ಆ್ಯಪ್ನಗರ

ಮತ್ತೆ ಸರ್ಜಿಕಲ್ ದಾಳಿ ನಡೆದಿರುವ ಸುಳಿವು ನೀಡಿದ ರಾಜನಾಥ್ ಸಿಂಗ್?

ಸರ್ಜಿಕಲ್ ದಾಳಿಯ ಎರಡನೇ ವರ್ಷಾಚರಣೆಯ ಈ ಸಂದರ್ಭದಲ್ಲಿ ಮತ್ತೆ ಸರ್ಜಿಕಲ್ ದಾಳಿ ನಡೆದಿರಬಹುದಾದ ಬಗ್ಗೆ ಸುಳಿವು ನೀಡಿದ್ದಾರೆ ಕೇಂದ್ರ ಸಚಿವ ರಾಜನಾಥ್ ಸಿಂಗ್.

TIMESOFINDIA.COM 29 Sep 2018, 9:59 am
ಮುಜಾಫರ್‌ನಗರ: ಪಾಕ್ ಗಡಿ ಭದ್ರತಾ ಪಡೆಯ ಸೈನಿಕರು, ಬಿಎಸ್ಎಫ್ ಮುಖ್ಯಪೇದೆ ನರೇಂದ್ರ ಸಿಂಗ್‌ ಅವರ ಕತ್ತು ಸೀಳಿ ಹತ್ಯೆಗೈದಿದ್ದಕ್ಕೆ ಪ್ರತೀಕಾರವಾಗಿ ನಮ್ಮ ಸೇನೆ ಈಗಾಗಲೇ ಪ್ರತೀಕಾರ ತೀರಿಸಿಕೊಂಡಿರುವ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸುಳಿವು ನೀಡಿದ್ದಾರೆ.
Vijaya Karnataka Web raj


ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ನಡೆದ ಬಿಎಸ್‍ಎಫ್ ಯೋಧ ನರೇಂದ್ರ ಸಿಂಗ್ ಹತ್ಯೆ ಉಲ್ಲೇಖಿಸಿ ಮಾತನಾಡಿರುವ ಅವರು, 'ಎರಡು-ಮೂರು ದಿನಗಳ ಹಿಂದೆ ಏನೋ ದೊಡ್ಡದು ನಡೆದಿದೆ. ಆ ಬಗ್ಗೆ ಸದ್ಯ ಬಹಿರಂಗ ಪಡಿಸಲಾಗದು. ಎಲ್ಲವೂ ನಾವಂದುಕೊಂಡ ಹಾಗೇ ಆಗಿದೆ. ಅಷ್ಟೇ ಅಲ್ಲ, ಭವಿಷ್ಯದಲ್ಲಿ ಏನೇನೆಲ್ಲ ಆಗಲಿದೆ ಎಂಬುದನ್ನು ಕಾದು ನೋಡಿ' ಎಂದು ನಿಗೂಢವಾಗಿ ಮಾತನಾಡಿದ್ದಾರೆ.

ಪಾಕಿಸ್ತಾನಿ ಪಡೆಗಳಿಂದಲೇ ಭಾರತೀಯ ಯೋಧ ನರೇಂದ್ರ ಸಿಂಗ್‌ ಹತ್ಯೆ

ಭಾರೀ ಪ್ರಮಾಣದ ಶೆಲ್ ದಾಳಿ ಮೂಲಕ ಪಾಕಿಸ್ತಾನ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ್ದೇವೆ, ಎಂದು ಬಿಎಸ್‌ಎಫ್ ಮೂಲಗಳು ತಿಳಿಸಿವೆ.

ಭಗತ್ ಸಿಂಗ್ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ, ನಗರದಲ್ಲಿ ಅವರ ಪ್ರತಿಮೆ ಅನಾವರಣ ಮಾಡಿ ಮಾತನಾಡಿದ ಕೇಂದ್ರ ಸಚಿವರು, ' ನೀವೇ ಮೊದಲು ಗುಂಡು ಹಾರಿಸಬೇಡಿ. ಆ ಕಡೆಯಿಂದ ಒಂದು ಗುಂಡು ಭಾರತದ ಗಡಿ ಪ್ರವೇಶಿಸಿದರೆ, ಲೆಕ್ಕ ಇಡದೇ ಗುಂಡು ಹಾರಿಸಿ ಎಂದು ಯೋಧರಿಗೆ ಸೂಚನೆ ನೀಡಿದ್ದೆ' ಎಂದು ತಿಳಿಸಿದ್ದಾರೆ.

2016ರಲ್ಲಿ ನಡೆದ ಸರ್ಜಿಕಲ್ ದಾಳಿಯನ್ನು ಮೆಲುಕು ಹಾಕಿದ ಅವರು, ಪ್ರಧಾನಿ ತಮ್ಮ ಪ್ರಬಲ ಇಚ್ಛಾಶಕ್ತಿಯನ್ನು ಸಾಬೀತುಪಡಿಸಿದ ದಿನವದು. ಮುನ್ನಡೆಯಿರಿ ಎಂದು ಪ್ರಧಾನಿ ನೀಡಿದ ಸೂಚನೆ ಮೇರೆಗೆ ಪಾಕ್ ಆಕ್ರಮಿತ ಕಾಶ್ಮೀರ ದಾಟಿ ಅವರ ನೆಲೆಗೆ ನುಗ್ಗಿದ ನಮ್ಮ ಸೈನಿಕರು ಶತ್ರುಗಳ ರುಂಡ ಚೆಂಡಾಡಿದ್ದರು. ವಿಶೇಷವೆಂದರೆ ಈ ಮಿಂಚಿನ ಕಾರ್ಯಾಚರಣೆಯಲ್ಲಿ ನಮ್ಮ ಒಬ್ಬ ಕಮಾಂಡೋ ಗಾಯವಾಗಿದ್ದು ಬಿಟ್ಟರೆ, ಉಳಿದ ಕಮಾಂಡೋಗಳೆಲ್ಲ ಸುರಕ್ಷಿತವಾಗಿ ಮರಳಿದ್ದರು, ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ