ಆ್ಯಪ್ನಗರ

ಶಿಕ್ಷಕನ ಚಿಕಿತ್ಸೆಗೆ ವಿದ್ಯಾರ್ಥಿಗಳಿಂದ ದೇಣಿಗೆ ಸಂಗ್ರಹ

ಸಾಮಾನ್ಯವಾಗಿ ಹಬ್ಬ ಮತ್ತಿತರ ಆಚರಣೆಯ ಸಂದರ್ಭ ವಿದ್ಯಾರ್ಥಿಗಳು ಕೂಡ ದೇಣಿಗೆ ಸಂಗ್ರಹಿಸಲು ತೊಡಗುವುದು ಸಾಮಾನ್ಯ ಸಂಗತಿ. ಅದರಲ್ಲೂ ಗಣೇಶ ಚತುರ್ಥಿ ಮತ್ತು ದುರ್ಗಾ ಪೂಜಾ ಸನ್ನಿಹಿತವಾಗಿರುವುದರಿಂದ ದೇಣಿಗೆ ಸಂಗ್ರಹ ಜೋರಾಗಿಯೇ ನಡೆಯುತ್ತದೆ.

Ei Samay 21 Aug 2018, 6:39 pm
ಕೋಲ್ಕತ: ಸಾಮಾನ್ಯವಾಗಿ ಹಬ್ಬ ಮತ್ತಿತರ ಆಚರಣೆಯ ಸಂದರ್ಭ ವಿದ್ಯಾರ್ಥಿಗಳು ಕೂಡ ದೇಣಿಗೆ ಸಂಗ್ರಹಿಸಲು ತೊಡಗುವುದು ಸಾಮಾನ್ಯ ಸಂಗತಿ. ಅದರಲ್ಲೂ ಗಣೇಶ ಚತುರ್ಥಿ ಮತ್ತು ದುರ್ಗಾ ಪೂಜಾ ಸನ್ನಿಹಿತವಾಗಿರುವುದರಿಂದ ದೇಣಿಗೆ ಸಂಗ್ರಹ ಜೋರಾಗಿಯೇ ನಡೆಯುತ್ತದೆ. ಪಶ್ಚಿಮ ಬಂಗಾಳದ ಕಾಶೀಪುರದಲ್ಲೂ ವಿದ್ಯಾರ್ಥಿಗಳು ದೇಣಿಗೆ ಸಂಗ್ರಹದಲ್ಲಿ ತೊಡಗಿದ್ದಾರೆ.
Vijaya Karnataka Web Teacherfund


ಹಿಂದು ಮುಸ್ಲಿಮ್‌ ವಿದ್ಯಾರ್ಥಿಗಳು ಒಟ್ಟಿಗೆ ದೇಣಿಗೆ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದು, ಜನರು ಬಕ್ರೀದ್ ಅಥವಾ ದುರ್ಗಾ ಪೂಜೆಗೆ ಹಣ ಸಂಗ್ರಹಿಸುತ್ತಿರಬಹುದು ಎಂದುಕೊಂಡಿದ್ದರು. ಆದರೆ ಮಕ್ಕಳು ಹಣ ಸಂಗ್ರಹಿಸಿದ್ದು ಹಬ್ಬ ಅಥವಾ ಯಾವುದೇ ಆಚರಣೆಗಲ್ಲ, ಬದಲಾಗಿ ಅದು ಅವರ ನೆಚ್ಚಿನ ಶಿಕ್ಷಕನ ಶಸ್ತ್ರಚಿಕಿತ್ಸೆಗಾಗಿ. ಜತೆಗೆ ದೇಗುಲ, ಮಂದಿರ ಮತ್ತು ಮಸೀದಿಯಲ್ಲೂ ಮಕ್ಕಳು ವಿಶೇಷ ಪ್ರಾರ್ಥನೆ ಸಲ್ಲಿಸಿ ಶಿಕ್ಷಕ ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸಿದ್ದಾರೆ.

ಮಕ್ಕಳ ನೆಚ್ಚಿನ ಶಿಕ್ಷಕ ಪಾಲಾಶ್ ಗಂಗೂಲಿಗೆ ಯಕೃತ್ ಸಮಸ್ಯೆ ಕಾಣಿಸಿಕೊಂಡಿದ್ದು, ಕಳೆದ ಹಲವು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೆಪ್ಟೆಂಬರ್‌ ಮೊದಲ ವಾರದಲ್ಲಿ ದಿಲ್ಲಿಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಅವರ ಪತ್ನಿಯ ಯಕೃತ್‌ನ ಭಾಗವನ್ನು ಕತ್ತರಿಸಿ ಅವರಿಗೆ ಜೋಡಿಸಲಾಗುತ್ತದೆ.
ಶಸ್ತ್ರಚಿಕಿತ್ಸೆ ಅಗತ್ಯವಾಗಿದ್ದು, ಅದಕ್ಕೆ ಬೇಕಾದ ಹಣದ ಕೊರತೆಯಿದೆ. ಈ ವಿಷಯ ಅರಿತ ವಿದ್ಯಾರ್ಥಿಗಳು ಸ್ವತಃ ತಾವೇ ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದಾರೆ.

ನೆಚ್ಚಿನ ಶಿಕ್ಷಕನನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂಬ ಕಾಳಜಿಯಿಂದ ಬಿಡುವಿನ ವೇಳೆಯಲ್ಲಿ ಸಮೀಪದ ನಗರಗಳಿಗೆ ತೆರಳಿ ದೇಣಿಗೆ ಯಾಚಿಸುತ್ತಿದ್ದಾರೆ. ಶಾಲೆಯ ಇತರ ಶಿಕ್ಷಕರು ಕೂಡ ವಿದ್ಯಾರ್ಥಿಗಳ ಕೆಲಸವನ್ನು ಶ್ಲಾಘಿಸಿದ್ದಾರೆ.

ಶಿಕ್ಷಕನ ಖಾತೆ ವಿವರ ಇಂತಿದ್ದು, ಸಹಾಯ ಮಾಡುವುದಿದ್ದಲ್ಲಿ:
Palash Ganguly,
Contact No: 9733651839/8617479467
Bank Account: SB 3615101000291, Canara Bank, Majerhat Branch
IFSC CNRB0003615.

ಮೂಲ ವರದಿ: ಈ ಸಮಯ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ