ಆ್ಯಪ್ನಗರ

ಅಯೋಧ್ಯೆಯಲ್ಲಿ ಭೂಮಿ ಪಡೆವ ಗೊಂದಲ, ಕಾನೂನು ತಜ್ಞರ ಜತೆ ವಕ್ಫ್ ಮಂಡಳಿ ಚರ್ಚೆ

ಸುಪ್ರೀಂ ಕೋರ್ಟ್‌ ತೀರ್ಪಿನಂತೆ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಕೇಂದ್ರ ಸರಕಾರ ಪರ್ಯಾಯವಾಗಿ ಬೇರೆ ಕಡೆ ನೀಡಲಿರುವ ಐದು ಎಕರೆ ಭೂಮಿಯನ್ನು ಪಡೆದುಕೊಳ್ಳುವ ವಿಚಾರವಾಗಿ ಸುನ್ನಿ ವಕ್ಫ್ ಮಂಡಳಿಯು ಕಾನೂನು ತಜ್ಞರನ್ನು ಭೇಟಿಯಾಗಿ ಚರ್ಚಿಸಿದೆ.

Vijaya Karnataka Web 16 Nov 2019, 7:13 am
Vijaya Karnataka Web Sunni Central Waqf Board
ಲಖನೌ: ಸುಪ್ರೀಂ ಕೋರ್ಟ್‌ ತೀರ್ಪಿನಂತೆ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಕೇಂದ್ರ ಸರಕಾರ ಪರ್ಯಾಯವಾಗಿ ಬೇರೆ ಕಡೆ ನೀಡಲಿರುವ ಐದು ಎಕರೆ ಭೂಮಿಯನ್ನು ಪಡೆದುಕೊಳ್ಳುವ ವಿಚಾರದಲ್ಲಿ ಸುನ್ನಿ ವಕ್ಫ್ ಮಂಡಳಿಯು ಕಾನೂನು ತಜ್ಞರ ಅಭಿಪ್ರಾಯ ಪಡೆದುಕೊಳ್ಳುತ್ತಿದೆ.

ಅಲ್ಲದೇ ಈ ವಿಷಯದಲ್ಲಿಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ನೀಡಲಿರುವ ಅಭಿಪ್ರಾಯಕ್ಕೆ ಹೆಚ್ಚಿನ ಮನ್ನಣೆ ನೀಡುವುದಾಗಿ ಮಂಡಳಿ ಹೇಳಿದೆ.

''ಅಯೋಧ್ಯೆಯಲ್ಲಿ ಪರ್ಯಾಯ ಜಾಗದಲ್ಲಿ ಮಸೀದಿ ನಿರ್ಮಾಣಕ್ಕೆ ಸರಕಾರ ನೀಡಲಿರುವ ಐದು ಎಕರೆ ಭೂಮಿಯನ್ನು ಸ್ವೀಕರಿಸುವ ವಿಚಾರದಲ್ಲಿ ವಕ್ಫ್ ಬೋರ್ಡ್‌ ನಲ್ಲಿಯೇ ಗೊಂದಲವಿದೆ. ಒಂದೊಮ್ಮೆ ಭೂಮಿ ನಿರಾಕರಿಸಿದಲ್ಲಿಇದು ಸುಪ್ರೀಂ ತೀರ್ಪು ಉಲ್ಲಂಘಿಸಿದಂತಾಗಿ ನ್ಯಾಯಾಂಗ ನಿಂದನೆಯಾಗುತ್ತದೆಯೇ ಎಂಬ ವಿಚಾರದಲ್ಲಿ ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗುತ್ತಿದೆ. ನವೆಂಬರ್‌ 26ರಂದು ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು,'' ಎಂದು ಮಂಡಳಿ ಅಧ್ಯಕ್ಷ ಜುಫರ್‌ ಫಾರೂಕಿ ಹೇಳಿದ್ದಾರೆ.

ಅಯೋಧ್ಯೆ ಭೂ ವಿವಾದ ಪ್ರಕರಣದಲ್ಲಿ ಕಕ್ಷಿದಾರರಾಗಿದ್ದ ಜಮಾತೆ ಉಲೇಮಾ-ಇ-ಹಿಂದ್‌(ಜೆಯುಎಚ್‌), ಮಸೀದಿ ನಿರ್ಮಾಣಕ್ಕೆ ಸರಕಾರ ನೀಡಲಿರುವ 5 ಎಕರೆ ಭೂಮಿ ಸ್ವೀಕರಿಸುವುದು ಬೇಡ ಎಂದು ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ