ಆ್ಯಪ್ನಗರ

ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ ವಿರುದ್ಧ ಕೆಂಡಕಾರಿದ ಸೋನಿಯಾ!

ರಾಜ್‌ಘಾಟ್‌ನಲ್ಲಿ ಕಾಂಗ್ರೆಸ್‌ ಆಯೋಜಿಸಿದ್ದ ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ವಾಗ್ಯುದ್ಧ ನಡೆಸಿದ್ದಾರೆ.

Agencies 2 Oct 2019, 4:29 pm
ಹೊಸದಿಲ್ಲಿ: ಮಹಾತ್ಮಾ ಗಾಂಧಿ 150 ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ಸಮರ ನಡೆಸಿದ್ದಾರೆ.
Vijaya Karnataka Web Sonia_gandhi_1200_IANS


ಕಳೆದ ಐದು ವರ್ಷದಲ್ಲಿ ಗಾಂಧೀಜಿ ಕನಸಿನ, ಪರಿಕಲ್ಪನೆಯ ಭಾರತ ಅಂತ್ಯದತ್ತ ಸಾಗಿದೆ ಎಂದು ಸೋನಿಯಾ ಗಾಂಧಿ ಆರೋಪಿಸಿದರು.
ದಿಲ್ಲಿಯಲ್ಲಿ ಗಾಂಧಿ ಜಯಂತಿ ಅಂಗವಾಗಿ ಕಾಂಗ್ರೆಸ್‌ ಆಯೋಜಿಸಿದ್ದ ಪಾದಯಾತ್ರೆಯಲ್ಲಿ ಪಾಲ್ಗೊಂಡ ಬಳಿಕ ರಾಜ್‌ಘಾಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ ಮಾತನಾಡಿದರು.

ರಾಷ್ಟ್ರಪಿತ ಗಾಂಧಿಗೆ 150ನೇ ಜನ್ಮದಿನ : ರಾಜ್‌ಘಾಟ್‌ನಲ್ಲಿ ಗಣ್ಯರ ನಮನ

ಭಾರತ ತನ್ನ ಸಂಸ್ಕೃತಿ, ತತ್ವಾಧಾರಿತವಾಗಿಯೇ ಬೆಳೆದಿದೆ. ಆದರೆ ಕಳೆದ ಐದು ವರ್ಷದಿಂದ ಮಾತ್ರ ಗಾಂಧೀ ತತ್ವ, ಪರಿಕಲ್ಪನೆಯ ಭಾರತ ನಿರ್ಮಾಣವಾಗಿಲ್ಲ. ಕೆಲವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತತ್ವಗಳನ್ನು ಭಾರತದ ಸಂಕೇತವನ್ನಾಗಿ ಮಾರ್ಪಾಡು ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಗಾಂಧೀ ಚಿಂತನೆಯನ್ನು ಬದಿಗಿರಿಸಿ, ಸರ್ವಾಧಿಕಾರದ ಚಿಂತನೆ ಬೆಳೆಸುತ್ತಿದ್ದಾರೆ. ಇಂತಹವರಿಗೆ ಗಾಂಧಿ ಎಂದಿಗೂ ಅರ್ಥವಾಗುವುದಿಲ್ಲ ಎಂದು ಜರಿದಿದ್ದಾರೆ.

ರಾಷ್ಟ್ರಪಿತ ಗಾಂಧಿಗೆ 'ಮಹಾತ್ಮ' ಎಂದವರು ಯಾರು?

ಮಹಾತ್ಮಾ ಗಾಂಧೀಜಿ ಅವರ ಆದರ್ಶ ಹಾಗೂ ತತ್ವಗಳ ಅನುಸರಣೆ ಮಾಡುತ್ತಲೇ ಬಂದಿರುವ ಕಾಂಗ್ರೆಸ್‌, ಹಲವಾರು ವರ್ಷಗಳ ಕಾಲ, ಗಾಂಧಿ ದಾರಿಯಲ್ಲೇ ನಡೆಯುತ್ತಿದೆ. ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ದೇಶದಲ್ಲಿ ಉದ್ಯೋಗ, ಮಹಿಳಾ ಸಬಲೀಕರಣ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಅಭಿವೃದ್ಧಿ ಕಂಡಿತ್ತು. ಕಾಂಗ್ರೆಸ್‌ ಮಾತ್ರವೇ ಗಾಂಧೀಜಿಯ ತತ್ವಗಳನ್ನು ಅನುಸರಿಸುತ್ತಾ ಬಂದಿದೆ. ಅಂತೆಯೇ ಮುಂದೆಯೂ ಅನುಸರಿಸಲಿದೆ ಎಂದು ಹೇಳಿದರು.

ಬಿಜೆಪಿ ಎದುರು ಮಂಡಿಯೂರಿದ ಸೇನೆ

ಅಧಿಕಾರದಲ್ಲಿರುವವರಿಂದಲೇ ಇಂದು ಅಪರಾಧಗಳಾಗುತ್ತಿದೆ ಎಂದ ಸೋನಿಯಾ ಗಾಂಧಿ, ಮಹಿಳೆಯರು ಇಂದು ಸುರಕ್ಷಿತವಾಗಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ