ಆ್ಯಪ್ನಗರ

ಪಾಕ್‌ನಲ್ಲಿ ಮಹಾರಾಜ ರಂಜಿತ್‌ ಸಿಂಗ್‌ ಪ್ರತಿಮೆ ಧ್ವಂಸ

ಪಂಜಾಬ್‌ನಲ್ಲಿ ಸುಮಾರು 40 ವರ್ಷ ಕಾಲ ಆಡಳಿತ ನಡೆಸಿದ ಸಿಖ್‌ ಸಾಮ್ರಾಜ್ಯದ ಮೊದಲ ದೊರೆ ಮಹಾರಾಜ ರಂಜಿತ್‌ ಸಿಂಗ್‌ ಅವರ 9 ಅಡಿ ಪ್ರತಿಮೆಯನ್ನು ಪಾಕಿಸ್ತಾನದ ಲಾಹೋರ್‌ ನಗರದ ...

Vijaya Karnataka 12 Aug 2019, 8:19 am
ಲಾಹೋರ್‌: ಪಂಜಾಬ್‌ನಲ್ಲಿ ಸುಮಾರು 40 ವರ್ಷ ಕಾಲ ಆಡಳಿತ ನಡೆಸಿದ ಸಿಖ್‌ ಸಾಮ್ರಾಜ್ಯದ ಮೊದಲ ದೊರೆ ಮಹಾರಾಜ ರಂಜಿತ್‌ ಸಿಂಗ್‌ ಅವರ 9 ಅಡಿ ಪ್ರತಿಮೆಯನ್ನು ಪಾಕಿಸ್ತಾನದ ಲಾಹೋರ್‌ ನಗರದ ಕೋಟೆಯಲ್ಲಿ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.
Vijaya Karnataka Web Pakisthan


ಘಟನೆ ಸಂಬಂಧ ಇಬ್ಬರನ್ನು ಪಾಕ್‌ ಪೊಲೀಸರು ಬಂಧಿಸಿದ್ದು, ಧರ್ಮನಿಂದನೆ ಆರೋಪ ಹೊರಿಸಿದ್ದಾರೆ. ಆರೋಪಿಗಳು ಮೌಲಾನಾ ಖಾದಿಮ್‌ ರಿಜ್ವಿ ನೇತೃತ್ವದ ತೆಹ್ರೀಕ್‌-ಲಬ್ಬಾಯಿಕ್‌ ಪಾಕಿಸ್ತಾನ್‌ ಎಂಬ ಸಂಘಟನೆಯ ಸದಸ್ಯರು ಎಂದು ಗುರುತಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ಸರಕಾರ ಹಿಂಪಡೆದ ಬಳಿಕ ಆಕ್ರೋಶದಿಂದ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೊಂದು ದುರದೃಷ್ಟಕರ ಘಟನೆ. ಲಾಹೋರ್‌ ಕೋಟೆಯಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿ ನೇಮಿಸಲಾಗುವುದು. ಇಂಥ ಘಟನೆಗಳು ಮರುಕಳಿಸಲ್ಲ ಎಂದು ಕೋಟೆಯ ನಿರ್ವಹಣಾ ಉಸ್ತುವಾರಿ ಹೊತ್ತಿರುವ ವಾಲ್ಡ್‌ ಸಿಟಿ ಆಫ್‌ ಲಾಹೋರ್‌ ಪ್ರಾಧಿಕಾರ ತಿಳಿಸಿದೆ.

ಮಹಾರಾಜ ರಂಜಿತ್‌ ಸಿಂಗ್‌ ಅವರ 180ನೇ ಪುಣ್ಯಸ್ಮರಣೆ ಅಂಗವಾಗಿ ಕಂಚಿನ ಪ್ರತಿಮೆಯನ್ನು ಕೋಟೆಯಲ್ಲಿ ಅನಾವರಣಗೊಳಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ