ಆ್ಯಪ್ನಗರ

ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮ ಗಾಂಧೀಜಿ ನಿತ್ಯ ನೆನಪು!

ಮಹಾತ್ಮಾ ಗಾಂಧೀಜಿ ಅವರ ಪುತ್ಥಳಿ, ಭಾರತದಷ್ಟೇ ದಕ್ಷಿಣ ಆಫ್ರಿಕಾದಲ್ಲೂ ಜನಪ್ರಿಯ. ಆಫ್ರಿಕಾ ಖಂಡದ ಈ ದೇಶದಲ್ಲಿ ಮಹಾತ್ಮಾ ಗಾಂಧೀಜಿ ನಿತ್ಯನೂತನ. ಅವರ ನೆನಪೂ ಕೂಡಾ ಎಂದೆಂದಿಗೂ ಅಜರಾಮರ.

Vijaya Karnataka 30 Sep 2019, 7:46 pm
ಜೋಹಾನ್ಸ್‌ಬರ್ಗ್‌: ವರ್ಣಭೇದ ನೀತಿಯ ವಿರುದ್ಧ ಹೋರಾಟಕ್ಕೆ ಕಿಚ್ಚು ಹಚ್ಚಿದ ಮಹಾತ್ಮಾ ಗಾಂಧಿ, ದಕ್ಷಿಣ ಆಫ್ರಿಕಾದಲ್ಲಿ ಈಗಲೂ ನಿತ್ಯ ನೆನಪು. 1893ರಲ್ಲಿ ಪ್ರಿಟೋರಿಯಾಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಿಳಿಯನೊಬ್ಬನ ದೂರಿನ ಮೇರೆಗೆ ಕರಿಯನೆಂಬ ಕಾರಣಕ್ಕೆ ಮೋಹನದಾಸ್‌ ಕರಮಚಂದ್‌ ಗಾಂಧಿಯನ್ನು ಅಧಿಕಾರಿಗಳು ರೈಲಿನಿಂದ ಹೊರ ತಳ್ಳಿದ್ದರು. ಇದು ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಮಹಾ ಹೋರಾಟಕ್ಕೆ ನಾಂದಿಯಾಯಿತು. ಗಾಂಧಿಯೇ ಇದರ ನೇತೃತ್ವ ವಹಿಸಿದ್ದರು. ಈ ಕಾರಣಕ್ಕಾಗಿ ದಕ್ಷಿಣ ಆಫ್ರಿಕಾ ಸದಾ ಕಾಲವೂ ಗಾಂಧಿ ಅವರನ್ನು ಸ್ಮರಿಸುತ್ತದೆ. ಅದೆಷ್ಟೋ ಪ್ರತಿಮೆ, ಪುತ್ಥಳಿಗಳನ್ನು ನಿರ್ಮಿಸಿ ನಮಿಸುತ್ತಿದೆ. ಜೋಹಾನ್ಸ್‌ ಬರ್ಗ್‌ನ ಪ್ರಧಾನ ಸಾರ್ವಜನಿಕ ಬಸ್‌ ವ್ಯವಸ್ಥೆಗೂ ಗಾಂಧಿ ಹೆಸರಿಡಲಾಗಿದೆ. ಬುಧವಾರ (ಅಕ್ಟೋಬರ್ 2) ಗಾಂಧೀಜಿಯವರ 150ನೇ ಜನ್ಮದಿನ.
Vijaya Karnataka Web gandhi south africa


ಬಕ್ಕ ತಲೆ, ಧೋತಿಯೇ ಸಂಕೇತ

ಗಾಂಧೀಜಿ ಅವರು ಪೀಟರ್‌ ಮಾರಿಟ್ಜ್ಬರ್ಗ್‌, ಜೋಹಾನ್ಸ್‌ಬರ್ಗ್‌ನಲ್ಲಿ ಯುವ ವಕೀಲರಾಗಿದ್ದಾಗ ಕ್ರಾಂತಿಯ ಕಿಡಿ ಹಚ್ಚಿದ್ದರೂ ಅಲ್ಲಿರುವ ಪ್ರತಿಮೆಗಳೆಲ್ಲವೂ ನೆನಪಿಸುವುದು ಜಗತ್ತನ್ನೇ ಗೆದ್ದ ಫಕೀರ ಗಾಂಧಿಯನ್ನು. ಹಾಗಾಗಿಯೇ ಸಾಂಪ್ರದಾಯಿಕ ಬಕ್ಕತಲೆ, ಕನ್ನಡಕ ಧರಿಸಿ, ಧೋತಿ ಉಟ್ಟು ಮೇಲೊಂದು ಬಟ್ಟೆ ಹೊದ್ದುಕೊಂಡ ಗಾಂಧಿಯ ಪ್ರತಿಮೆಗಳೇ ಅಲ್ಲಿಸ್ಥಾಪನೆಯಾಗಿರುವುದು.

ಗಾಂಧಿಯ ಎರಡೂ ಮುಖ

2018ರ ಜೂನ್‌ನಲ್ಲಿ ಆಗಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಗಾಂಧಿಯ ಎರಡೂ ಮುಖ ತೋರಿಸುವ ವಿಶಿಷ್ಟ ಪ್ರತಿಮೆಯನ್ನು ಪೀಟರ್‌ ಮಾರ್ಟಿಜ್‌ಬರ್ಗ್‌ನಲ್ಲಿಉದ್ಘಾಟಿಸಿದರು. ಇದರಲ್ಲಿಒಂದು ಕಡೆಯಿಂದ ನೋಡಿದರೆ, ಪಾಶ್ಚಾತ್ಯ ಉಡುಪು ಧರಿಸಿದ ಯುವ ವಕೀಲ, ಇನ್ನೊಂದು ಕಡೆ ದ.ಆಫ್ರಿಕಾ ಬಿಟ್ಟಾಗ ಅವರು ಧರಿಸಿದ ಭಾರತೀಯ ಉಡುಗೆಯಲ್ಲಿ ತೋರಿಸಲಾಗಿದೆ.

ಎಲ್ಲೆಲ್ಲಿದೆ ಪ್ರತಿಮೆ, ಪುತ್ಥಳಿ?

- ಜೋಹಾನ್ಸ್‌ಬರ್ಗ್‌ ವೃತ್ತದಲ್ಲಿ. ಇಲ್ಲೇ ಸನಿಹದಲ್ಲಿ ಮೊದಲು ಕೋರ್ಟ್‌ ಕಟ್ಟಡವಿತ್ತು.

- 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಫೀನಿಕ್ಸ್‌ನಲ್ಲಿ ಪ್ರತಿಮೆ ಉದ್ಘಾಟಿಸಿದ್ದರು.

- ಗಾಂಧಿ ಮತ್ತು ಮಂಡೇಲಾ ಜೈಲು ವಾಸ ಅನುಭವಿಸಿದ್ದ ಜೋಹಾನ್ಸ್‌ಬರ್ಗ್‌ನ ಸಂವಿಧಾನ ಬೆಟ್ಟದಲ್ಲಿ.

- ರುಸ್ಟೆನ್‌ಬರ್ಗ್‌ ಪಟ್ಟಣದಲ್ಲಿ ಗಾಂಧಿ ಅವರ ದೇಹ ಗಾತ್ರದ ಪ್ರತಿಮೆ ಇದೆ.

- ಜೋಹಾನ್ಸ್‌ಬರ್ಗ್‌ನ ಅತ್ಯಂತ ಜನಪ್ರಿಯ ಮತ್ತು ವಿಶಾಲ ಟ್ರೇಡ್‌ ರೂಟ್‌ ಮಾಲ್‌ನ ಒಳಗಡೆ. 2011ರಲ್ಲಿ ತಾತ್ಕಾಲಿಕ ನೆಲೆಯಲ್ಲಿ ಸ್ಥಾಪಿಸಲಾಗಿದ್ದ ಇದನ್ನು ಕಾಯಂ ಮಾಡಲಾಯಿತು.

- ಜೋಹಾನ್ಸ್‌ಬರ್ಗ್‌ನ ಗಾಂಧಿ ಹಾಲ್‌ನಲ್ಲಿ.

- ಗಾಂಧಿ ಸ್ಮರಣ ಸಮಿತಿಯಿಂದ ಮಂಡೇಲಾ, ಗಾಂಧಿ ಪ್ರತಿಮೆ ಸ್ಥಾಪನೆ

- ಗಾಂಧಿ ಅವರನ್ನು ರೈಲಿನಿಂದ ಹೊರದಬ್ಬಿದ ಜಾಗದಲ್ಲಿ ಒಂದು ಫಲಕವನ್ನು ಸ್ಥಾಪಿಸಲಾಗಿದ್ದು, ಘಟನೆಯನ್ನು ನೆನಪಿಸಲಾಗಿದೆ.

ಬಿಜೆಪಿ ಸರ್ಕಾರಕ್ಕಾಗಿ ರಾಜೀನಾಮೆ ನೀಡಿದ ಎಲ್ಲರಿಗೂ ಟಿಕೆಟ್! ಅನರ್ಹರಿಗೆ ಸಿಎಂ ಭರವಸೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ