ಆ್ಯಪ್ನಗರ

ರಾಜಪಕ್ಸೆ ಪ್ರಧಾನಿಯಾಗಿ ಕೆಲಸ ಮಾಡಕೂಡದು ಎಂದ ಕೋರ್ಟ್‌

​ರಾಜಪಕ್ಸೆ ಜತೆಗೆ ಅವರ ಸಂಪುಟದ ಸಹೋದ್ಯೋಗಿಗಳೂ ಸಚಿವರಾಗಿ ಕರ್ತವ್ಯ ನಿರ್ವಹಿಸುವುದಕ್ಕೆ ಕೋರ್ಟ್‌ ತಡೆ ನೀಡಿದೆ. ಪದಚ್ಯುತ ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಅವರ ಯುನೈಟೆಡ್‌ ನ್ಯಾಶನಲ್‌ ಪಾರ್ಟಿ, ಜನತಾ ವಿಮುಕ್ತಿ ಪೆರುಮುನಾ ಮತ್ತು ತಮಿಳು ನ್ಯಾಶನಲ್‌ ಅಲಯನ್ಸ್‌ಗಳ 122 ಸಂಸದರು ರಾಜಪಕ್ಸೆ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದರು.

Vijaya Karnataka Web 4 Dec 2018, 8:41 am
ಕೊಲಂಬೊ: ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ನೇಮಕ ಮಾಡಿದ್ದ ಮಹಿಂದಾ ರಾಜಪಕ್ಸೆ ಅವರು ಪ್ರಧಾನಿಯಾಗಿ ಕಾರ್ಯನಿರ್ವಹಿಸುವುದಕ್ಕೆ ಶ್ರೀಲಂಕಾ ಸುಪ್ರೀಂ ಕೋರ್ಟ್‌ ಸೋಮವಾರ ತಡೆ ನೀಡಿದೆ.
Vijaya Karnataka Web Mahinda rajpakse.


ರಾಜಪಕ್ಸೆ ಜತೆಗೆ ಅವರ ಸಂಪುಟದ ಸಹೋದ್ಯೋಗಿಗಳೂ ಸಚಿವರಾಗಿ ಕರ್ತವ್ಯ ನಿರ್ವಹಿಸುವುದಕ್ಕೆ ಕೋರ್ಟ್‌ ತಡೆ ನೀಡಿದೆ. ಪದಚ್ಯುತ ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಅವರ ಯುನೈಟೆಡ್‌ ನ್ಯಾಶನಲ್‌ ಪಾರ್ಟಿ, ಜನತಾ ವಿಮುಕ್ತಿ ಪೆರುಮುನಾ ಮತ್ತು ತಮಿಳು ನ್ಯಾಶನಲ್‌ ಅಲಯನ್ಸ್‌ಗಳ 122 ಸಂಸದರು ರಾಜಪಕ್ಸೆ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದರು.

ಡಿ.11 ಮತ್ತು 12ರಂದು ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ. ಅ.26ರಂದು ವಿಕ್ರಮಸಿಂಘೆ ಅವರನ್ನು ಪದಚ್ಯುತಗೊಳಿಸಿ ರಾಜಪಕ್ಸೆ ಅವರನ್ನು ಪ್ರಧಾನಿಯಾಗಿ ಸಿರಿಸೇನಾ ನೇಮಕ ಮಾಡಿದ್ದರು.

ಅದು ಅಸಿಂಧು ಎಂದು ನ್ಯಾಯಾಲಯ ಹೇಳಿತ್ತು. ಅಲ್ಲದೇ 225 ಸದಸ್ಯ ಬಲದ ಸಂಸತ್ತಿನಲ್ಲಿ ಬಹುಮತ ಸಾಬೀತುಪಡಿಸುವಲ್ಲಿಯೂ ರಾಜಪಕ್ಸೆ ವಿಫರಾಗಿದ್ದರು. ಹೀಗಿದ್ದರೂ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲು ಅವರು ನಿರಾಕರಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ