ಆ್ಯಪ್ನಗರ

ಸುಪ್ರೀಂ ನೇಮಿಸಿದ ಸಂಧಾನಕಾರರು ಶಹೀನ್‌ ಭಾಗ್‌ಗೆ ಭೇಟಿ; ರಸ್ತೆ ತಡೆ ನಿಲ್ಲಿಸಿ ಎಂದು ಪ್ರತಿಭಟನಾಕಾರರಿಗೆ ಸೂಚನೆ

ಸುಪ್ರೀಂ ಕೋರ್ಟ್‌ ಸೂಚನೆ ಮೇರೆಗೆ ನಾವು ಇಲ್ಲಿಗೆ ಬಂದಿದ್ದೇವೆ. ಈಗ ಯಾವುದೇ ರೀತಿಯ ಆತುರ ಇಲ್ಲ. ಎಲ್ಲ ಮಾಹಿತಿಗಳನ್ನು ಪಡೆದುಕೊಳ್ಳುತ್ತೇವೆ. ಎಲ್ಲ ವಿಷಯಗಳ ಬಗ್ಗೆಯೂ ಚರ್ಚಿಸುತ್ತೇವೆ ಎಂದು ಸಂಜಯ್‌ ಹೆಗಡೆ ತಿಳಿಸಿದರು.

Vijaya Karnataka Web 19 Feb 2020, 4:29 pm
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಕಳೆದ ಕೆಲವು ವಾರಗಳಿಂದ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ಶಹೀನ್‌ ಭಾಗ್‌ನಲ್ಲಿ ನಡೆಸುತ್ತಿರುವ ಪ್ರತಿಭಟನೆ ಭಾರಿ ಸದ್ದು ಮಾಡಿದೆ.
Vijaya Karnataka Web ಸಂಧಾನಕಾರರು
ಸಂಧಾನಕಾರರು


ಈ ಪ್ರತಿಭಟನೆಯ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ತೀವ್ರ ಕಳವಳ ವ್ಯಕ್ತಪಡಿಸಿದೆ. ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಲು ಸುಪ್ರೀಂ ಕೋರ್ಟ್‌ ಸಂಧಾನಕಾರರನ್ನು ನೇಮಿಸಿದೆ.

ಹಿರಿಯ ವಕೀಲರಾದ ಸಂಜಯ್‌ ಹೆಗಡೆ, ಸಾಧನಾ ರಾಮಚಂದ್ರನ್‌, ನಿವೃತ್ತ ಸಿಐಸಿ ವಜಾಹತ್‌ ಹಬೀಬುಲ್ಲಾ ಅವರು ಬುಧವಾರ ಮಧ್ಯಾಹ್ನ ಶಹೀನ್‌ ಭಾಗ್‌ಗೆ ಭೇಟಿ ನೀಡಿ ಸಂಧಾನ ನಡೆಸಿದರು.

ಈ ಸಂದರ್ಭದಲ್ಲಿ ಮಾಧ್ಯಮದವರು ಇರಬೇಕು ಎಂದು ಪ್ರತಿಭಟನಾಕಾರರು ಸಂಧಾನಕಾರರಿಗೆ ತಿಳಿಸಿದರು

ಸುಪ್ರೀಂ ಕೋರ್ಟ್‌ ಸೂಚನೆ ಮೇರೆಗೆ ನಾವು ಇಲ್ಲಿಗೆ ಬಂದಿದ್ದೇವೆ. ಈಗ ಯಾವುದೇ ರೀತಿಯ ಆತುರ ಇಲ್ಲ. ಎಲ್ಲ ಮಾಹಿತಿಗಳನ್ನು ಪಡೆದುಕೊಳ್ಳುತ್ತೇವೆ. ಎಲ್ಲ ವಿಷಯಗಳ ಬಗ್ಗೆಯೂ ಚರ್ಚಿಸುತ್ತೇವೆ ಎಂದು ಸಂಜಯ್‌ ಹೆಗಡೆ ತಿಳಿಸಿದರು.

ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಆದೇಶದ ಪ್ರತಿಯನ್ನು ಸಂಜಯ್‌ ಹೆಗಡೆ ಓದಿದರು.

ಸುಪ್ರೀಂ ಕೋರ್ಟ್‌ ನೀಡಿದ ಆದೇಶವನ್ನು ಪಾಲಿಸುವುದು ಈಗ ನಮ್ಮ ಮುಂದಿರುವ ಆದ್ಯತೆ. ಪ್ರತಿಭಟನೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಸಾವಿರಾರು ಜನರಿಗೆ ತೊಂದರೆಯಾಗುವಂತೆ ರಸ್ತೆ ತಡೆ ನಡೆಸುವುದು ತಪ್ಪು ಎಂದು ಸಂಧಾನಕಾರರು ಇದೇ ಸಂದರ್ಭದಲ್ಲಿ ತಿಳಿಸಿದರು.

ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಂಡಿದ್ದೇ ಆದಲ್ಲಿ ಇದು ನಿಜಕ್ಕೂ ಬಹುದೊಡ್ಡ ಉದಾಹರಣೆಯಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು. ಸುಪ್ರೀಂ ಕೋರ್ಟ್‌ ಆದೇಶ ಪಾಲಿಸಬೇಕು ಎಂದು ಸಂಜಯ್‌ ಹೆಗಡೆ ಸಂಧಾನಕಾರರ ಜತೆ ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ