ಆ್ಯಪ್ನಗರ

ಕೇರಳಕ್ಕೆ ಮೇ 28ರಂದು ಅಪ್ಪಳಿಸಲಿದೆ ಮುಂಗಾರು

ದೇಶದ ರೈತರಿಗೆ ಹಾಗೂ ಜನ ಸಾಮಾನ್ಯರಿಗೆ ಇದು ಸಿಹಿ ಸುದ್ದಿ. ಯಾಕಂದ್ರೆ, ಈ ಬಾರಿ ಮುಂಗಾರು ಮಾರುತ ಕೇರಳಕ್ಕೆ 4 ದಿನ ಮುಂಚಿತವಾಗಿ ಅಂದ್ರೆ ಮೇ 28 ಕ್ಕೆ ಪ್ರವೇಶಿಸಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್‌ ಹೇಳಿದೆ.

TIMESOFINDIA.COM 13 May 2018, 8:54 am
ಹೊಸದಿಲ್ಲಿ: ದೇಶದ ರೈತರಿಗೆ ಹಾಗೂ ಜನ ಸಾಮಾನ್ಯರಿಗೆ ಇದು ಸಿಹಿ ಸುದ್ದಿ. ಯಾಕಂದ್ರೆ, ಈ ಬಾರಿ ಮುಂಗಾರು ಮಾರುತ ಕೇರಳಕ್ಕೆ 4 ದಿನ ಮುಂಚಿತವಾಗಿ ಅಂದ್ರೆ ಮೇ 28 ಕ್ಕೆ ಪ್ರವೇಶಿಸಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್‌ ಹೇಳಿದೆ.
Vijaya Karnataka Web southwest monsoon


ಮೇ 20 ರಂದು ಅಂಡಮಾನ್ ನಿಕೋಬಾರ್‌ ದ್ವೀಪಕ್ಕೆ ಮುಂಗಾರು ಮಾರುತ ಪ್ರವೇಶಿಸುವ ಸಾಧ್ಯತೆ ಇದೆ. ಬಳಿಕ ಅಲ್ಲಿಂದ ಶ್ರೀಲಂಕಾಗೆ ಮುಂಗಾರು ಮಾರುತ ಪ್ರವೇಶ ಮಾಡಲಿದ್ದು, ನಂತರ ಮೇ 24 ರಂದು ಬಂಗಾಳಕೊಲ್ಲಿ ಪ್ರವೇಶಿಸಲಿದೆ ಎಂದು ಸ್ಕೈಮೆಟ್ ಶನಿವಾರ ಮಾಹಿತಿ ನೀಡಿದೆ.

ಕೇರಳಕ್ಕೆ ಮೇ 28 ರಂದು ಮುಂಗಾರು ಪ್ರವೇಶಿಸಲಿದ್ದು, ನಂತರ ಭಾರತದ ಇತರೆ ಭಾಗಗಳಲ್ಲಿ ಮುಂಗಾರು ಮಳೆ ಆಗಲಿದೆ ಎಂದು ಹವಾಮಾನಶಾಸ್ತ್ರ ಮತ್ತು ಹವಾಮಾನ ಬದಲಾವಣೆಯ ಉಪಾಧ್ಯಕ್ಷ ಮಹೇಶ್‌ ಪಾಲಾವಟ್‌ ಹೇಳಿದ್ದಾರೆ.

ಸಾಮಾನ್ಯವಾಗಿ ಜೂನ್ 1 ರಂದು ಮುಂಗಾರು ಮಾರುತಗಳು ಕೇರಳವನ್ನು ಪ್ರವೇಶ ಮಾಡಿ, ನಂತರ ದೇಶದುದ್ದಕ್ಕೂ ಮುಂಗಾರು ಮಾರುತಗಳು ಹರಡಲಿದೆ. ಆದರೆ, ಈ ಬಾರಿ 4 ದಿನ ಮುಂಚಿತವಾಗಿಯೇ ಆಗಮಿಸಲಿರುವುದರಿಂದ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೆ, ಈ ಬಾರಿ ಮುಂಗಾರು ಸಾಮಾನ್ಯವಾಗಿರಲಿದೆ ಎಂದು ಈಗಾಗಲೇ ಸ್ಕೈಮೆಟ್‌ ಹಾಗೂ ಭಾರತೀಯ ಹವಾಮಾನ ಇಲಾಖೆ ಭವಿಷ್ಯ ನುಡಿದಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ