ಆ್ಯಪ್ನಗರ

ವಾಯುನೆಲೆಗಳ ಮೇಲೆ ಉಗ್ರರ ಕಣ್ಣು

ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಬಾಲಾಕೋಟ್‌ ಉಗ್ರ ಶಿಬಿರದ ಮೇಲೆ ನಡೆಸಿದ ದಾಳಿಯಿಂದ ಕಂಗಾಲಾಗಿರುವ ಪಾಕಿಸ್ತಾನದ ಪಾತ್ರ ಈ ದಾಳಿ ಸಂಚಿನ ಹಿಂದೆ ಇದೆ ಎಂದೂ ಗುಪ್ತಚರ ಇಲಾಖೆಯ ವರದಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಎರಡೂ ವಾಯುನೆಲೆಗಳಲ್ಲಿ ಭದ್ರತೆ ಹೆಚ್ಚಿಸಿ ಕಟ್ಟೆಚ್ಚರ ಘೋಷಿಸಲಾಗಿದೆ. ಚೆಕ್‌ಪೋಸ್ಟ್‌ ಹಾಗೂ ವಾಯುನೆಲೆಗಳ ಮೇಲೆ ನಿಗಾ ಇರಿಸಲಾಗಿದೆ.

Vijaya Karnataka 18 May 2019, 5:00 am
ಹೊಸದಿಲ್ಲಿ : ಲೋಕಸಮರದ ಮತ ಎಣಿಕೆ ದಿನವಾದ ಮೇ 23ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಮತ್ತು ಅವಂತಿಪುರದಲ್ಲಿನ ವಾಯುನೆಲೆಗಳ ಮೇಲೆ ದೊಡ್ಡ ಪ್ರಮಾಣದ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆಯು ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಿದೆ.
Vijaya Karnataka Web srinagar awantipora air bases under radar of pakistani terror groups security beefed up
ವಾಯುನೆಲೆಗಳ ಮೇಲೆ ಉಗ್ರರ ಕಣ್ಣು


ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಬಾಲಾಕೋಟ್‌ ಉಗ್ರ ಶಿಬಿರದ ಮೇಲೆ ನಡೆಸಿದ ದಾಳಿಯಿಂದ ಕಂಗಾಲಾಗಿರುವ ಪಾಕಿಸ್ತಾನದ ಪಾತ್ರ ಈ ದಾಳಿ ಸಂಚಿನ ಹಿಂದೆ ಇದೆ ಎಂದೂ ಗುಪ್ತಚರ ಇಲಾಖೆಯ ವರದಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಎರಡೂ ವಾಯುನೆಲೆಗಳಲ್ಲಿ ಭದ್ರತೆ ಹೆಚ್ಚಿಸಿ ಕಟ್ಟೆಚ್ಚರ ಘೋಷಿಸಲಾಗಿದೆ. ಚೆಕ್‌ಪೋಸ್ಟ್‌ ಹಾಗೂ ವಾಯುನೆಲೆಗಳ ಮೇಲೆ ನಿಗಾ ಇರಿಸಲಾಗಿದೆ.

ಕಳೆದ ವಾರ ಕಣಿವೆ ರಾಜ್ಯದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಆರು ಮಂದಿ ಜೈಷ್‌-ಎ-ಮೊಹಮ್ಮದ್‌ ಉಗ್ರರನ್ನು ಹತ್ಯೆಗೈಯಲಾಗಿತ್ತು. ಪುಲ್ವಾಮ ಮತ್ತು ಶೋಪಿಯಾನ್‌ನಲ್ಲಿ ಅಡಗಿರುವ ಉಗ್ರರಿಗಾಗಿ ಭದ್ರತಾ ಪಡೆಗಳು ತೀವ್ರ ಶೋಧ ನಡೆಸುತ್ತಿರುವ ಬೆನ್ನಿಗೆ ಪಾಕ್‌ ಪೋಷಿತ ಉಗ್ರರಿಂದ ದಾಳಿ ನಡೆಯುವ ಗುಪ್ತಚರ ವರದಿ ಹೊರಬಿದ್ದಿದೆ.
.............................
ನಕ್ಷೆಯಿಂದ ಗುಟ್ಟು ರಟ್ಟು

ಶೋಪಿಯಾನ್‌ನಲ್ಲಿ ಇತ್ತೀಚೆಗೆ ಭದ್ರತಾ ಪಡೆಗಳಿಂದ ಹತ್ಯೆಗೊಂಡ ಹಿಜ್ಬುಲ್‌ ಮುಜಾಹಿದ್ದೀನ್‌ ಸಂಘಟನೆಯ ಉಗ್ರ ರಿಯಾಜ್‌ ನೈಕೂ ಬಳಿ ದೊರೆತ ನಕ್ಷೆಯೊಂದು ದಾಳಿಯ ಸುಳಿವು ನೀಡಿದೆ. ಮೇ 14ರಂದು ರಿಯಾಜ್‌ ಜತೆಗೆ ಇಬ್ಬರು ಜೈಷ್‌ ಉಗ್ರರು ಮತ್ತು ಲಷ್ಕರ್‌-ಎ-ತೊಯ್ಬಾ ಉಗ್ರ ರಿಯಾಜ್‌ ದರ್‌ ಗೌಪ್ಯ ಸಭೆ ನಡೆಸಿದ್ದಾರೆ. ಶ್ರೀನಗರ ಮತ್ತು ಅವಂತಿಪುರದಲ್ಲಿನ ವಾಯುನೆಲೆಗಳ ಮೇಲೆ ಆತ್ಮಾಹುತಿ ದಾಳಿಗೆ ಸಭೆಯಲ್ಲಿ ಸಂಚು ಹೆಣೆಯಲಾಗಿದೆ. ಅವಂತಿಪುರದ ರಾಷ್ಟ್ರೀಯ ಹೆದ್ದಾರಿ, ಜಿಲ್ಲಾ ಪೊಲೀಸ್‌ ಸಂಕೀರ್ಣವನ್ನು ಕೂಡ ಗುರಿಯಾಗಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಇತ್ತೀಚೆಗೆ ಪೊಲೀಸ್‌ ವಶದಲ್ಲಿ ಶಂಕಿತ ಉಗ್ರ ರಿಜ್ವಾನ್‌ ಅಸ್ಸಾದ್‌ ಪಂಡಿತ್‌ಮೃತಪಟ್ಟಿದ್ದ. ಆತನ ಸಾವಿಗೆ ಪ್ರತೀಕಾರವಾಗಿ ಕೂಡ ದಾಳಿ ನಡೆಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

.....

23ರಂದೇ ಏಕೆ ದಾಳಿ?

1. ಮೇ 23ರಂದೇ ದಾಳಿ ನಡೆಸಲು ಎರಡು ಪ್ರಮುಖ ಕಾರಣಗಳಿವೆ. ಅಂದು ರಂಜಾನ್‌ ಮಾಸಾಚರಣೆಯ 17ನೇ ದಿನವಾಗಿದ್ದು, ಜಂಗ್‌-ಎ-ಬದರ್‌ನಲ್ಲಿ ಪ್ರವಾದಿ ಅವರು ಜಯ ಸಾಧಿಸಿದ್ದ ವಿಶೇಷ ದಿನವಾಗಿ ಗುರುತಿಸಲಾಗುತ್ತದೆ.

2. ಲೋಕಸಭಾ ಚುನಾವಣೆಯ ಮತ ಎಣಿಕೆ ಅದೇದಿನ ನಡೆಯಲಿದೆ. ಅಂದು ಇಡೀ ದೇಶದ ಗಮನ ಚುನಾವಣಾ ಫಲಿತಾಂಶದ ಕುರಿತು ಇರುತ್ತದೆ. ಇಂಥ ಸಂದರ್ಭದಲ್ಲಿ ದೊಡ್ಡ ಮಟ್ಟದ ದಾಳಿ ನಡೆಸುವುದು ಸುಲಭ ಎನ್ನುವುದು ಉಗ್ರರ ಲೆಕ್ಕಾಚಾರ.

..............

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ