ಆ್ಯಪ್ನಗರ

2ನೇ ಮದುವೆಗೆ ಮಕ್ಕಳಿಂದ ಅಡ್ಡಿ, 75 ವರ್ಷದ ತಂದೆ ಆತ್ಮಹತ್ಯೆ

ಉತ್ತರ ಪ್ರದೇಶದ ಬರೇಲಿಯ ಕಾನ್ಶೀರಾಮ್‌ ಕಾಲೊನಿಯಲ್ಲಿ ಈ ಘಟನೆ ನಡೆದಿದೆ. ಅರ್ಷದ್‌ ಅವರು ಮದುವೆಯಾಗಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ತಿಳಿದ ಮಕ್ಕಳು ವಿರೋಧಿಸಿದರು.

PTI 18 Aug 2019, 5:00 am
ಬರೇಲಿ: ಮಡದಿ ತೀರಿಕೊಂಡ ಬಳಿಕ ಎರಡನೇ ಮದುವೆಗೆ ಮಕ್ಕಳು ಅಡ್ಡಿಪಡಿಸಿದರೆಂಬ ಕಾರಣಕ್ಕಾಗಿ ನೊಂದು 75 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Vijaya Karnataka Web hang

ಉತ್ತರ ಪ್ರದೇಶದ ಬರೇಲಿಯ ಕಾನ್ಶೀರಾಮ್‌ ಕಾಲೊನಿಯಲ್ಲಿ ಈ ಘಟನೆ ನಡೆದಿದೆ. ಅರ್ಷದ್‌ ಅವರು ಮದುವೆಯಾಗಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ತಿಳಿದ ಮಕ್ಕಳು ವಿರೋಧಿಸಿದರು. ಇದರಿಂದ ಕುಟುಂಬದ ಮರ್ಯಾದೆ ಹೋಗುತ್ತದೆ ಎನ್ನುವುದು ಅವರ ವಾದವಾಗಿತ್ತು. ಗುರುವಾರ ರಾತ್ರಿ ಮಕ್ಕಳು ಮತ್ತು ತಂದೆ ನಡುವೆ ಭಾರಿ ವಾಗ್ವಾದವೇ ನಡೆದಿದೆ. ಶುಕ್ರವಾರ ಬೆಳಗ್ಗೆ ನೋಡಿದರೆ ಅರ್ಷದ್‌ ಅವರು ಮನೆಯ ಸೀಲಿಂಗ್‌ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದರು. ಅರ್ಷದ್‌ ಅವರಿಗೆ ಐದು ಗಂಡು ಮಕ್ಕಳಿದ್ದು, ಮೂವರು ಅವರ ಜತೆಗೇ ವಾಸಿಸುತ್ತಿದ್ದಾರೆ. ಮೂವರು ಪುತ್ರಿಯರಿಗೆ ಮದುವೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ