ಆ್ಯಪ್ನಗರ

ಕರ್ನಾಟಕ ಸೇರಿ 8 ರಾಜ್ಯಗಳ ರೈತರೊಂದಿಗೆ ಸುಪ್ರೀಂ ತಜ್ಞರ ಸಮಿತಿಯಿಂದ ಮಾತುಕತೆ

ಕೃಷಿ ಕಾಯ್ದೆ ಸಂಬಂಧ ಆಡಳಿತ ವರ್ಗ ಹಾಗೂ ಅನ್ನದಾತರ ನಡುವೆ ಉಂಟಾಗಿರುವ ಸಂಘರ್ಷ ಶಮನಕ್ಕೆ ಕೇಂದ್ರ ಸರ್ಕಾರ ರಚಿಸಿರುವ ತಜ್ಞರ ಸಮಿತಿ ಕೆಲಸ ಪ್ರಾರಂಭಿಸಿದೆ. ದೇಶದ ವಿವಿಧ ಭಾಗಗಳ 10 ರೈತ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿದೆ.

Vijaya Karnataka Web 21 Jan 2021, 6:03 pm

ಹೈಲೈಟ್ಸ್‌:

  • ಕರ್ನಾಟಕ, ತಮಿಳುನಾಡು ಸೇರಿ ಎಂಟು ರಾಜ್ಯಗಳ ರೈತರೊಂದಿಗೆ ಸಭೆ
  • ವಿಡಿಯೋ ಕಾನ್ಫರೆನ್ಸ್‌ ಮೂಲಕ ರೈತರ ಅಭಿಪ್ರಾಯ ಸಂಗ್ರಹ
  • ಮೂರು ಮಂದಿ ತಜ್ಞರಿಂದ ಕೃಷಿ ಕಾಯ್ದೆಗಳ ಪರಾಮರ್ಶೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌
ನವದೆಹಲಿ: ರೈತರು ಹಾಗೂ ಸರ್ಕಾರದ ನಡುವೆ ಉಂಟಾಗಿರುವ ಬಿಕ್ಕಟ್ಟು ಶಮನಕ್ಕೆ ಸುಪ್ರೀಂ ಕೋರ್ಟ್‌ ರಚಿಸಿರುವ ತಜ್ಞರ ಸಮಿತಿ ತನ್ನ ಕೆಲಸ ಆರಂಭಿಸಿದೆ. ಕರ್ನಾಟಕ ಸೇರಿ ದೇಶದ ಎಂಟು ರಾಜ್ಯಗಳ ರೈತ ಸಂಘಟನೆಗಳೊಂದಿಗೆ ಗುರುವಾರ ಮಾತುಕತೆ ನಡೆಸಿದೆ.
ದೇಶಾದ್ಯಂತ ರೈತರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಮೂರು ಕಾಯ್ದೆಯಗಳಿಗೆ ತಡೆ ನೀಡಿದ್ದ ಸುಪ್ರೀಂ ಕೋರ್ಟ್‌, ರೈತರು ಹಾಗೂ ಸರ್ಕಾರದ ನಡುವೆ ಉಂಟಾಗಿದ್ದ ಬಿಕ್ಕಟ್ಟು ಪರಿಹಾರಕ್ಕೆ ನಾಲ್ಕು ಮಂದಿಯ ಸಮಿತಿಯನ್ನು ರಚನೆ ಮಾಡಿತ್ತು. ಈ ಪೈಕಿ ಓರ್ವ ಸದಸ್ಯ ಸಮಿತಿಯಿಂದ ಹೊರ ಬಂದಿದ್ದಾರೆ. ಸಮಿತಿಯಲ್ಲಿ ಸದ್ಯ ಮೂವರು ಮಾತ್ರ ಉಳಿದುಕೊಂಡಿದ್ದಾರೆ.

ರೈತರ ಜತೆ ಗುರುವಾರ ಸುಪ್ರೀಂ ನೇಮಿಸಿದ ತಜ್ಞರ ಸಮಿತಿಯಿಂದ ಮೊದಲ ಸಭೆ
ಕರ್ನಾಟಕ, ಕೇರಳ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ತಮಿಳುನಾಡು ಹಾಗೂ ಉತ್ತರ ಪ್ರದೇಶದ ಒಟ್ಟು ಹತ್ತು ರೈತ ಸಂಘಟನೆಗಳೊಂದಿಗೆ ತಜ್ಞರ ಸಮಿತಿ ಮಾತುಕತೆ ನಡೆಸಿದೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತುಕತೆ ನಡೆಸಿದ್ದು, ಅವರ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ಸಮಿತಿ ಹೇಳಿದೆ. ಆದರೆ ಯಾವ ರಾಜ್ಯಗಳಲ್ಲಿ ಯಾವ ರೈತ ಸಂಘಟನೆಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎನ್ನುವುದು ತಿಳಿದು ಬಂದಿಲ್ಲ.

ಈ ಮಾತುಕತೆಯಲ್ಲಿ ರೈತ ಸಂಘಟನೆಗಳು, ಕಾಯ್ದೆಯ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿದ್ದು ಅವುಗಳ ಜಾರಿ ಬಗ್ಗೆ ಸಲಹೆ ನೀಡಿದ್ದಾರೆ ಎಂದು ಸಮಿತಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯನ್ನು ಹೇಳಲಾಗಿದೆ.

ರೈತರ ಟ್ರ್ಯಾಕ್ಟರ್‌ ರ‍್ಯಾಲಿಗೆ ಬೆದರಿತೇ ಕೇಂದ್ರ? ಕೃಷಿ ಕಾಯಿದೆ ಜಾರಿ ಒಂದೂವರೆ ವರ್ಷ ಮುಂದೂಡಿಕೆ!
ಮಹಾರಾಷ್ಟ್ರ ಮೂಲದ ಶೇಖ್ತಾರಿ ಸಂಘಟನೆಯ ಅಧ್ಯಕ್ಷ ಅನಿಲ್‌ ಘಾವಂತ್‌, ಕೃಷಿ ಅರ್ಥಶಸ್ತ್ರಜ್ಞ ಅಶೋಕ್‌ ಗುಲಾಟಿ ಹಾಗೂ ಪ್ರಮೋದ್‌ ಕುಮಾರ್‌ ಈ ಸಮಿತಿಯ ಸದಸ್ಯರಾಗಿದ್ದಾರೆ. ಮತ್ತೊಬ್ಬ ಸದಸ್ಯ ಭಾರತೀಯ ಕಿಸಾನ್‌ ಯೂನಿಯನ್‌ನ ಅಧ್ಯಕ್ಷ ಭೂಪಿಂದರ್‌ ಸಿಂಗ್‌ ಮನ್ನ್‌ ಸಮಿತಿಯಿಂದ ಈಗಾಗಲೇ ಹೊರ ಬಂದಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಗಳು ತಮಗೆ ಮಾರಕವಾಗಲಿದೆ ಎಂದು ಕಳೆದ ಎರಡು ತಿಂಗಳಿನಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜಧಾನಿಯ ಹೊರ ವಲಯಗಳಲ್ಲಿ ಝಾಂಡಾ ಊರಿ ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ರೈತರು ಹಾಗೂ ಸರ್ಕಾದರ ನಡುವೆ ಹತ್ತು ಸುತ್ತಿನ ಮಾತುಕತೆ ನಡೆದರೂ ಯಾವುದೇ ಪ್ರಯೋಜನ ಉಂಟಾಗಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ