ಆ್ಯಪ್ನಗರ

ಬುರಾರಿ ಬಂಗಲೆಯಲ್ಲಿ ಮಧ್ಯರಾತ್ರಿ ಸಂಚರಿಸುತ್ತವೆಯಂತೆ 11 ಆತ್ಮಗಳು!

ಕಳೆದ ವರ್ಷ ಜೂನ್ 30 ಮತ್ತು ಜುಲೇ 1ರ ನಡುವಿನ ರಾತ್ರಿ ಬುರಾರಿಯಲ್ಲಿ ಒಂದೇ ಕುಟುಂಬದ 11 ಜನ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿದ್ದರು. ಮಾನಸಿಕ ಸ್ಥಿತಿಯೇ ಅವರ ಸಾವಿಗೆ ಕಾರಣ. ಅಂಧ ಆಚರಣೆ ಮಾಡಲು ಹೋಗಿ ಸಾವಿಗೆ ಶರಣಾಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿತ್ತು.

TIMESOFINDIA.COM 26 Jun 2019, 3:45 pm
ಹೊಸದಿಲ್ಲಿ: ದೇಶವನ್ನೇ ಬೆಚ್ಚಿ ಬೀಳಿಸಿದ ಬುರಾರಿ ಸಾಮೂಹಿಕ ಆತ್ಮಹತ್ಯೆ ದುರಂತ ನಡೆದು ಬರೋಬ್ಬರಿ ಒಂದು ವರ್ಷವಾಗಿದೆ. 11 ಜನರ ಸಾಮೂಹಿಕ ಆತ್ಮಹತ್ಯೆಗೆ ಸಾಕ್ಷಿಯಾಗಿದ್ದ ಆ ಮನೆಯನ್ನೀಗ ಆತ್ಮಗಳ ಬೀಡು ಎಂಬಂತೆ ನೋಡಲಾಗುತ್ತಿದೆ. ಸುತ್ತಮುತ್ತಲಿನ ವಾಸಿಗಳಿಗೆಲ್ಲ ಆ ಮನೆ ಕಡೆ ಹಾದು ಹೋಗುವುದೆಂದರೂ ಭಯವೇ. ಹಾಡ ಹಗಲಲ್ಲೇ ಭಯ ಹುಟ್ಟಿಸುವ ಆ ಮನೆಯಲ್ಲಿ ಇಬ್ಬರು ಸಹೋದರರು ವಾಸವಾಗಿದ್ದಾರೆಂದರೆ ನಂಬುತ್ತೀರ?
Vijaya Karnataka Web 1561531901-Burari_house


ಹೌದು ಉತ್ತರ ದಿಲ್ಲಿಯಲ್ಲಿರುವ ಆ ಮನೆಯಲ್ಲಿ ಮುಸ್ಲಿಂ ಸಹೋದರರಿಬ್ಬರು ನೆಲೆಸಿದ್ದಾರೆ. ಜನರ ಬಾಯಲ್ಲಿ ಹರಿದಾಡುತ್ತಿರುವ ಭಯಾನಕ ಕಥೆಗಳು ಬಡಗಿ ಕೆಲಸ ಮಾಡಿಕೊಂಡಿರುವ ಅಹಮದ್ ಅಲಿ ಮತ್ತವರ ಸಹೋದರ ಅಫ್ಸರ್ ಅಲಿಯನ್ನು ನಡುಗಿಸಿಲ್ಲ. ಕುಟುಂಬದಲ್ಲಿ ಬದುಕುಳಿದಿರುವ ಏಕೈಕ ಸದಸ್ಯ ದಿನೇಶ್ ಚೌಡಾವತ್‌ ಸುಪರ್ದಿಯಲ್ಲಿರುವ ಈ ಮನೆಯಲ್ಲಿ ಆತನ ಮನವಿಯ ಮೇರೆಗೆ ಅಲಿ ಸಹೋದರರು ವಾಸಿಸುತ್ತಿದ್ದಾರೆ.

ಆ ಊರಿನ ಜನರಲ್ಲಿ ಕೆಲವರು ಮೃತ 11 ಜನರ ಆತ್ಮ ಅಲೌಕಿಕ ಶಕ್ತಿಯೊಂದಿಗೆ ಶಾಂತಿಯಲ್ಲಿದೆ ಎಂದು ನಂಬಿದರೆ, ಮತ್ತೆ ಕೆಲವರು, ಮೃತರ ಅತೃಪ್ತ ಆತ್ಮ ಅದೇ ಮನೆಯಲ್ಲೇ ಓಡಾಡಿಕೊಂಡಿವೆ ಎಂದು ನಂಬಿದ್ದಾರೆ.


ದುರಂತದ ಬಳಿಕ ದಿನೇಶ್ ಆ ಮನೆಯಲ್ಲಿ ವಾಸವಾಗಿದ್ದು ಕೇವಲ 2 ದಿನ. ಬಳಿಕ ಅಲಿ ಸಹೋದರರ ಬಳಿ ಅಲ್ಲಿ ವಾಸಿಸುವಂತೆ ಕೇಳಿಕೊಂಡಿದ್ದಾರೆ. ಆಗಾಗ ಅವರು ಸಹ ಅಲ್ಲಿಗೆ ಭೇಟಿ ನೀಡುತ್ತಾರೆ. ಅಕ್ಟೋಬರ್ 14, 2018ರಿಂದ ಅಲಿ ಸಹೋದರರು ಅಲ್ಲಿ ವಾಸವಾಗಿದ್ದಾರೆ.

ನಾವಿಬ್ಬರು ಅಲ್ಲಿ ವಾಸವಾಗಲು ನಿರ್ಧರಿಸುವ ವಿಷಯ ತಿಳಿದು ಜನರು ನಿಮಗೇನು ಹುಚ್ಚೇ ಎಂದು ಕೇಳಿದ್ದರು. ಆದರೆ ಜನರು ಸೃಷ್ಟಿಸಿದ ಭಯ ನಮ್ಮ ಮೇಲೆ ಪರಿಣಾಮ ಬೀರಲಿಲ್ಲ. ರಾತ್ರಿ ವೇಳೆ ಆ ಮನೆಯಲ್ಲಿ ಆತ್ಮಗಳು ಸುತ್ತಾಡುವ ಅನುಭವವಾಗುತ್ತದೆ ಎನ್ನುತ್ತಾರೆ ಅಹಮದ್ ಅಲಿ. ಆದರೆ ಅವರ ಸಹೋದರ ಆತ್ಮಗಳ ಅಸ್ತಿತ್ವವನ್ನು ನಂಬುತ್ತಾರೋ ಇಲ್ಲವೋ ಎಂಬುದವರಿಗೆ ಗೊತ್ತಿಲ್ಲ. ಅವರಿಬ್ಬರು ಈ ಬಗ್ಗೆ ಚರ್ಚಿಸುವುದೇ ಇಲ್ಲ.

ದಿನೇಶ್ ಅಲಿ ಸಹೋದರರಿಂದ ಬಾಡಿಗೆಯನ್ನು ತೆಗೆದುಕೊಳ್ಳುತ್ತಿಲ್ಲ. ಆ ಬಂಗಲೆಯನ್ನವರು ಬಹುಮಹಡಿ ಸಂಕೀರ್ಣವಾಗಿ ಪರಿವರ್ತಿಸಲಿದ್ದಾರೆ ಎಂಬ ವದಂತಿಗಳು ಸಹ ಕೇಳಿ ಬರುತ್ತಿವೆ.

ಕಳೆದ ವರ್ಷ ಜೂನ್ 30 ಮತ್ತು ಜುಲೈ 1ರ ನಡುವಿನ ರಾತ್ರಿ ಬುರಾರಿಯಲ್ಲಿ ಒಂದೇ ಕುಟುಂಬದ 11 ಜನ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿದ್ದರು. ಮಾನಸಿಕ ಸ್ಥಿತಿಯೇ ಅವರ ಸಾವಿಗೆ ಕಾರಣ. ಅಂಧ ಆಚರಣೆ ಮಾಡಲು ಹೋಗಿ ಸಾವಿಗೆ ಶರಣಾಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿತ್ತು. ಆ ಮನೆಯಲ್ಲಿ ಜೀವಂತವಾಗಿದ್ದ ಏಕೈಕ ಸದಸ್ಯ -ಸಾಕು ನಾಯಿ ಕೂಡ ಆಘಾತದಿಂದ ಕೆಲ ದಿನಗಳ ಬಳಿಕ ಸಾವನ್ನಪ್ಪಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ