ಆ್ಯಪ್ನಗರ

ಬೆನ್ನುಮೂಳೆಯ ಗಡ್ಡೆ ಶಸ್ತ್ರಚಿಕಿತ್ಸೆ ಬಳಿಕ ಎದ್ದು ನಿಂತ ಮಹಿಳೆ

ನಾಂದೇಡ್‌ ಮೂಲದ ಸುನೀತಾ ಅವರಿಗೆ 40 ವರ್ಷವಾಗಿದ್ದು, ಕಳೆದ ಮೂರು ತಿಂಗಳಿಂದ ಮಲಗಿದಲ್ಲೇ ಇದ್ದರು. ಆಕೆಗೆ ಕಾಲು ಮತ್ತು ಬೆನ್ನುಮೂಳೆಯಲ್ಲಿ ವಿಪರೀತವಾದ ನೋವಿನಿಂದಾಗಿ ನಿಲ್ಲುವುದು ಮತ್ತು ನಡೆಯುವುದಕ್ಕೆ ಆಗುತ್ತಿರಲಿಲ್ಲ.

Pune Mirror 14 Sep 2018, 12:44 pm
ಪುಣೆ: ನಾಂದೇಡ್‌ ಮೂಲದ ಸುನೀತಾ ಅವರಿಗೆ 40 ವರ್ಷವಾಗಿದ್ದು, ಕಳೆದ ಮೂರು ತಿಂಗಳಿಂದ ಮಲಗಿದಲ್ಲೇ ಇದ್ದರು. ಆಕೆಗೆ ಕಾಲು ಮತ್ತು ಬೆನ್ನುಮೂಳೆಯಲ್ಲಿ ವಿಪರೀತವಾದ ನೋವಿನಿಂದಾಗಿ ನಿಲ್ಲುವುದು ಮತ್ತು ನಡೆಯುವುದಕ್ಕೆ ಆಗುತ್ತಿರಲಿಲ್ಲ. ನಿತ್ಯಕರ್ಮಗಳಿಗೂ ಅವರು ಇತರರನ್ನು ಆಶ್ರಯಿಸಿದ್ದರು. ಇದಕ್ಕೆ ಕಾರಣ ಬೆನ್ನುಮೂಳೆಯಲ್ಲಿ ಕಾಣಿಸಿಕೊಂಡ ಗೆಡ್ಡೆ.
Vijaya Karnataka Web 1


ಪರೀಕ್ಷಿಸಿದ ಸಂಚೇತಿ ಆಸ್ಪತ್ರೆಯ ವೈದ್ಯರು ಸುನೀತಾ ಅವರನ್ನು ಸೆ.6ರಂದು ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದು, ಈಗ ಅವರು ಎದ್ದು ನಿಲ್ಲಲು ಶಕ್ತರಾಗಿದ್ದಾರೆ. ಇದಕ್ಕೂ ಮೊದಲು ಅವರು ಔಷಧ, ಕಿಮೊಥೆರಪಿ, ರೇಡಿಯೇಷನ್‌ ಚಿಕಿತ್ಸೆ ಪಡೆದುಕೊಂಡಿದ್ದು ಯಾವುದೇ ಪ್ರಯೋಜನವಾಗಿರಲಿಲ್ಲ.

ಸಂಚೇಥಿ ಆಸ್ಪತ್ರೆಯ ವೈದ್ಯರು ಎನ್‌ಬ್ಲಾಕ್‌ ಸ್ಪಾಂಡಿಲೆಕ್ಟೊಮಿ ಶಸ್ತ್ರಚಿಕಿತ್ಸೆ ಮಾಡಿ ಸುನೀತಾ ಅವರಿಗೆ ಹೊಸ ಬದುಕು ನೀಡಿದ್ದಾರೆ. 2015ರಲ್ಲಿ ಸುನೀತಾ ಅವರ ಗರ್ಭಕಂಠದಲ್ಲಿ ಗೆಡ್ಡೆ ಕಾಣಿಸಿಕೊಂಡಿತ್ತು.

ಸುನೀತಾ ಅವರ ಈ ಶಸ್ತ್ರಚಿಕಿತ್ಸೆಗೆ ಅತ್ಯಾಧುನಿಕ ನ್ಯೂರೊಮಾನಿಟರ್‌ ಎಂಬ ಯಂತ್ರವನ್ನು ಬಳಸಲಾಗಿದೆ. ಶಸ್ತ್ರಚಿಕಿತ್ಸೆಯಾಗಿ ಐದು ದಿನದೊಳಗೆ ಅವರು ಡಿಸ್ಚಾರ್ಜ್‌ ಆಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ