ಆ್ಯಪ್ನಗರ

ಹಣ ಸಂಗ್ರಹಿಸಿ ಆಫೀಸ್ ಬಾಯ್ ಮದುವೆ ಮಾಡಿಸಿದ ಶಾಲಾ ಸಿಬ್ಬಂದಿ

ಖಾಡ್ಕಿಯಲ್ಲಿರುವ ಅತಿ ಹಳೆಯ ಶಾಲೆಗಳಲ್ಲೊಂದಾದ ಎಸ್‌ವಿಎಸ್ ಶಾಲೆಯ ಸಿಬ್ಬಂದಿ ಸದಾ ಚುರುಕಿಂದ ಓಡಾಡುತ್ತ, ತಮ್ಮ ಕೆಲಸಕ್ಕೆ ನೆರವಾಗುವ ಕಚೇರಿ ಸಹಾಯಕನ ಬಗ್ಗೆ ಗೌರವ, ಪ್ರೀತಿಯನ್ನು ಹೊಂದಿದ್ದು ಅಪ್ಪ- ಅಮ್ಮನಿಲ್ಲದ ಚಿಗುರು ಮೀಸೆಯ ಹುಡುಗ ಅಂಕುಶ್ ಭೋಸ್ಲೆ ಬಗ್ಗೆ ಅತಿಯಾದ ಕಾಳಜಿ ಹೊಂದಿದ್ದರು.

Indiatimes 22 May 2019, 11:30 am
ಪುಣೆ: ನಮ್ಮ ದೈನಂದಿನ ಬದುಕನ್ನು ಸುಲಭವಾಗಿಸುವಂತಹ ಕೆಲವರ ಬಗ್ಗೆ ನಾವು ನಿರ್ಲಕ್ಷ್ಯ ಮಾಡುವುದೇ ಹೆಚ್ಚು- ಆಫೀಸ್ ಸ್ವಚ್ಛ ಮಾಡುವವರು, ನೀರು, ಟೀ ತಂದುಕೊಡುವವರು ಇತ್ಯಾದಿ. ಆದರೆ ಪುಣೆಯ ಶಾಲೆಯೊಂದರ ಸಿಬ್ಬಂದಿ ಇದಕ್ಕೆ ಅಪವಾದವಾಗಿದ್ದಾರೆ.
Vijaya Karnataka Web Marriage


ಖಾಡ್ಕಿಯಲ್ಲಿರುವ ಅತಿ ಹಳೆಯ ಶಾಲೆಗಳಲ್ಲೊಂದಾದ ಎಸ್‌ವಿಎಸ್ ಶಾಲೆಯ ಸಿಬ್ಬಂದಿ ಸದಾ ಚುರುಕಿಂದ ಓಡಾಡುತ್ತ, ತಮ್ಮ ಕೆಲಸಕ್ಕೆ ನೆರವಾಗುವ ಕಚೇರಿ ಸಹಾಯಕನ ಬಗ್ಗೆ ಗೌರವ, ಪ್ರೀತಿಯನ್ನು ಹೊಂದಿದ್ದು ಅಪ್ಪ- ಅಮ್ಮನಿಲ್ಲದ ಚಿಗುರು ಮೀಸೆಯ ಹುಡುಗ ಅಂಕುಶ್ ಭೋಸ್ಲೆ ಬಗ್ಗೆ ಅತಿಯಾದ ಕಾಳಜಿ ಹೊಂದಿದ್ದರು.

ಕಳೆದ 2 ವರ್ಷದಿಂದ ಆ ಶಾಲೆಯಲ್ಲಿ ಕೆಲಸ ಮಾಡುತ್ತಿರುವ 24 ವರ್ಷದ ಅಂಕುಶ್ ತಾಯಿ ಕಳೆದ 8 ತಿಂಗಳ ಹಿಂದೆ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದರು. ಏಕಾಂಗಿಯಾಗಿದ್ದ ಆತನ ಬದುಕಲ್ಲಿ ಬೆಳಕು ತರಬೇಕೆಂದು ನಿಶ್ಚಯಿಸಿದ ಶಾಲಾ ಸಿಬ್ಬಂದಿ ಹಣ ಸಂಗ್ರಹಿಸಿ , ತಾವೇ ಮುಂದು ನಿಂತು ಶಾಲಾ ಆವರಣದಲ್ಲಿ ಆತನ ಮದುವೆಯನ್ನು ಮಾಡಿದರು.

ಸರಳ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಂಕುಶ್ ತಮ್ಮ ಸಹೋದ್ಯೋಗಿಗಳ ಈ ಅಭಿಮಾನಕ್ಕೆ ತಲೆ ಬಾಗಿದ್ದಾನೆ. ರಕ್ತದ ಕ್ಯಾನ್ಸರ್‌ನಿಂದ ಹಾಸಿಗೆ ಹಿಡಿದಿದ್ದ ಅಮ್ಮನಿಗೆ ನನ್ನದೇ ಚಿಂತೆಯಾಗಿತ್ತು. ನಾನು ಸಾವನ್ನಪ್ಪಿದ ಬಳಿಕ ನಿನಗ್ಯಾರು ದಿಕ್ಕು ಎಂದು ಅಳುತ್ತಿದ್ದರು. ಮದುವೆಯಾಗುವಂತೆ ಒತ್ತಾಯಿಸುತ್ತಿದ್ದರು. ಆದರೆ ಆಕೆಯ ಕಾಯಿಲೆ ಮತ್ತು ವೈದ್ಯಕೀಯ ವೆಚ್ಚದಿಂದಾಗಿ ಅವಳಾಸೆಯನ್ನು ಈಡೇರಿಸಲಾಗಲಿಲ್ಲ. ಅಪ್ಪ 5 ವರ್ಷದ ಹಿಂದೆಯೇ ಸಾವನ್ನಪ್ಪಿದ್ದರು. ಮೂವರು ಅಕ್ಕಂದಿರಿದ್ದು ಅವರಿಗೆಲ್ಲ ಮದುವೆಯಾಗಿದೆ. ಮತ್ತೀಗ ನಮ್ಮ ಶಾಲೆಯ ಶಿಕ್ಷಕರು ಮತ್ತು ಇತರ ಸಿಬ್ಬಂದಿ ಹಣ ಸಂಗ್ರಹಿಸಿ ನನಗೆ ಹೊಸ ಬದುಕು ನೀಡಿದ್ದಾರೆ ಎನ್ನುತಾನಾತ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ