ಆ್ಯಪ್ನಗರ

ಕೃಷಿ ಕಾನೂನು: ಗುರುವಾರ ಅಮಿತ್ ಶಾ-ಅಮರಿಂದರ್ ಸಿಂಗ್ ನಡುವೆ ಮಹತ್ವದ ಸಭೆ!

ನಾಳಿನ(ಡಿ.03-ಗುರುವಾರ) ರೈತ ಸಭೆಗೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಂಜಾಬ್ ಮುಖ್ಯಮಂತ್ರಿ ಕ್ಯಾ. ಅಮರಿಂದರ್ ಸಿಂಗ್ ಭೇಟಿಯಾಗಲಿದ್ದು, ರೈತ ಪ್ರತಿಭಟನೆ ಕುರಿತು ಚರ್ಚಿಸಲಿದ್ದಾರೆ ಎನ್ನಲಾಗಿದೆ.

Vijaya Karnataka Web 2 Dec 2020, 10:07 pm
ಹೊಸದಿಲ್ಲಿ: ಕೇಂದ್ರದ ಕೃಷಿ ಕಾನೂನುಗಳ ಜಾರಿ ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ನಾಳೆ(ಡಿ.03-ಗುರುವಾರ) ಕೇಂದ್ರ ಮತ್ತು ರೈತ ಸಂಘಟನೆಗಳ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಿಗದಿಯಾಗಿದೆ.
Vijaya Karnataka Web Delhi Chalo
ಸಂಗ್ರಹ ಚಿತ್ರ


ಈ ಮಧ್ಯೆ ನಾಳಿನ ರೈತ ಸಭೆಗೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಂಜಾಬ್ ಮುಖ್ಯಮಂತ್ರಿ ಕ್ಯಾ. ಅಮರಿಂದರ್ ಸಿಂಗ್ ಭೇಟಿಯಾಗಲಿದ್ದು, ರೈತ ಪ್ರತಿಭಟನೆ ಕುರಿತು ಚರ್ಚಿಸಲಿದ್ದಾರೆ ಎನ್ನಲಾಗಿದೆ.

ನಾಳೆ(ಡಿ.03-ಗುರುವಾರ) ಪಂಜಾಬ್ ಮುಖ್ಯಮಂತ್ರಿ ಕ್ಯಾ. ಅಮರಿಂದರ್ ಸಿಂಗ್ ಅವರನ್ನು ಭೇಟಿಯಾಗಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ರೈತ ಪ್ರತಿಭಟನೆಯ ವಸ್ತುಸ್ಥಿತಿ ಕುರಿತು ಪರಸ್ಪರ ಚರ್ಚೆ ನಡೆಸಲಿದ್ದಾರೆ.

ಕೃಷಿ ಕಾನೂನು ರದ್ದತಿಗಾಗಿ ವಿಶೇಷ ಸಂಸತ್ ಅಧಿವೇಶನಕ್ಕೆ ಆಗ್ರಹಿಸಿದ ರೈತ ಸಂಘಟನೆಗಳು!

ಬೆಳಗ್ಗೆ 9-30ಕ್ಕೆ ಸಭೆ ನಿಗದಿಯಾಗಿದ್ದು, ಪ್ರತಿಭಟನೆ ಹಿಂಪಡೆಯಲು ಮನವೋಲಿಸುವಂತೆ ಅಮರಿಂದರ್ ಸಿಂಗ್ ಅವರಲ್ಲಿ ಅಮಿತ್ ಶಾ ಮನವಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ನಾಳಿನ ಸಭೆಗೆ ತಯಾರಿ ನಡೆಸಿರುವ ರೈತ ಸಂಘಟನೆಗಳು, ಕೃಷಿ ಕಾನೂನುಗಳ ರದ್ದತಿಗೆ ವಿಶೇಷ ಸಂಸತ್ ಅಧಿವೇಶನ ಕರೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೇಂದ್ರ-ರೈತ ಸಂಘಟನೆಗಳ ಹಗ್ಗಜಗ್ಗಾಟ: ದೆಹಲಿಯಲ್ಲಿ ರೈತರಿಗೆ ಚಳಿ ಕಾಟ!

ಆದರೆ ರೈತ ಸಭೆಗೂ ಮೊದಲೇ ಅಮಿತ್ ಶಾ ಹಾಗೂ ಅಮರಿಂದರ್ ಸಿಂಗ್ ಭೇಟಿ ಮಾಡುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ