ಆ್ಯಪ್ನಗರ

ಇವಿಎಂ ದೂಷಿಸುವ ಚಾಳಿ ನಿಲ್ಲಿಸಿ: ಮತಯಂತ್ರಗಳು ನಿಖರ, ವಿಶ್ವಾಸಾರ್ಹ ಎಂದ ಕಾರ್ತಿ ಚಿದಂಬರಂ

ಇವಿಎಂ ಎಂದಿಗೂ ಸೂಕ್ತ, ನಿಖರ ಮತ್ತು ವಿಶ್ವಾಸಾರ್ಹ ಮತ್ತು ಇದರ ಮೇಲೆ ಅವಲಂಬಿತರಾಗಬಹುದು. ಇದು ನನ್ನ ಅಭಿಪ್ರಾಯ. ಬಹುತೇಕ ಎಲ್ಲ ಪಕ್ಷಗಳ ನಾಯಕರು ಇದರ ಬಗ್ಗೆ ಗುಮಾನಿ ಇಟ್ಟುಕೊಂಡಿದ್ದರು.

Vijaya Karnataka Web 10 Nov 2020, 5:55 pm
ಹೊಸದಿಲ್ಲಿ: ಇತ್ತೀಚೆಗೆ ಯಾವುದೇ ಚುನಾವಣೆ ಫಲಿತಾಂಶ ಬಂದರೂ ಪ್ರತಿಪಕ್ಷಗಳು ಮೊದಲು ಆರೋಪ ಮಾಡುವುದು ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಮೇಲೆ. ಇವಿಎಂಗಳ ಸರಿ ಇಲ್ಲ. ಹೀಗಾಗಿ ಬಿಜೆಪಿ ಗೆಲುವು ಸಾಧಿಸುತ್ತಿದೆ ಎಂದು ಕಾಂಗ್ರೆಸ್‌ ನಾಯಕರು ಹಲವಾರು ವರ್ಷಗಳಿಂದ ಆರೋಪ ಮಾಡಿಕೊಂಡು ಬರುತ್ತಲೇ ಇದ್ದಾರೆ.
Vijaya Karnataka Web ಕಾರ್ತಿ ಚಿದಂಬರಂ
ಕಾರ್ತಿ ಚಿದಂಬರಂ


ಆದರೆ ಕಾಂಗ್ರೆಸ್‌ ನಾಯಕರಿಗೇ ತಿರುಗೇಟು ನೀಡುವ ಮಾದರಿಯಲ್ಲಿ ಕಾರ್ತಿ ಚಿದಂಬರಂ ಟ್ವೀಟ್‌ ಮಾಡಿದ್ದಾರೆ.

ಎಲೆಕ್ಟ್ರಾನಿಕ್‌ ವೋಟಿಂಗ್‌ ಮೆಷಿನ್‌ ಸರಿ ಇಲ್ಲ ಎಂದು ದೂಷಿಸುವುದನ್ನು ಇನ್ನಾದರೂ ಬಿಡಿ. ಇವು ಅತ್ಯಂತ ನಿಖರ, ಸೂಕ್ತ ಹಾಗೂ ವಿಶ್ವಾಸಾರ್ಹ ಎಂದು ಕಾರ್ತಿ ಚಿದಂಬರಂ ಟ್ವೀಟಿಸಿದ್ದಾರೆ.


ಇವಿಎಂಗಳ ಬಗ್ಗೆ ಕಾಂಗ್ರೆಸ್‌ ನಾಯಕರು ನೀಡುತ್ತಿರುವ ಆರೋಪಗಳ ಹೇಳಿಕೆಗಳ ಬಗ್ಗೆ ಕಾಂಗ್ರೆಸ್‌ ಹಿರಿಯ ನಾಯಕ ಪಿ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇವಿಎಂ ಎಂದಿಗೂ ಸೂಕ್ತ, ನಿಖರ ಮತ್ತು ವಿಶ್ವಾಸಾರ್ಹ ಮತ್ತು ಇದರ ಮೇಲೆ ಅವಲಂಬಿತರಾಗಬಹುದು. ಇದು ನನ್ನ ಅಭಿಪ್ರಾಯ. ಬಹುತೇಕ ಎಲ್ಲ ಪಕ್ಷಗಳ ನಾಯಕರು ಇದರ ಬಗ್ಗೆ ಗುಮಾನಿ ಇಟ್ಟುಕೊಂಡಿದ್ದರು. ಅದರಲ್ಲೂ ಚುನಾವಣೆ ಫಲಿತಾಂಶ ಬಂದ ಮೇಲಂತೂ ಇವಿಎಂ ದೋಷಪೂರಿತ ಎನ್ನುವುದು ಸಾಮಾನ್ಯವಾಗಿತ್ತು. ಆದರೆ ಇದುವರೆಗೂ ಯಾರೂ ಕೂಡ ವೈಜ್ಞಾನಿಕವಾಗಿ ಹಾಗೂ ತಾಂತ್ರಿಕವಾಗಿ ಇದನ್ನು ದೋಷಪೂರಿತ ಎಂದು ಸಾಬೀತು ಪಡಿಸಲು ಆಗಿಲ್ಲ ಎಂದು ಕಾರ್ತಿ ಚಿದಂಬರಂ ಟ್ವೀಟ್‌ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ