ಆ್ಯಪ್ನಗರ

ಅಪಘಾತದಲ್ಲಿ ಯುಪಿ 12ನೇ ತರಗತಿ ಟಾಪರ್ ಸಾವು: ಸುಂದರ ಕನಸಿಗೆ ಕೊಳ್ಳಿ ಇಟ್ಟರಾ ಕಿರಾತಕರು?

ಅಪಘಾತದಲ್ಲಿ 2018ರ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತರಪ್ರದೇಶ ರಾಜ್ಯಕ್ಕೆ ಮೊದಲ ಸ್ಥಾನಗಳಿಸಿದ್ದ ವಿದ್ಯಾರ್ಥಿನಿಯೋರ್ವಳು ಮೃತಪಟ್ಟಿದ್ದು, ಅಪಘಾತಕ್ಕೆ ಯುವಕರ ಗುಂಪೊಂದು ಆಕೆಯನ್ನು ಬೈಕ್‌ನಲ್ಲಿ ಹಿಂಬಾಲಿಸುತ್ತ ಕಿರುಕುಳ ನೀಡಿದ್ದೇ ಕಾರಣ ಎನ್ನಲಾಗಿದೆ.

Vijaya Karnataka Web 11 Aug 2020, 5:14 pm
ಬುಲಂದ್‌ಶಹರ್: ಅಪಘಾತದಲ್ಲಿ 2018ರ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತರಪ್ರದೇಶ ರಾಜ್ಯಕ್ಕೆ ಮೊದಲ ಸ್ಥಾನಗಳಿಸಿದ್ದ ವಿದ್ಯಾರ್ಥಿನಿಯೋರ್ವಳು ಮೃತಪಟ್ಟಿದ್ದು, ಅಪಘಾತಕ್ಕೆ ಯುವಕರ ಗುಂಪೊಂದು ಆಕೆಯನ್ನು ಬೈಕ್‌ನಲ್ಲಿ ಹಿಂಬಾಲಿಸುತ್ತ ಕಿರುಕುಳ ನೀಡಿದ್ದೇ ಕಾರಣ ಎನ್ನಲಾಗಿದೆ.

ಇಲ್ಲಿನ ಬುಲಂದ್‌ಶಹರ್‌ನ ಸುಧೀಕ್ಷಾ ಭಾಟಿ ಎಂಬ ಯುವರತಿ 2018ರ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತರ ಪ್ರದೇಶಕ್ಕೆ ಪ್ರಥಮ ಸ್ಥಾನ ಗಳಿಸಿದ್ದಳು. ನಂತರ ಸ್ಕಾಲರ್‌ಶಿಪ್ ಪಡೆದು ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಾಂಗ ಮಾಡುತ್ತಿದ್ದಳು.

ಮಾಸ್ಕ್‌ ಧರಿಸಿಲ್ಲ ಎಂದು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನ; ಮರಕ್ಕೆ ಡಿಕ್ಕಿ ಹೊಡೆದು ಪ್ರಾಣ ಬಿಟ್ಟ ಯುವಕ

ಕಳೆದ ಜೂನ್‌ನಲ್ಲಿ ಮಾರಕ ಕೊರೊನಾ ವೈರಸ್ ಹಾವಳಿಯ ಪರಿಣಾಮವಾಗಿ ಅಮೆರಿಕದಿಂದ ಮರಳಿದ್ದ ಸುಧೀಕ್ಷಾ ಭಾಟಿ, ತನ್ನ ಕುಟುಂಬಸ್ಥರೊಂದಿಗೆ ವಾಸಿಸುತ್ತಿದ್ದಳು.

ತನ್ನ ಚಿಕ್ಕಪ್ಪನ ಜೊತೆ ಹೊರಗೆ ಹೋಗಿದ್ದ ಸುಧೀಕ್ಷಾ ಭಾಟಿ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದಾಗ 20ರ ಆಸುಪಾಸಿನ ಇಬ್ಬರು ಯುವಕರು ಬೈಕ್‌ನಲ್ಲಿ ಬಂದು ಆಕೆಗೆ ಕಿರುಕುಳ ಕೊಟ್ಟಿದ್ದಾರೆ. ಅಲ್ಲದೇ ಚಿಕ್ಕಪ್ಪ ಓಡಿಸುತ್ತಿದ್ದ ಬೈಕ್‌ಗೆ ಗುದ್ದಿದ್ದಾರೆ.

ಭೀಕರ ರಸ್ತೆ ಅಪಘಾತ ಸಂಭವಿಸಿ ಯುವಕ ಸಾವು; ಮತ್ತೊಬ್ಬ ಗಂಭೀರ

ಇದರಿಂದ ನಿಯಂತ್ರಣ ತಪ್ಪಿ ಸುಧೀಕ್ಷಾ ಭಾಟಿ ಹಾಗೂ ಆಕೆಯ ಚಿಕ್ಕಪ್ಪ ಕೆಳಗೆ ಬಿದ್ದಿದ್ದು, ನೆಲಕ್ಕೆ ತಲೆ ಬಡಿದ ಪರಿಣಾಮ ಸುಧೀಕ್ಷಾ ಭಾಟಿ ಸ್ಥಳದಲ್ಲೇ ಅಸುನೀಗಿದ್ದಾಳೆ.

ಸುಧೀಕ್ಷಾ ಸಾವಿಗೆ ಬೈಕ್‌ನಲ್ಲಿ ಬಂದು ಕಿರುಕುಳ ನೀಡಿದ್ದೇ ಕಾರಣ ಎಂದು ಆಕೆಯ ಮನೆಯವರು ಆರೋಪಿಸಿದ್ದಾರೆ. ಆದರೆ ಪೊಲೀಸರು ಮಾತ್ರ ಇದೊಂದು ಅಪಘಾತ ಎಂದು ಹೇಳುತ್ತಿದ್ದಾರೆ.


ಸದ್ಯ ಸುಧೀಕ್ಷಾ ಸಾವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಭುಗಿಲೆದ್ದಿದ್ದು, #justiceforsudeeksha ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ತಪ್ಪಿಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ