ಆ್ಯಪ್ನಗರ

ರೈತ ಸಂಘಟನೆಗಳು-ಕೇಂದ್ರದ ನಡುವಿನ 9ನೇ ಸುತ್ತಿನ ಮಾತುಕತೆಯೂ ವಿಫಲ: ಜ.19ಕ್ಕೆ ಮತ್ತೆ ಸಭೆ ನಿಗದಿ!

ಕೃಷಿ ಕಾಯ್ದೆಗಳ ಪೂರ್ವಾಪ ಚರ್ಚಿಸಲು ದೆಹಲಿಯ ವಿಜ್ಞಾನ ಭವನದಲ್ಲಿ ಕರೆಯಲಾಗಿದ್ದ ಕೇಂದ್ರ ಸರ್ಕಾರ ಹಾಗೂ ರೈತ ಸಂಘಟನೆಗಳ ನಡುವಿನ 9ನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ. ಜ.19(ಮಂಗಳವಾರ)ರಂದು 10ನೇ ಸುತ್ತಿನ ಮಾತುಕತೆಗೆ ಎರಡೂ ಬಣ ಒಪ್ಪಿಗೆ ಸೂಚಿಸಿವೆ.

Vijaya Karnataka Web 15 Jan 2021, 6:39 pm
ಹೊಸದಿಲ್ಲಿ: ಕೃಷಿ ಕಾಯ್ದೆಗಳ ಪೂರ್ವಾಪ ಚರ್ಚಿಸಲು ದೆಹಲಿಯ ವಿಜ್ಞಾನ ಭವನದಲ್ಲಿ ಕರೆಯಲಾಗಿದ್ದ ಕೇಂದ್ರ ಸರ್ಕಾರ ಹಾಗೂ ರೈತ ಸಂಘಟನೆಗಳ ನಡುವಿನ 9ನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ.
Vijaya Karnataka Web Narendra Singh Tomar
ಸಂಗ್ರಹ ಚಿತ್ರ


ಕೃಷಿ ಕಾಯ್ದಗಳ ಜಾರಿಗೆ ಸುಪ್ರೀಂಕೋರ್ಟ್ ತಡೆ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಹಾಗೂ ರೈತ ಸಂಘಟನೆಗಳ ನಡುವೆ ಮಾತುಕತೆ ನಡೆದಿದ್ದು, ಯಾವುದೇ ಅಂತಿಮ ತೀರ್ಮಾನಕ್ಕೆ ಬರಲು ಸಭೇ ವಿಫಲವಾಗಿದೆ.

ಕೃಷಿ ಕಾಯ್ದೆಗಳನ್ನು ಸಂಪೂರ್ಣವಾಗಿ ವಾಪಸ್ ಪಡೆಯಬೇಕು ಎಂಬುದು ರೈತ ಸಂಘಟನೆಗಳ ನಿಲುವಾದರೆ, ಕಾಯ್ದೆಗಳನ್ನು ಯಾವುದೇ ಕಾರಣಕ್ಕೂ ವಾಪಸ್ ಪೆಡೆಯುವುದಿಲ್ಲ ಎಂಬ ತನ್ನ ಹಳೆಯ ವಾದಕ್ಕೆ ಕೇಂದ್ರ ಸರ್ಕಾರ ಅಂಟಿಕೊಂಡಿತು.

ಕೃಷಿ ಕಾಯ್ದೆ ಪರ ನಿಂತಿದ್ದ 'ಸುಪ್ರೀಂ' ಸದಸ್ಯ ತಂಡದಿಂದಲೇ ಹೊರನಡೆದಿದ್ದೇಕೆ..?

ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಮಾತುಕತೆಗಳು ಇನ್ನೂ ಮುಂದುವರೆದಿದ್ದು, ಮತ್ತೊಂದು ಸುತ್ತಿನ ಮಾತುಕತೆಗೆ ಎರಡೂ ಬಣ ಒಪ್ಪಿಗೆ ನೀಡಿವೆ ಎಂದು ತಿಳಿಸಿದರು.

ಸುಪ್ರೀಂಕೋರ್ಟ್ ನೇಮಿಸಿರುವ ಸಮಿತಿ ಮುಂದೆ ನಾವು ನಮ್ಮ ವಾದವನ್ನು ಮಂಡಿಸುತ್ತೇವೆ. ಕೇಂದ್ರದ ನಿಲುವೇನು ಎಂಬುದನ್ನು ಸಮಿತಿಗೆ ವಿಸ್ತೃತವಾಗಿ ತಿಳಿಸಲಿದ್ದೇವೆ ಎಂದು ತೋಮರ್ ಸ್ಪಷ್ಟಪಡಿಸಿದರು.

ಇನ್ನು ಕೃಷಿ ಕಾಯ್ದೆಗಳ ಜಾರಿ ವಿರೋಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂದು(ಜ.15-ಶುಕ್ರವಾರ) ನಡೆದ ಪ್ರತಿಭಟನೆಯನ್ನು ವ್ಯಂಗ್ಯವಾಡಿರುವ ತೋಮರ್, 2019ರ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ರಾಹುಲ್ ಮತ್ತೊಮ್ಮೆ ಓದುವುದು ಒಳಿತು ಎಂದು ಕುಹುಕವಾಡಿದ್ದಾರೆ.

ಕೃಷಿ ಕಾಯ್ದೆ ವಿರುದ್ಧ ದಿಲ್ಲಿ ಹೃದಯ ಭಾಗದಲ್ಲೇ ಕಾಂಗ್ರೆಸ್ ಪ್ರತಿಭಟನೆ: ರಾಹುಲ್, ಪ್ರಿಯಾಂಕಾ ಭಾಗಿ

ಸದ್ಯ ಜ.19(ಮಂಗಳವಾರ)ರಂದು 10ನೇ ಸುತ್ತಿನ ಮಾತುಕತೆಗೆ ಎರಡೂ ಬಣ ಒಪ್ಪಿಗೆ ಸೂಚಿಸಿದ್ದು, ಮುಂದಿನ ಮಾತುಕತೆಗೆ ಉಭಯ ಬಣಗಳೂ ಸ ಇದ್ಧತೆ ನಡೆಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ