹರಿಸಲಾಗಿತ್ತು.

ಪುಲ್ವಾಮಾ ಜಿಲ್ಲೆಯ ಕಲಾಂಪೋರಾದಲ್ಲಿ ಗುಂಡೇಟು ತಗುಲಿದ್ದ ಅವರ ಶವ ಪತ್ತೆಯಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ