ಹೊಸದಿಲ್ಲಿ: ಮಿರಾಜ್ 2000 ತರಬೇತಿ ವಿಮಾನ ಹಾರಾಟ ವೇಳೆ ಬೆಂಗಳೂರಿನಲ್ಲಿ ಮೃತಪಟ್ಟಿದ್ದ ಪೈಲಟ್ ಸಮೀರ್ ಅಬ್ರೋಲ್ ಅವರ ಪತ್ನಿ ಗರೀಮಾ ಅಬ್ರೋಲ್ ಸದ್ಯವೇ ವಾಯುಪಡೆ ಸೇರಲಿದ್ದಾರೆ. ಇತ್ತೀಚೆಗಷ್ಟೇ ಭಾರತೀಯ ವಾಯುಪಡೆ ನಡೆಸಿದ 'ಸರ್ವಿಸ್ ಸೆಲಕ್ಷನ್ ಬೋರ್ಡ್' ಪ್ರವೇಶಾತಿ ಸಂದರ್ಶನದಲ್ಲಿ ಪಾಸಾಗಿದ್ದು, 2020ರಲ್ಲಿ ದಿಂಡಿಗಲ್ನಲ್ಲಿರುವ ಭಾರತೀಯ ವಾಯುಪಡೆ ಅಕಾಡೆಮಿ ಸೇರಿ ಅಲ್ಲಿ ತರಬೇತಿ ಪಡೆಯಲಿದ್ದಾರೆ. ''ದೇಶ ಸೇವೆಯ ತುಡಿತದೊಂದಿಗೆ ವಾಯುಪಡೆ ಸೇರಿದ್ದೇನೆ,'' ಎಂದು ಅವರು ಹೇಳಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಎಚ್ಎಎಲ್ ವಿಮಾನ ನಿಲ್ದಾಣದಿಂದ ಪರೀಕ್ಷಾರ್ಥ ಹಾರಾಟ ನಡೆಸಿದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ಈ ಅಪಘಾತದಲ್ಲಿ ಅಬ್ರೋಲ್ ಹಾಗೂ ಇನ್ನೊಬ್ಬ ಪೈಲಟ್ ಗಾಯಗೊಂಡಿದ್ದರು. ಪತಿಯನ್ನು ಕಳೆದುಕೊಂಡ ದುಃಖದಲ್ಲಿ ಗರೀಮಾ ಅವರು ''ಎಚ್ಚರಿಕೆಯ ನಡುವೆಯೂ ಹಳೆಯ ಯುದ್ಧ ವಿಮಾನಗಳನ್ನು ಏಕೆ ಬಳಸಲಾಗುತ್ತದೆ. ಕೆಟ್ಟ ವ್ಯವಸ್ಥೆಗೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು,'' ಎಂದು ಭಾವನಾತ್ಮಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದರು. ಇದು ವೈರಲ್ ಆಗಿತ್ತು.
ಸಮೀರ್ ಅಬ್ರೋಲ್ ಪತ್ನಿ ವಾಯುಪಡೆ ಸೇರಲು ಸಜ್ಜು
ಇತ್ತೀಚೆಗಷ್ಟೇ ಭಾರತೀಯ ವಾಯುಪಡೆ ನಡೆಸಿದ 'ಸರ್ವಿಸ್ ಸೆಲಕ್ಷನ್ ಬೋರ್ಡ್' ಪ್ರವೇಶಾತಿ ಸಂದರ್ಶನದಲ್ಲಿ ಪಾಸಾಗಿದ್ದು, 2020ರಲ್ಲಿ ದಿಂಡಿಗಲ್ನಲ್ಲಿರುವ ಭಾರತೀಯ ವಾಯುಪಡೆ ಅಕಾಡೆಮಿ ಸೇರಿ ಅಲ್ಲಿ ತರಬೇತಿ ಪಡೆಯಲಿದ್ದಾರೆ.
PTI 16 Jul 2019, 5:00 am