ಆ್ಯಪ್ನಗರ

ಪುಲ್ವಾಮ ದಾಳಿ ಕೆಲವರಿಗೆ ನೋವು ತಂದಿರಲಿಲ್ಲ ಎನ್ನುವುದನ್ನು ದೇಶ ಮರೆಯುವುದಿಲ್ಲ: ವಿಪಕ್ಷಗಳ ವಿರುದ್ಧ ಮೋದಿ ಕಿಡಿ

ಭಯೋತ್ಪಾದನೆ ಹಾಗೂ ಶಾಂತಿ ಬಗ್ಗೆ ಮಾತನಾಡಿದ ಮೋದಿ, ಶಾಂತಿ ಎಂದರೆ ಒಗ್ಗಟ್ಟು ಹಾಗೂ ಸಾಮರಸ್ಯ ಎಂದರೆ ಮಾನವೀಯತೆಯಾಗಿದೆ. ಹಿಂಸೆ ಹಾಗೂ ಭಯೋತ್ಪಾದನೆಯಿಂದ ಶಾಂತಿ ಹಾಗೂ ನೆಮ್ಮದಿ ಇರುವುದಿಲ್ಲ ಎಂದು ತಿಳಿಸಿದರು. ಅಲ್ಲದೆ ಎಲ್ಲಾ ದೇಶಗಳು ಈಗ ಭಯೋತ್ಪಾದನೆ ವಿರುದ್ಧ ಒಗ್ಗಟ್ಟಾಗಬೇಕಿದೆ ಎಂದು ಕರೆ ನೀಡಿದರು.

Vijaya Karnataka Web 31 Oct 2020, 11:50 am
ಕೆವಾಡಿಯಾ: ಪುಲ್ವಾಮಾ ಉಗ್ರರ ದಾಳಿ ವೇಳೆ ಯೋಧರ ಬಲಿದಾನ ಕೆಲವರಿಗೆ ದುಃಖ ತಂದಿರಲಿಲ್ಲ ಎಂಬ ವಿಚಾರವನ್ನು ಈ ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ವಿಪಕ್ಷಗಳಿಗೆ ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ. ಶನಿವಾರ ಗುಜರಾತ್ ನ ಕೆವಾಡಿಯಾದಲ್ಲಿ ನರ್ಮದಾ ನದಿ ತೀರದಲ್ಲಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 145ನೇ ಜಯಂತಿ ಹಿನ್ನೆಲೆ ರಾಷ್ಟ್ರೀಯ ಏಕತಾ ದಿನದ ಪರೇಡ್ ವೀಕ್ಷಣೆ ಬಳಿಕ ಪ್ರಧಾನಿ ಮೋದಿ ಮಾತನಾಡಿದರು.
Vijaya Karnataka Web EloOT3uU0AAHVFm


ಪುಲ್ವಾಮಾ ದಾಳಿಯ ಬಗ್ಗೆ ರಾಜಕೀಯ ಮಾಡುವ ವಿಪಕ್ಷಗಳ ವಿರುದ್ಧ ಕಿಡಿಕಾರಿದ ಪ್ರಧಾನಿ ರಾಷ್ಟ್ರದ ಹಿತದೃಷ್ಟಿಯಿಂದ ಹಾಗೆ ಮಾಡದಂತೆ ವಿನಂತಿಸಿದರು. ಮಾತು ಮುಂದುವರಿಸಿದ ಪ್ರಧಾನಿ ಮೋದಿ, "ರಾಜಕೀಯ ಪಕ್ಷಗಳು ಹಾಗೂ ನಾಯಕರು ಇಂತಹ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ನಾನು ಆಗ್ರಹಿಸುತ್ತೇನೆ. ಏಕೆಂದರೆ ದೇಶದ ವಿರೋಧಿಗಳು ಇವರನ್ನು ಬಳಿಸಿಕೊಂಡು ದೇಶಕ್ಕೆ ಹಾನಿ ಮಾಡುತ್ತಾರೆ" ಎಂದು ವಿಪಕ್ಷಗಳಿಗೆ ಎಚ್ಚರಿಕೆ ನೀಡಿದರು. ಅಲ್ಲದೇ ಪಾಕಿಸ್ತಾನದ ಸಂಸತ್‌ ಮೂಲಕ ಇದೀಗ ಸತ್ಯ ಹೊರಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಇನ್ನು ಭಯೋತ್ಪಾದನೆ ಹಾಗೂ ಶಾಂತಿ ಬಗ್ಗೆ ಮಾತನಾಡಿದ ಮೋದಿ, ಶಾಂತಿ ಎಂದರೆ ಒಗ್ಗಟ್ಟು ಹಾಗೂ ಸಾಮರಸ್ಯ ಎಂದರೆ ಮಾನವೀಯತೆಯಾಗಿದೆ. ಹಿಂಸೆ ಹಾಗೂ ಭಯೋತ್ಪಾದನೆಯಿಂದ ಶಾಂತಿ ಹಾಗೂ ನೆಮ್ಮದಿ ಇರುವುದಿಲ್ಲ ಎಂದು ತಿಳಿಸಿದರು. ಅಲ್ಲದೆ ಎಲ್ಲಾ ದೇಶಗಳು ಈಗ ಭಯೋತ್ಪಾದನೆ ವಿರುದ್ಧ ಒಗ್ಗಟ್ಟಾಗಬೇಕಿದೆ.

ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ; ಪ್ರಧಾನಿ ಮೋದಿ ಪುಷ್ಪನಮನ

ಭಾರತ ಯಾವಾಗಲೂ ಭಯೋತ್ಪಾದನೆ ವಿರುದ್ಧ ಹೋರಾಡುತ್ತದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ಸಂಸದ ಅವರ ಸಂಸತ್ತಿನಲ್ಲಿ ಪುಲ್ವಾಮ ದಾಳಿ ಇಮ್ರಾನ್‌ ಖಾನ್‌ ಸರಕಾರ ಮಾಡಿಸಿದ ಕೃತ್ಯ ಎಂದು ಘೋಷಿಸುವ ಮೂಲಕ ರಾಕ್ಷಿಸ ಪ್ರವೃತ್ತಿ ಮೆರೆದಿದ್ದರು. ಇದು ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವಿನ ವಾಕ್ಸಮರಕ್ಕೂ ಕಾರಣವಾಗಿತ್ತು.

ಏಕತಾ ರ‍್ಯಾಲಿಯಲ್ಲಿ ಭಾಗಿ!
ಇನ್ನು ಇದಕ್ಕೂ ಮೊದಲು ಭಾರತದ ಮಾಜಿ ಗೃಹ ಮಂತ್ರಿ ಹಾಗೂ ಉಕ್ಕಿನ ಮನುಷ್ಯ ಜನ್ಮ ದಿನದ ಹಿನ್ನೆಲೆ ಆಯೋಜನಾಗಿದ್ದ ರಾಷ್ಟ್ರೀಯ ಏಕತಾ ದಿನದ ಪರೇಡ್ ವೀಕ್ಷಿಸಿದರು. ಪರೇಡ್‌ನಲ್ಲಿ ಸೇನೆಯ ವಿವಿಧ ವಿಭಾಗಗಳಿಂದ ಯುದ್ಧ ಸಲಕರಣೆಗಳ ಪ್ರದರ್ಶನ ನಡೆಯಿತು. ಮೈನವಿರೇಳಿಸುವ ರೀತಿಯ ಸಾಹಸಗಳು ಕಂಡುಬಂದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ