ಆ್ಯಪ್ನಗರ

ನಕ್ಸಲರ ಕೈಯಲ್ಲಿ ರಾಕೆಟ್ ಲಾಂಚರ್, ಎಕೆ-47 ಸಹಿತ ಆಧುನಿಕ ಶಸ್ತ್ರಾಸ್ತ್ರ!

ಛತ್ತೀಸಗಡದಲ್ಲಿ ನಡೆದ ಸುಕ್ಮಾ ನಕ್ಸಲರ ಘೋರ ದಾಳಿ ಕುರಿತಾಗಿನ ನಂಬಲಸಾಧ್ಯ ಸತ್ಯಗಳನ್ನು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಆರ್‌ಪಿಎಫ್ ಯೋಧರು ಬಿಚ್ಚಿಟ್ಟಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 25 Apr 2017, 9:14 pm
ರಾಯ್‌ಪುರ: ಛತ್ತೀಸಗಡದಲ್ಲಿ ನಡೆದ ಸುಕ್ಮಾ ನಕ್ಸಲರ ಘೋರ ದಾಳಿ ಕುರಿತಾಗಿನ ನಂಬಲಸಾಧ್ಯ ಸತ್ಯಗಳನ್ನು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಆರ್‌ಪಿಎಫ್ ಯೋಧರು ಬಿಚ್ಚಿಟ್ಟಿದ್ದಾರೆ.
Vijaya Karnataka Web sukma attack maoists were armed with rocket launchers ak 47s say injured crpf jawans
ನಕ್ಸಲರ ಕೈಯಲ್ಲಿ ರಾಕೆಟ್ ಲಾಂಚರ್, ಎಕೆ-47 ಸಹಿತ ಆಧುನಿಕ ಶಸ್ತ್ರಾಸ್ತ್ರ!


ನಕ್ಸಲರ ಬಳಿ ರಾಕೆಟ್ ಲಾಂಚರ್, ಎಕೆ-47, ಗ್ರೇನೆಡ್‌ಗಳಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿದ್ದವು ಎಂಬುದನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೋಧರು ಬಹಿರಂಗಪಡಿಸಿದ್ದಾರೆ. ನಕ್ಸಲರ ಕೈಗಳಿಗೆ ಇವುಗಳು ಎಲ್ಲಿಂದ ಬಂದು ಸೇರುತ್ತಿದೆ ಎಂಬುದು ಭದ್ರತಾ ಪಡೆಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

300ರಷ್ಟು ಸೇರಿದ ಸುಕ್ಮಾ ನಕ್ಸಲರ ಪಡೆ ಏಕಾಏಕಿ ದಾಳಿಯನ್ನು ನಡೆಸಿತ್ತು. ಎಲ್ಲರೂ ಕಪ್ಪು ಬಟ್ಟೆಯನ್ನು ತೊಟ್ಟಿದ್ದರು ಎಂದು ಜವಾನರು ವಿವರಿಸುತ್ತಾರೆ.

ನಕ್ಸಲರು ನಡೆಸಿದ ದಾಳಿಗೆ 25 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ದಟ್ಟಾರಣ್ಯದಿಂದ ಕೂಡಿದ ಪ್ರದೇಶವು ಮಾವೋವಾದಿಗಳ ಪ್ರಮುಖ ಅಡಗು ತಾಣವಾಗಿದೆ. ಇದೊಂದು ಹೊಂಚಿನ ಕೃತ್ಯ ಎಂಬುದು ಸಾಬೀತಾಗಿದೆ.

ಯೋಧರು ಬಿಚ್ಚಿಟ್ಟ ಸತ್ಯ...
ಛತ್ತೀಸಗಡ ಸುಕ್ಮಾದಲ್ಲಿ ರಸ್ತೆ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರಿಗೆ 99 ಸಿಆರ್‌ಪಿಎಫ್ ಯೋಧರು ಭದ್ರತೆಯನ್ನು ಒದಗಿಸುತ್ತಿದ್ದರು. ಈ ವೇಳೆಯಲ್ಲಿ ಗ್ರಾಮೀಣ ನಿವಾಸಿಗಳು ಮೊದಲು ಆಗಮಿಸಿದರು. ನಮ್ಮ ಠಿಕಾಣಿಯನ್ನು ಚೆನ್ನಾಗಿ ಅರಿಯುವುದು ಇದರ ಹಿಂದಿನ ಉದ್ದೇಶವಾಗಿತ್ತು. ಬಳಿಕ ನಕ್ಸಲ್ ಪಡೆಯ ಏಕಾಏಕಿ ದಾಳಿ ನಡೆದಿತ್ತು ಎಂಬುದನ್ನು ವಿವರಿಸಲಾಗಿದೆ.

ಗ್ರಾಮ ನಿವಾಸಿಗಳಲ್ಲಿ ಶಸ್ತ್ರಾಸ್ತ್ರಗಳು ಇಲ್ಲದಿರುವುದರಿಂದ ಪ್ರತಿ ದಾಳಿ ನಡೆಸಲು ನಮ್ಮಿಂದ ಸಾಧ್ಯವಾಗಿರಲಿಲ್ಲ. ಅಷ್ಟೇ ಯಾಕೆ ನಕ್ಸಲ್ ಪಡೆಯಲ್ಲಿ ಮಹಿಳೆಯರು ಇದ್ದರು ಎಂಬುದನ್ನು ಜವಾನರು ತಿಳಿಸಿದ್ದಾರೆ.

ನಕ್ಸಲ್ ದಾಳಿಗೆ ಬಲಿಯಾಗಿದ್ದ 25 ಸಿಆರ್‌ಪಿಎಫ್ ಜವಾನರು ಊಟಕ್ಕೆ ಕುಳಿತಿದ್ದರು. ಇದರಿಂದಾಗಿ ನಕ್ಸಲರ ದಾಳಿ ಬಗ್ಗೆ ಎಚ್ಚರಿಕೆ ವಹಿಸಲು ಸಾಧ್ಯವಾಗಲಿಲ್ಲ. ಅಲ್ಲದೆ ಯೋಧರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ದೋಚಿಕೊಳ್ಳಲಾಗಿದೆ.

ದಕ್ಷಿಣ ಬಸ್ತಾರ್ ಭಾಗವಾಗಿರುವ ಸುಕ್ಮಾದಲ್ಲಿ ದಶಕಗಳಿಂದಲೂ ಮಾವೋವಾದಿಗಳ ಪಡೆ ಗೆರಿಲ್ಲಾ ಯುದ್ಧವನ್ನು ನಡೆಸುತ್ತಿದೆ. ಇಂತಹ ಉದ್ರಿಗ್ಧ ಪ್ರದೇಶಗಳಲ್ಲಿ ಕಂಡಲ್ಲಿ ಗುಂಡು ಹೊಡೆಯುವ ಅಧಿಕಾರವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ರಾಜ್‌ನಾಥ್ ಸಿಂಗ್ ನೀಡುವಂತೆ ಕೋರಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ