ಆ್ಯಪ್ನಗರ

ಅಪಘಾತಕ್ಕೀಡಾಯ್ತು ಕದ್ದ ಕಾರು: ಪೊಲೀಸರ ಬಲೆಗೆ ಬಿದ್ದರು ಕಳ್ಳರು!

ಕದ್ದೊಯ್ಯುತ್ತಿದ್ದ ಕಾರು ಅಪಘಾತಕ್ಕೀಡಾದ ಪರಿಣಾಮ ಕಳ್ಳರು ಪೊಲೀಸರಿಗೆ ಸಿಕ್ಕಿ ಬಿದ್ದ ಘಟನೆ ನಗರದ ತಿರುವನ್ಮಿಯುರ್‌ನಲ್ಲಿ ನಡೆದಿದೆ.

TIMESOFINDIA.COM 6 Sep 2018, 3:43 pm
ಚೆನ್ನೈ: ಕದ್ದೊಯ್ಯುತ್ತಿದ್ದ ಕಾರು ಅಪಘಾತಕ್ಕೀಡಾದ ಪರಿಣಾಮ ಕಳ್ಳರು ಪೊಲೀಸರಿಗೆ ಸಿಕ್ಕಿ ಬಿದ್ದ ಘಟನೆ ನಗರದ ತಿರುವನ್ಮಿಯುರ್‌ನಲ್ಲಿ ನಡೆದಿದೆ.
Vijaya Karnataka Web police


ತಿರುವನ್ಮಿಯುರ್ ನಿವಾಸಿ ತೆಂಮೋಳಿ(32) ಮಂಗಳವಾರ ಬೆಳಿಗ್ಗೆ ಎದ್ದು ನೋಡಿದಾಗ ಮನೆ ಮುಂದೆ ರಾತ್ರಿ ಪಾರ್ಕ್ ಮಾಡಿದ್ದ ಕಾರ್ ಸ್ಥಳದಲ್ಲಿರಲಿಲ್ಲ. ತಕ್ಷಣ ಆಕೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಳು.

ನಾಪತ್ತೆಯಾಗಿದ್ದ ಕಾರು ಕೊಟ್ಟಿವಾಕಂ ಬಳಿ ಕಾಣಿಸಿಕೊಂಡಿದೆ ಎಂದು ಪೊಲೀಸರಿಗೆ ಅದೇ ದಿನ ರಾತ್ರಿ ಮಾಹಿತಿ ದೊರಕಿತ್ತು. ಸಂಚಾರಿ ಪೊಲೀಸರು ಕಾರನ್ನು ತಡೆಯಲು ಮುಂದಾದಾಗ ತಪ್ಪಿಸಿಕೊಳ್ಳುವ ಭರದಲ್ಲಿ ರಸ್ತೆ ಡಿವೈಡರ್‌ಗೆ ಬಡಿದು ಕಾರು ಉರುಳಿ ಬಿದ್ದಿದೆ. ಕಾರಿನಲ್ಲಿದ್ದ ಇಬ್ಬರನ್ನು ತಕ್ಷಣ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಸೆಂಟ್ ನಗರದ ನಿವಾಸಿಗಳಾದ ಅಯ್ಯನಾರ್ ಮತ್ತು ಸರಣ್ ತಾವು ಕಾರು ಕದ್ದಿರುವುದಾಗಿ ಒಪ್ಪಿಕೊಂಡಿದ್ದು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ