ಆ್ಯಪ್ನಗರ

ರೋಹಿಂಗ್ಯಾ ಗಡಿಪಾರು ಕುರಿತ ಅರ್ಜಿ ವಿಚಾರಣೆಗೆ ಒಪ್ಪಿದ ಸುಪ್ರೀಂ

ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶ ವಲಸಿಗರನ್ನು ಪತ್ತೆ ಮಾಡಿ ಅವರನ್ನು ಗಡಿಪಾರು ಮಾಡುವ ಸಂಬಂಧ ಸಲ್ಲಿಕೆಯಾಗಿರುವ ಪಿಐಎಲ್‌ ವಿಚಾರಣೆಯನ್ನು ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

Vijaya Karnataka Web 22 Nov 2019, 10:05 am
ಹೊಸದಿಲ್ಲಿ: ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶ ವಲಸಿಗರನ್ನು ಪತ್ತೆ ಮಾಡಿ ಅವರನ್ನು ಗಡಿಪಾರು ಮಾಡುವ ಸಂಬಂಧ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ವಿಚಾರಣೆಯನ್ನು ನಾಲ್ಕು ವಾರಗಳ ಬಳಿಕ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.
Vijaya Karnataka Web supreme court agreed to hear pil seeking identification rohingya muslims staying in india
ರೋಹಿಂಗ್ಯಾ ಗಡಿಪಾರು ಕುರಿತ ಅರ್ಜಿ ವಿಚಾರಣೆಗೆ ಒಪ್ಪಿದ ಸುಪ್ರೀಂ


ಬಿಜೆಪಿ ನಾಯಕ ಹಾಗೂ ಹಿರಿಯ ವಕೀಲ ಅಶ್ವನಿ ಉಪಾಧ್ಯಾಯ ಅವರು ಸಲ್ಲಿಸಿರುವ ಪಿಐಎಲ್‌ನಲ್ಲಿ, ಅಕ್ರಮ ವಲಸಿಗರು ದೇಶದ ಪ್ರಜೆಗಳ ಅವಕಾಶಗಳನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನು ಪರಿಗಣಿಸಿದ ಸಿಜೆಐ ಎಸ್‌.ಎ. ಬೊಬ್ಡೆ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ನಾಲ್ಕು ವಾರಗಳ ನಂತರ ಪಿಐಎಲ್‌ ಅನ್ನು ಲಿಸ್ಟಿಂಗ್‌ಗೆ ಹಾಕಿ ಕೋರ್ಟ್‌ ರಿಜಿಸ್ಟ್ರಾರ್‌ಗೆ ಸೂಚಿಸಿತು.

ಇದು ಬೆಚ್ಚಿಬೀಳಿಸುವ ಸುದ್ದಿ: ಬೆಂಗಳೂರಲ್ಲಿದ್ದಾರೆ ಬಾಂಗ್ಲಾ ಉಗ್ರರು!

ಕೇಂದ್ರ ಸರಕಾರ ದೇಶದಲ್ಲಿ ಬೀಡುಬಿಟ್ಟಿರುವ 40 ಸಾವಿರಕ್ಕೂ ಅಧಿಕ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು (ರೋಹಿಂಗ್ಯಾ ಮುಸ್ಲಿಮರು) ಗುರುತಿಸಿ, ವಾಪಸ್‌ ಕಳುಹಿಸಲು ಮುಂದಾಗಿದೆ. ಈ ನಡೆಯಿಂದ ದೇಶದ ಪ್ರಜೆಗಳಿಗೆ ಅವರ ಮೂಲಭೂತ ಸೌಕರ್ಯ ದಕ್ಕಲಿದೆ. ಸದ್ಯ ವಲಸಿಗರು ಅದನ್ನು ಕಸಿಯುತ್ತಿದ್ದಾರೆ.

NRC: ಅಕ್ರಮ ವಲಸಿಗರಿಗೆ ಇಲ್ಲ ಉಳಿಗಾಲ

ಮ್ಯಾನ್ಮಾರ್‌ ಮತ್ತು ಬಾಂಗ್ಲಾದೇಶದಿಂದ ಭಾರಿ ಪ್ರಮಾಣದಲ್ಲಿ ವಲಸೆ ಬಂದಿರುವವರು ಗುವಾಹಟಿ, ಕೋಲ್ಕೊತಾ, ತ್ರಿಪುರಾದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಅವರನ್ನು ಅಕ್ರಮವಾಗಿ ಕರೆತರುವ ಏಜೆಂಟರು ಹಾಗೂ ಅಕ್ರಮ ಜಾಲ ಕೂಡ ಇದೆ. ಇದು ದೇಶದ ಭದ್ರತೆಗೆ ಭವಿಷ್ಯದಲ್ಲಿಅಪಾಯ ಉಂಟುಮಾಡಲಿದೆ ಎಂದು ಪಿಐಎಲ್‌ನಲ್ಲಿ ಉಪಾಧ್ಯಾಯ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ