ಆ್ಯಪ್ನಗರ

ತಿರುಪತಿ ತಿಮ್ಮಪ್ಪನ ಬಳಿಯಿದೆ 9 ಸಾವಿರ ಕೆ.ಜಿ. ಚಿನ್ನ !

ದೇವಸ್ಥಾನದ ಆಡಳಿತ ಮಂಡಳಿ ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ತನ್ನ ಖಜಾನೆಯಲ್ಲಿ 553 ಕೆ.ಜಿ ಚಿನ್ನ ಮತ್ತು ಇತರ ಬೆಲೆಬಾಳುವ ಆಭರಣಗಳನ್ನು ಹೊಂದಿದೆ.

Agencies 10 May 2019, 7:53 am
ತಿರುಪತಿ : ವಿಶ್ವದ ಅತಿ ಶ್ರೀಮಂತ ದೇವರು ಎಂಬ ಹೆಗ್ಗಳಿಕೆಯ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ, ವಿವಿಧ ಬ್ಯಾಂಕ್‌ಗಳಲ್ಲಿ ಸುಮಾರು 9,259 ಕೆ.ಜಿ. ಚಿನ್ನದ ಠೇವಣಿ ಹೊಂದಿದ್ದಾನೆ ಎಂದು ತಿಳಿದುಬಂದಿದೆ.
Vijaya Karnataka Web Tirupati


ದೇವಸ್ಥಾನದ ಆಡಳಿತ ಮಂಡಳಿ ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ತನ್ನ ಖಜಾನೆಯಲ್ಲಿ 553 ಕೆ.ಜಿ ಚಿನ್ನ ಮತ್ತು ಇತರ ಬೆಲೆಬಾಳುವ ಆಭರಣಗಳನ್ನು ಹೊಂದಿದೆ.

ಎಸ್‌ಬಿಐನಲ್ಲಿ 5,387 ಕೆ.ಜಿ ಚಿನ್ನ, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನಲ್ಲಿ 1,938 ಕೆ.ಜಿ ಚಿನ್ನವನ್ನು ಟಿಟಿಡಿ ಠೇವಣಿ ಇರಿಸಿದೆ.

ಮೂರು ವರ್ಷದ ಠೇವಣಿ ಅವಧಿ ಮುಕ್ತಾಯಗೊಂಡ ಹಿನ್ನೆಲೆ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಏ.20ರಂದು 1,381 ಕೆ.ಜಿ ಚಿನ್ನ ಹಿಂದಿರುಗಿಸಿದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್‌ ಕುಮಾರ್‌ ಸಿಂಘಾಲ್‌ ಹೇಳಿದ್ದಾರೆ.

ಚಿನ್ನ ಹೂಡಿಕೆ ಯೋಜನೆ ಅನ್ವಯ ಬ್ಯಾಂಕ್‌ಗಳಿಗೆ ಶೇ. 1 ಕಮಿಷನ್‌ ನೀಡಲಾಗುತ್ತದೆ. ಜತೆಗೆ ಶೇ. 1.5 ನಿರ್ವಹಣಾ ವೆಚ್ಚ ಕೂಡ ಕೊಡಲಾಗುತ್ತದೆ. ಠೇವಣಿ ಅವಧಿ ಮುಗಿದ ಹಣವನ್ನು ಹಿಂದಿರುಗಿಸುವ ಜವಾಬ್ದಾರಿ ಬ್ಯಾಂಕ್‌ನದ್ದು ಎಂದು ಸಿಂಘಾಲ್‌ ತಿಳಿಸಿದ್ದಾರೆ.

ಏ.17ರಂದು ತಮಿಳುನಾಡಿನ ತಿರುವಳ್ಳೂರ್‌ ಜಿಲ್ಲೆಯಲ್ಲಿ ಚುನಾವಣಾ ಆಯೋಗ 1,381 ಕೆ.ಜಿ ಚಿನ್ನವನ್ನು ಸಾಗಾಟ ವೇಳೆ ವಶಕ್ಕೆ ಪಡೆದಿತ್ತು. ಈ ಕುರಿತು ವಿಚಾರಣೆ ನಡೆಸಿದಾಗ ಪಿಎನ್‌ಬಿ ಬ್ಯಾಂಕ್‌ನಿಂದ ಟಿಟಿಡಿಗೆ ಹಿಂದಿರುಗಿಸಲಾಗಿದ್ದ ಚಿನ್ನವದು ಎಂದು ತಿಳಿದುಬಂದಿತ್ತು.

ಆಂಧ್ರಪ್ರದೇಶ ಮುಖ್ಯ ಕಾರ್ಯದರ್ಶಿ ಎಲ್‌.ವಿ. ಸುಬ್ರಮಣ್ಯಂ ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ