ಶ್ರೀನಗರ: ಶಾಂತಿ ಕಾಲದ ಸಂದರ್ಭದಲ್ಲಿ ಮೊದಲ ಸಲ ಭಾರತ, ನೆರೆ ರಾಷ್ಟ್ರದಲ್ಲಿರುವ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲು ವಾಯುಪಡೆ ಬಲ ಪ್ರಯೋಗಿಸಿದೆ. ನಿಜಕ್ಕೂ ಇದೊಂದು ಹೊಸ ಬಗೆಯ ಯುದ್ಧ ತಂತ್ರ ಎಂದು ಜಮ್ಮು-ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದಾರೆ. ಇದಕ್ಕೂ ಮೊದಲು ಅವರು '' ವಾಹ…! ಈ ಸುದ್ದಿ ನಿಜವೇ ಆದರೆ ಬಹಳ ಸಂತೋಷ. ಇಷ್ಟು ದೊಡ್ಡ ಪ್ರಮಾಣದ ದಾಳಿಯನ್ನು ಉಗ್ರರು ಊಹಿಸಲು ಸಾಧ್ಯವಿಲ್ಲ. ಅಧಿಕೃತ ಮಾಹಿತಿಗಾಗಿ ಕಾಯುತ್ತಿದ್ದೇನೆ,'' ಎಂದು ಟ್ವೀಟ್ ಮಾಡಿದ್ದರು. ಇನ್ನೊಂದೆಡೆ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ವಾಯುದಾಳಿ ಬಗ್ಗೆ ಅನುಮಾನ ವ್ಯಕ್ತಪಡಿಸುವ ರೀತಿಯಲ್ಲಿ ಮಾತನಾಡಿದ್ದಾರೆ.
ಇದು ಹೊಸ ಯುದ್ಧತಂತ್ರ: ಒಮರ್ ಅಬ್ದುಲ್ಲಾ
ನಿಜಕ್ಕೂ ಇದೊಂದು ಹೊಸ ಬಗೆಯ ಯುದ್ಧ ತಂತ್ರ ಎಂದು ಜಮ್ಮು-ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದಾರೆ.
Vijaya Karnataka 27 Feb 2019, 5:00 am