ಆ್ಯಪ್ನಗರ

ಕೈಮಗ್ಗ ಉತ್ತೇಜನಕ್ಕೆ ಸೀರೆಯುಟ್ಟು ಮಹಿಳಾ ಎಂಜಿನಿಯರ್‌ ಓಟ

ಮ್ಯಾರಥಾನ್‌ ಓಟ ಸುಲಭದ ಮಾತಲ್ಲ. ಅದೂ 42 ಕಿ.ಮೀ. ಓಟ. ಅದರಲ್ಲೂ ಸೀರೆ ಉಟ್ಟುಕೊಂಡು ಓಡೋದಂತೂ ಮಹಾ ಸಾಹಸವೇ ಸರಿ. ಹೈದರಾಬಾದ್‌ ಮೂಲದ ಎಂಜಿನಿಯರ್‌ ಜಯಂತಿ ಸಂಪತ್‌ ಕುಮಾರ್‌ ಇದನ್ನು ಸಾಧಿಸಿದ್ದಾರೆ!

ಏಜೆನ್ಸೀಸ್ 25 Aug 2017, 10:15 am
ಹೈದರಾಬಾದ್‌: ಮ್ಯಾರಥಾನ್‌ ಓಟ ಸುಲಭದ ಮಾತಲ್ಲ. ಅದೂ 42 ಕಿ.ಮೀ. ಓಟ. ಅದರಲ್ಲೂ ಸೀರೆ ಉಟ್ಟುಕೊಂಡು ಓಡೋದಂತೂ ಮಹಾ ಸಾಹಸವೇ ಸರಿ. ಹೈದರಾಬಾದ್‌ ಮೂಲದ ಎಂಜಿನಿಯರ್‌ ಜಯಂತಿ ಸಂಪತ್‌ ಕುಮಾರ್‌ ಇದನ್ನು ಸಾಧಿಸಿದ್ದಾರೆ!
Vijaya Karnataka Web support to handloom saree clad woman ran 42 km
ಕೈಮಗ್ಗ ಉತ್ತೇಜನಕ್ಕೆ ಸೀರೆಯುಟ್ಟು ಮಹಿಳಾ ಎಂಜಿನಿಯರ್‌ ಓಟ


ಒಂಬತ್ತು ಗಜ ಉದ್ದದ ನೇರಳೆ ಬಣ್ಣದ ಸೀರೆಯುಟ್ಟು, ಹಣೆಯ ಮೇಲೆ ಚಂದದ ಬಿಂದಿ ಇಟ್ಟು ಮ್ಯಾರಥಾನ್‌ನಲ್ಲಿ ಭಾಗವಹಿಸಿದ ಅವರು, ಟ್ರ್ಯಾಕ್‌ ಸೂಟ್‌, ಟೀ ಶರ್ಟ್‌ ಧರಿಸಿ ಪಾಲ್ಗೊಂಡಿದ್ದ 20000 ಸ್ಪರ್ಧಿಗಳಲ್ಲಿ ತುಂಬ ಭಿನ್ನವಾಗಿ ಕಂಡರು. ಅದಕ್ಕಾಗಿಯೇ ಏರ್‌ಟೆಲ್‌ ಆಯೋಜಿಸಿದ್ದ ಈ ಮ್ಯಾರಥಾನ್‌ ಮುಗಿಯುತ್ತಿದ್ದಂತೆಯೇ ನೂರಾರು ಮಂದಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

ಅಷ್ಟಕ್ಕೂ 44 ವರ್ಷದ ಈ ಮಹಿಳೆಯ ಉದ್ದೇಶವೇನು ಗೊತ್ತೇ? ಕೈಮಗ್ಗ ಉದ್ಯಮದ ಉತ್ತೇಜನ ಮತ್ತು ಮಹಿಳೆಯರಲ್ಲಿ ಸೀರೆ ಬಗ್ಗೆ ಆಸಕ್ತಿ ಮೂಡಿಸುವುದು. ‘‘ನಾನೊಬ್ಬ ಸೈಕ್ಲಿಸ್ಟ್‌. ಆಗಾಗ ಸವಾರಿ ಮಾಡ್ತೇನೆ. ನನ್ನ ಸುತ್ತಮುತ್ತ ಆಗುತ್ತಿರುವ ಪ್ಲಾಸ್ಟಿಕ್‌ ಮಾಲಿನ್ಯದ ವಿರುದ್ಧ ಹೋರಾಡಲು ಈ ವೇದಿಕೆಯನ್ನು ಬಳಸಿಕೊಳ್ಳಲು ಬಯಸಿದ್ದೇನೆ. ಅದಕ್ಕಾಗಿ ಜನರು ಬಳಸಿ ಸೆಳೆದ ಪ್ಲಾಸ್ಟಿಕ್‌ ರಾರ‍ಯಪರ್‌ಗಳಿಂದ ಮಾಡಿದ ಸೀರೆ ಉಟ್ಟು ಓಡಬೇಕಾದೀತೇನೋ,’’ ಎಂದು ಹೇಳುತ್ತಾರೆ ಜಯಂತಿ.

ನಿಜವೆಂದರೆ, ಜಯಂತಿ ಅವರು ಬರಿಗಾಲಲ್ಲಿ ಮ್ಯಾರಥಾನ್‌ನಲ್ಲಿ ಓಡಲು ಬಯಸಿದ್ದರು. ಇದು ವೇಗಕ್ಕೆ ಸಹಾಯ ಮಾಡಬಹುದು ಎನ್ನುವುದು ಅವರ ಯೋಚನೆಯಾಗಿತ್ತು. ಆದರೆ, ಟ್ರ್ಯಾಕ್‌ನಲ್ಲಿ ಸಿಕ್ಕಾಪಟ್ಟೆ ಕಲ್ಲು ಇದ್ದುದರಿಂದ ಚಪ್ಪಲಿ ಹಾಕಲು ನಿರ್ಧರಿಸಿದರು.

ಗಿನ್ನೆಸ್‌ ದಾಖಲೆಗೆ ಅರ್ಜಿ
ಜಯಂತಿ ಅವರು ಈ ಓಟವನ್ನು ‘ಸೀರೆಯಲ್ಲಿ ವೇಗದ ಮ್ಯಾರಥಾನ್‌’ ಕೆಟಗರಿಯಲ್ಲಿ ಗಿನ್ನೆಸ್‌ ದಾಖಲೆಗೆ ಸೇರಿಸಲು ಅರ್ಜಿ ಹಾಕಿದ್ದಾರೆ. ಐದು ಗಂಟೆಯ ಒಳಗೆ ಓಟವನ್ನು ಮುಗಿಸುವ ಷರತ್ತನ್ನು ಪೂರೈಸಿರುವ ಬಗ್ಗೆ ಅವರಿಗೆ ವಿಶ್ವಾಸವಿದೆ.27 ವರ್ಷದ ಉದಯ ಭಾಸ್ಕರ್‌ ದಂಡಮುಡಿ ಎಂಬವರು ಧೋತಿ ಉಟ್ಟುಕೊಂಡು ಸ್ಪರ್ಧೆಯಲ್ಲಿ ಪಾಲ್ಗೊಂಡು ಜಯಂತಿ ಅವರಿಗೆ ಬೆಂಬಲ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ