ಆ್ಯಪ್ನಗರ

ಆಧುನಿಕ ಶ್ರವಣಕುಮಾರರು: ತಂದೆ-ತಾಯಿ ಹೊತ್ತು ಕನ್ವರ್ ಯಾತ್ರೆ

ಆಧುನಿಕ ಶ್ರವಣಕುಮಾರರಿವರು. ಒಮ್ಮೆ ಅವರ ಮಾತಾಪಿತೃಭಕ್ತಿಯ ಬಗ್ಗೆ ಓದಿ.

TIMESOFINDIA.COM 29 Jul 2019, 1:02 pm
ಪಾಣಿಪತ್: ವೃದ್ಧ ತಂದೆತಾಯಿಗಳನ್ನು ಹೆಗಲ ಮೇಲೆ ಹೊತ್ತು ಅವರಿಗೆ ತೀರ್ಥ ಕ್ಷೇತ್ರಗಳ ಯಾತ್ರೆ ಮಾಡಿಸಿದ ಶ್ರವಣ ಕುಮಾರನ ಪ್ರಸಂಗ 'ರಾಮಾಯಣ'ದಲ್ಲಿ ಉಲ್ಲೇಖವಾಗಿದೆ. ಮಾತಾ ಪಿತೃಗಳ ಸೇವೆಗೆ ಅನ್ವರ್ಥಕ ಹೆಸರೇ ಶ್ರವಣ ಕುಮಾರ. ಅದು ತ್ರೇತಾಯುಗದ ಕಥೆಯಾಯಿತು. ವೃದ್ಧ ತಂದೆತಾಯಿಗಳು ಭಾರ ಎಂದು ವೃದ್ಧಾಶ್ರಮಕ್ಕೆ ತಳ್ಳುವ, ಮನೆಯಿಂದ ಹೊರಹಾಕುವ ಮಕ್ಕಳೇ ಹೆಚ್ಚಿರುವ ಈ ಕಲಿಯುಗದಲ್ಲಿ ಶ್ರವಣಕುಮಾರನಂತವರು ಇರಲು ಸಾಧ್ಯವೇ?
Vijaya Karnataka Web Kanwar Yatra


ಹರಿಯಾಣಾದ ಈ ನಾಲ್ವರು ಸಹೋದರರನ್ನು ನೋಡಿದರೆ ನಿಜಕ್ಕೂ ನೀವು ಅಹುದಹುದು ಎನ್ನುತ್ತೀರ. ಈ ನಾಲ್ವರು ಸಹೋದರರು ತಮ್ಮ ತಂದೆತಾಯಿಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಕನ್ವರ್ ಯಾತ್ರೆಗೆ ಹೊರಟಿದ್ದಾರೆ. ಪಾಣಿಪತ್‌ನಿಂದ ತಮ್ಮ ಯಾತ್ರೆ ಆರಂಭಿಸಿರುವ ಅವರು ಭಾನುವಾರ ಉತ್ತರಾಖಂಡದ ಹರಿದ್ವಾರಕ್ಕೆ ಭೇಟಿ ಇತ್ತು ಉತ್ತರ ಪ್ರದೇಶದ ಶಾಮ್ಲಿ ಕಡೆ ನಡೆದಿದ್ದಾರೆ.

ವಯೋವೃದ್ಧ ತಂದೆ-ತಾಯಿಗಳನ್ನು ಎರಡು ಬುಟ್ಟಿಗಳಲ್ಲಿ ಕೂರಿಸಿಕೊಂಡು ಇಬ್ಬರು ಹೆಗಲಿಗೆ ಹಾಕಿಕೊಳ್ಳುತ್ತಾರೆ. ಅವರಿಗೆ ಆಯಾಸವಾದ ಮೇಲೆ ಉಳಿದ ಇಬ್ಬರು ತಂದೆತಾಯಿಗಳನ್ನು ತಮ್ಮ ಹೆಗಲಿಗೆ ಹಾಕಿಕೊಂಡು ನಡೆಯುತ್ತಾರೆ.

ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕನ್ವರ್ ಯಾತ್ರೆ

ಪವಿತ್ರ ಶ್ರಾವಣ ಮಾಸದಲ್ಲಿ ಶಿವನಿಗೆ ಗಂಗಾ ನದಿಯ ನೀರಿನಿಂದ ಪೂಜೆ ಸಲ್ಲಿಸುವ ಮೂಲಕ ಕನ್ವರ್ ಯಾತ್ರೆ ನಡೆಸಲಾಗುತ್ತದೆ. ಕನ್ವರಿಗಳು ಅಥವಾ ಭೋಲೆ ಎಂದು ಕರೆಸಿಕೊಳ್ಳುವ ಶಿವನ ಆರಾಧಕರು ಪ್ರತಿವರ್ಷ ಕೈಗೊಳ್ಳುವ ಧಾರ್ಮಿಕ ಯಾತ್ರೆ ಇದಾಗಿದೆ. ಈ ಯಾತ್ರೆಯಲ್ಲಿ ಕನ್ವರಿಗಳು ಹರಿದ್ವಾರ, ಗೋಮುಖ, ಗಂಗೋತ್ರಿ ಮತ್ತು ಸುಲ್ತಾನ್‌ಗಂಜ್‌ನಲ್ಲಿ ಪವಿತ್ರ ಗಂಗೋದಕದಿಂದ ಶಿವನನ್ನು ಪೂಜಿಸುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ