ಆ್ಯಪ್ನಗರ

20 ಕೋಟಿ ರೂ. ಠೇವಣಿ ವಾಪಸ್‌ ಪಡೆಯಲು ಕಾರ್ತಿಗೆ ಸುಪ್ರೀಂ ಕೋರ್ಟ್‌ ಅನುಮತಿ

ಐಎನ್‌ಎಕ್ಸ್‌ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ತನಿಖೆ ಎದರಿಸುತ್ತಿರುವ ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ ಅವರಿಗೆ ಕೋರ್ಟ್‌ ರಿಜಿಸ್ಟ್ರಿಗೆ ಸಲ್ಲಿಸಿದ್ದ 20 ಕೋಟಿ ರೂ ಠೇವಣಿ ಹಣ ವಾಪಸ್‌ ಪಡೆಯಲು ಸುಪ್ರೀಂ ಕೋರ್ಟ್‌ ಶುಕ್ರವಾರ ಅನುಮತಿ ನೀಡಿದೆ.

Vijaya Karnataka Web 18 Jan 2020, 9:12 am
ಹೊಸದಿಲ್ಲಿ: ಕೋರ್ಟ್‌ ರಿಜಿಸ್ಟ್ರಿಗೆ ಸಲ್ಲಿಸಿದ್ದ 20 ಕೋಟಿ ರೂ. ಠೇವಣಿ ಹಣ ವಾಪಸ್‌ ಪಡೆಯಲು ಸುಪ್ರೀಂ ಕೋರ್ಟ್‌ ಶುಕ್ರವಾರ ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ ಅವರಿಗೆ ಅನುಮತಿ ನೀಡಿದೆ.
Vijaya Karnataka Web Congress leader Karti Chidambaram


ಐಎನ್‌ಎಕ್ಸ್‌ ಮೀಡಿಯಾ ಭ್ರಷ್ಟಾಚಾರ ಪ್ರಕರಣ ಹಾಗೂ ಏರ್ಸೆಲ್‌-ಮ್ಯಾಕ್ಸಿಸ್‌ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ತನಿಖೆ ಎದುರಿಸುತ್ತಿರುವ ಕಾರ್ತಿ ಅವರಿಗೆ ಸುಪ್ರೀಂ ಕೋರ್ಟ್‌ ಈ ಹಿಂದೆ ಷರತ್ತುಬದ್ಧ ಜಾಮೀನು ನೀಡಿತ್ತು. ಅಲ್ಲದೇ ಪ್ರತಿ ಪ್ರಕರಣದಲ್ಲಿ ತಲಾ 10 ಕೋಟಿ ರೂ. ಕೋರ್ಟ್‌ ರಿಜಿಸ್ಟ್ರಿಗೆ ಠೇವಣಿ ರೂಪದಲ್ಲಿ ಸಲ್ಲಿಸಿ ವಿದೇಶ ಪ್ರಯಾಣ ಮಾಡಬಹುದೆಂದು ನ್ಯಾಯಾಲಯ ಕಳೆದ ವರ್ಷದ ಜನವರಿ ಮತ್ತು ಮೇನಲ್ಲಿಆದೇಶಿಸಿತ್ತು.

ಈ ಠೇವಣಿ ಹಣ ವಾಪಸ್‌ ಪಡೆಯಲು ಅವಕಾಶ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸಿಜೆಐ ಎಸ್‌.ಎ.ಬೊಬ್ಡೆ ನೇತೃತ್ವದ ನ್ಯಾಯಪೀಠ, ಕಾರ್ತಿ ಈಗಾಗಲೇ ತವರಿಗೆ ಮರಳಿರುವ ಹಿನ್ನೆಲೆಯಲ್ಲಿ ಅವರು ಠೇವಣಿ ಹಣ ಪಡೆಯಬಹುದು ಎಂದು ಹೇಳಿತು. ಠೇವಣಿ ಹಣ ಹಿಂಪಡೆಯುವುದಕ್ಕೆ ವಿಚಾರಣೆ ವೇಳೆ ಇ.ಡಿ ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ