ಆ್ಯಪ್ನಗರ

ರಾಜಸ್ಥಾನ ಬಿಕ್ಕಟ್ಟು: ಟೀಮ್‌ ಪೈಲಟ್‌ ವಿಚಾರದಲ್ಲಿ ಸ್ಪೀಕರ್ ಮೊದಲು ನಿರ್ಧಾರ ತೆಗೆದುಕೊಳ್ಳಲಿ ಎಂದ ಹೈಕೋರ್ಟ್‌

ರಾಜಸ್ಥಾನದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ಈಗ ನ್ಯಾಯಾಲಯದಿಂದ ಮತ್ತೆ ಸ್ಪೀಕರ್‌ ಕಾರ್ಯಾಲಯಕ್ಕೆ ವರ್ಗಾವಣೆ ಆಗುವ ಸಾಧ್ಯತೆ ಇದೆ. ಅತೃಪ್ತ ಶಾಸಕರ ವಿಚಾರದಲ್ಲಿ ಸ್ಪೀಕರ್‌ ಮೊದಲು‌ ನಿರ್ಧಾರ ತೆಗೆದುಕೊಳ್ಳಲಿ. ಅಲ್ಲಿವರೆಗೂ ಮಧ್ಯಪ್ರವೇಶಿಸುವುದಿಲ್ಲ ಎಂದು ರಾಜಸ್ಥಾನ ಹೈಕೋರ್ಟ್‌ ಹೇಳಿದೆ.

Agencies 20 Jul 2020, 12:44 pm
ಜೈಪುರ (ರಾಜಸ್ಥಾನ): ರಾಜಸ್ಥಾನದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸ್ಪೀಕರ್‌ ನಿರ್ಧಾರ ತೆಗೆದುಕೊಳ್ಳುವವರೆಗೂ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ ಎಂದು ರಾಜಸ್ಥಾನ ಹೈಕೋರ್ಟ್‌ ಹೇಳಿದೆ. ಈ ಮೂಲಕ ರಾಜಸ್ಥಾನದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ಸ್ಪೀಕರ್‌ ವಿವೇಚನೆಗೆ ಹೈಕೋರ್ಟ್‌ ವರ್ಗಾಯಿಸಿದೆ.
Vijaya Karnataka Web speaker has to decide first on sachin pilot and rebel mlas high court told in rajasthan battle
ರಾಜಸ್ಥಾನ ಬಿಕ್ಕಟ್ಟು: ಟೀಮ್‌ ಪೈಲಟ್‌ ವಿಚಾರದಲ್ಲಿ ಸ್ಪೀಕರ್ ಮೊದಲು ನಿರ್ಧಾರ ತೆಗೆದುಕೊಳ್ಳಲಿ ಎಂದ ಹೈಕೋರ್ಟ್‌


ಅನರ್ಹತೆ ನೋಟಿಸ್‌ ಪ್ರಶ್ನಿಸಿ ರಾಜಸ್ಥಾನದ ಮಾಜಿ ಡಿಸಿಎಂ ಸಚಿನ್‌ ಪೈಲಟ್‌ ಹಾಗೂ 18 ಅತೃಪ್ತ ಕಾಂಗ್ರೆಸ್ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸುತ್ತಿರುವ ರಾಜಸ್ಥಾನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಇಂದ್ರಜಿತ್‌ ಮಹಂತಿ ಹಾಗೂ ನ್ಯಾಯಮೂರ್ತಿ ಪ್ರಶಾಂತ್‌ ಗುಪ್ತಾ ಅವರ ದ್ವಿಸದಸ್ಯ ಪೀಠ ಮೊದಲು ಸ್ಪೀಕರ್‌ ನಿರ್ಧಾರ ತಿಳಿಸಲಿ ಎಂದು ಹೇಳಿದ್ದಾರೆ.

ಇನ್ನು, ರಾಜಸ್ಥಾನ ಸ್ಪೀಕರ್‌ ಸಿ.ಪಿ.ಜೋಷಿ ಪರ ವಾದ ಮಂಡನೆ ಮಾಡಿದ ಹಿರಿಯ ವಕೀಲ ಅಭಿಷೇಕ್‌ ಮನುಸಿಂಘ್ವಿ, ಸ್ಪೀಕರ್‌ ಮತ್ತು ವಿಧಾನಸಭೆ ನ್ಯಾಯಾಂಗದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದು, ಸ್ಪೀಕರ್‌ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ಮುಂಚೆ ನ್ಯಾಯಾಲಯ ಮಧ್ಯಪ್ರವೇಶಿಸಲೂ ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ.

ಸಚಿನ್‌ ಪೈಲಟ್‌ ಮತ್ತು ತಂಡದ ಪರ ಹಿರಿಯ ವಕೀಲರಾದ ಹರೀಶ್‌ ಸಾಳ್ವೆ ಮತ್ತು ಮುಕುಲ್‌ ರೋಹಟಗಿ ವಾದಿಸುತ್ತಿದ್ದಾರೆ. ಶುಕ್ರವಾರ ವಿಚಾರಣೆ ನಡೆಸಿದ್ದ ಕೋರ್ಟ್‌ ಮಂಗಳವಾರದವರೆಗೂ ಪೈಲಟ್‌ ಮತ್ತು ಇತರ ಶಾಸಕರ ಮೇಲೆ ಯಾವುದೇ ಕ್ರಮ ಜರುಗಿಸಬಾರದು ಎಂದು ಹೇಳಿ ವಿಚಾರಣೆ ಮುಂದೂಡಿತ್ತು.

ಬಹುಮತ ಸಾಬೀತಿಗೆ ಸಜ್ಜಾದ ಅಶೋಕ್ ಗೆಹ್ಲೋಟ್: ಮಹತ್ವದ ಘಟ್ಟ ತಲುಪಿದ ರಾಜಸ್ಥಾನ ರಾಜಕೀಯ!

ಕಳೆದ ಭಾನುವಾರದಿಂದಲೂ ರಾಜಸ್ಥಾನದಲ್ಲಿ ರಾಜಕೀಯ ಹೈಡ್ರಾಮಾ ನಡೆಯುತ್ತಿದೆ. ಸಚಿನ್‌ ಪೈಲಟ್‌ ಹಾಗೂ ಅವರ ಬೆಂಬಲಿಗ ಶಾಸಕರು ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಜೊತೆಗೆ ಜುಲೈ 13-14ರಂದು ನಡೆದ ಸಿಎಲ್‌ಪಿ ಸಭೆಗೆ ಹಾಜರಾಗಿಲ್ಲ ಎಂದು ಅತೃಪ್ತರ ಮೇಲೆ ಅನರ್ಹತೆ ಅಸ್ತ್ರ ಪ್ರಯೋಗಕ್ಕೆ ಸ್ಪೀಕರ್‌ ಮುಂದಾಗಿ ನೋಟಿಸ್‌ ನೀಡಿದ್ದರು.

ಬೆಂಗಳೂರಿನತ್ತ ಹೊರಟಿಲ್ಲ ಎಂದ ಟೀಮ್ ಪೈಲಟ್: ಎಲ್ಲಿದ್ದಾರೆ ಎಂದು ಹೇಳಲು ತಯಾರಿಲ್ಲ!

ಸ್ಪೀಕರ್‌ ನಿರ್ಧಾರವನ್ನು ಪ್ರಶ್ನಿಸಿ ಪೈಲಟ್‌ ಮತ್ತು ಕ್ಯಾಂಪ್‌ ಹೈಕೋರ್ಟ್‌ ಮೆಟ್ಟಿಲೇರಿತ್ತು. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಸಚಿನ್‌ ಪೈಲಟ್‌ರನ್ನು ಡಿಸಿಎಂ ಹಾಗೂ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿತ್ತು. ನಂತರ, ಪೈಲಟ್‌ ಕೂಡ ನಾನು ಬಿಜೆಪಿ ಸೇರುವುದಿಲ್ಲ ಎಂದು ಹೇಳಿ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರೂ ಮಾತೃ ಪಕ್ಷದೊಂದಿಗೆ ಜಂಗಿ ಕುಸ್ತಿ ಮುಂದುವರೆಸಿರುವುದು ಕುತೂಹಲ ಮೂಡಿಸಿದೆ.

ಒಂದೂವರೆ ವರ್ಷದಿಂದ ಪೈಲಟ್‌ ಜೊತೆ ಮಾತಿಲ್ಲ - ಬಂಡಾಯದ ಕಥೆ ಬಿಚ್ಚಿಟ್ಟ ಗೆಹ್ಲೋಟ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ