ಹೊಸದಿಲ್ಲಿ: ಮುಖ್ಯ ಮಾಹಿತಿ ಆಯುಕ್ತರನ್ನಾಗಿ ಹಿರಿಯ ಐಎ್ಎಸ್ ಅಧಿಕಾರಿ ಸುಧೀರ್ ಭಾರ್ಗವ ಅವರನ್ನು ಕೇಂದ್ರ ಸರಕಾರ ನೇಮಕ ಮಾಡಿದೆ. ಭಾರ್ಗವ ಅವರು ಇದಕ್ಕೂ ಮೊದಲು ಮಾಹಿತಿ ಆಯುಕ್ತರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮಾಹಿತಿ ಆಯುಕ್ತರಾಗಿ ಮಾಜಿ ಐಎ್ಎಸ್ ಅಧಿಕಾರಿ ಯಶವರ್ಧನ್ ಕುಮಾರ್ ಸಿನ್ಹಾಘಿ, ಮಾಜಿ ಐಆರ್ಎಸ್ ಅಧಿಕಾರಿ ವನಜಾ ಎನ್. ಸರ್ಣಾ, ಮಾಜಿ ಐಎಎಸ್ ಅಧಿಕಾರಿ ನೀರಜ್ ಕುಮಾರ್ ಗುಪ್ತಾ ಮತ್ತು ಮಾಜಿ ಕಾನೂನು ಕಾರ್ಯದರ್ಶಿ ಸುರೇಶ್ ಚಂದ್ರ ಅವರನ್ನು ಮಾಹಿತಿ ಆಯುಕ್ತರನ್ನಾಗಿ ನೇಮಿಸಲಾಗಿದೆ. ಈ ನೇಮಕಗಳಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅನುಮೋದನೆ ನೀಡಿದ್ದಾರೆ.
ಮುಖ್ಯ ಮಾಹಿತಿ ಆಯುಕ್ತರಾಗಿ ಸುಧೀರ್ ಭಾರ್ಗವ ನೇಮಕ
ಮಾಹಿತಿ ಆಯುಕ್ತರಾಗಿ ಮಾಜಿ ಐಎ್ಎಸ್ ಅಧಿಕಾರಿ ಯಶವರ್ಧನ್ ಕುಮಾರ್ ಸಿನ್ಹಾಘಿ, ಮಾಜಿ ಐಆರ್ಎಸ್ ಅಧಿಕಾರಿ ವನಜಾ ಎನ್. ಸರ್ಣಾ, ಮಾಜಿ ಐಎಎಸ್ ಅಧಿಕಾರಿ ನೀರಜ್ ಕುಮಾರ್ ಗುಪ್ತಾ ಮತ್ತು ಮಾಜಿ ಕಾನೂನು ಕಾರ್ಯದರ್ಶಿ ಸುರೇಶ್ ಚಂದ್ರ ಅವರನ್ನು ಮಾಹಿತಿ ಆಯುಕ್ತರನ್ನಾಗಿ ನೇಮಿಸಲಾಗಿದೆ.
Vijaya Karnataka 1 Jan 2019, 5:00 am