ಆ್ಯಪ್ನಗರ

ಅಯೋಧ್ಯೆ ವಿವಾದಕ್ಕೆ ಸರ್ವಾನುಮತದ ತೀರ್ಪು : ಸಾಂವಿಧಾನಿಕ ಪೀಠದ ಪ್ರಮುಖ ಆದೇಶಗಳಿವು

ಇಡೀ ದೇಶ ಕಾತರದಿಂದ ಕಾದಿದ್ದ ಅಯೋಧ್ಯೆ ರಾಮಜನ್ಮ ಭೂಮಿ - ಬಾಬರಿ ಮಸೀದಿ ವಿವಾದದ ಐತಿಹಾಸಿ ತೀರ್ಪು ಶನಿವಾರ ಹೊರಬಿದ್ದಿದೆ. ನ್ಯಾಯಮೂರ್ತಿ ರಂಜನ್‌ ಗೊಗೋಯಿ ನೇತೃತ್ವದ ಐವರು ಸದಸ್ಯರನ್ನೊಳಗೊಂಡ ಸಾಂವಿಧಾನಿಕ ಪೀಠ ಸರ್ವಾನುಮತದ ತೀರ್ಪು ನೀಡಿದೆ. ತೀರ್ಪಿನ ಪ್ರಮುಖಾಂಶಗಳು ಹೀಗಿವೆ.

Vijaya Karnataka Web 9 Nov 2019, 2:28 pm
ಹೊಸದಿಲ್ಲಿ: ಇಡೀ ದೇಶ ಕಾತರದಿಂದ ಕಾದಿದ್ದ ಅಯೋಧ್ಯೆ ರಾಮಜನ್ಮ ಭೂಮಿ- ಬಾಬರಿ ಮಸೀದಿ ವಿವಾದದ ಐತಿಹಾಸಿ ತೀರ್ಪು ಶನಿವಾರ ಹೊರಬಿದ್ದಿದೆ. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ ನೇತೃತ್ವದ ಐವರು ಸದಸ್ಯರನ್ನೊಳಗೊಂಡ ಸಾಂವಿಧಾನಿಕ ಪೀಠ ಸರ್ವಾನುಮತದೊಂದಿಗೆ ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ. ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಗ್ರೀನ್‌ ಸಿಗ್ನಲ್‌ ನೀಡಿದೆ. ಜತೆಗೆ ಆಯೋಧ್ಯೆಯಲ್ಲಿಯೇ ಮಸೀದಿ ನಿರ್ಮಾಣಕ್ಕೆ ಬೇರೊಂದು ಜಾಗದಲ್ಲಿ 5 ಎಕರೆ ಪರ್ಯಾಯ ಭೂಮಿ ನೀಡುವಂತೆ ತೀರ್ಪು ನೀಡಿದೆ.
Vijaya Karnataka Web ayodhya
ಸಾಂದರ್ಭಿಕ ಚಿತ್ರ


ಪೇಜಾವರ ಶ್ರೀಗಳಿಂದ ತೀರ್ಪು ವೀಕ್ಷಣೆ

ನಿರ್ಮೋಹಿ ಅಖಾಡದ ಅರ್ಜಿಯನ್ನು ವಜಾ ಮಡಿರುವ ಸುಪ್ರೀಂ ಕೋರ್ಟ್‌, ರಾಮಲಲ್ಲಾ ಅನ್ನೇ ಮುಖ್ಯ ಅರ್ಜಿದಾರ ಎಂದು ಮಾನ್ಯ ಮಾಡಿದೆ. ಮಂದಿರ ನಿರ್ಮಾಣ ಮತ್ತು ಮಸೀದಿಗೆ ಪರ್ಯಾಯ ಭೂಮಿ ನೀಡಲು ಪತ್ಯೇಕ ಮಂಡಳಿ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.

ಪುರಾತತ್ವ ಇಲಾಖೆ ವರದಿಯಂತೆ ಬಾಬರಿ ಮಸೀದಿಯನ್ನು ಖಾಲಿ ಜಾಗದಲ್ಲಿ ನಿರ್ಮಿಸಲಾಗಿಲ್ಲ. ಬಾಬರಿ ಮಸೀದಿ ನಿರ್ಮಾಣಕ್ಕೂ ಮುನ್ನ ಅಲ್ಲಿ ಬೃಹತ್‌ ಕಟ್ಟಡವಿತ್ತು. ಆ ಕಟ್ಟಡವು ಇಸ್ಲಾಮಿಕ್‌ ಶೈಲಿಯದ್ದಲ್ಲ. ಬಾಬರಿ ಮಸೀದಿಯ ಅಡಿಯಲ್ಲಿ ಇಸ್ಲಾಮೇತರ ಕಟ್ಟಡದ ಅವಶೇಷವಿತ್ತು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಅಯೋಧ್ಯೆ ಮಹಾ ತೀರ್ಪು: ರಾಜಕೀಯ ಮುಖಂಡರ ಪ್ರತಿಕ್ರಿಯೆ ಹೀಗಿದೆ

ಹಿಂದೂಗಳು ಅಯೋಧ್ಯೆಯನ್ನು ರಾಮನ ಜನ್ಮಸ್ಥಳ ಎಂದು ನಂಬಿದ್ದಾರೆ. ಈ ವಿಚಾರದಲ್ಲಿ ಅವರಿಗೆ ಧಾರ್ಮಿಕ ನಂಬಿಕೆಗಳಿವೆ. ಆದರ ಮುಸ್ಲಿಮ ರು ಕೂಡ ಆ ಜಾಗವನ್ನು ಬಾಬರಿ ಮಸೀದಿಗೆ ಸೇರಿದ್ದು ಎನ್ನುತ್ತಾರೆ. ರಾಮ ಅಲ್ಲಿ ಜನಿಸಿದ್ದು ಎಂಬ ಹಿಂದುಗಳ ನಂಬಿಕೆಯೂ ವಿವಾದರಹಿತವಾಗಿದ್ದು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಮಂದಿರ ನಿರ್ಮಾಣ, ಮಸೀದಿಗೆ ಭೂಮಿ ನೀಡಲು ಟ್ರಸ್ಟ್‌ ರಚನೆಗೆ ಕೇಂದ್ರಕ್ಕೆ 3 ತಿಂಗಳ ಗಡುವು

ಅಲಹಾಬಾದ್‌ ತೀರ್ಪು ದೋಷಪೂರಿತ!:
ಈ ಹಿಂದೆ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ತೀರ್ಪು ದೋಷಪೂರಿತವಾಗಿದೆ. ವಿವಾದಿತ ಸ್ಥಳವನ್ನು ಮೂರು ಭಾಗವಾಗಿ ವಿಂಗಡಿಸಿದ್ದು ಸರಿಯಲ್ಲ ಎಂದು ಸಾಂವಿಧಾನಿಕ ಪೀಠ ಅಭಿಪ್ರಾಯಪಟ್ಟಿದೆ.

ಟ್ರಸ್ಟ್‌ ಸ್ಥಾಪನೆಗೆ 3 ತಿಂಗಳ ಗಡುವು:
ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮತ್ತು ಬಾಬರಿ ಮಸೀದಿಗೆ ಪರ್ಯಾಯ ಭೂಮಿ ನೀಡಲು 3-4 ತಿಂಗಳೊಳಗೆ ಟ್ರಸ್ಟ್‌ ರಚಿಸುವಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ವಿವಾದಿತ 2.77 ಎಕರೆ ಜಮೀನು ಪ್ರಕರಣದ ಅರ್ಜಿದಾರ ರಾಮಲಲ್ಲಾಗೆ ನೀಡಲು ಆದೇಶಿಸಿದೆ. ರಾಮಮಂದಿರ ನಿರ್ಮಾಣದ ಹೊಣೆಯನ್ನು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನೀಡಿದ್ದು, ಮೂರು ತಿಂಗಳ ಒಳಗಾಗಿ ನಿಯಮ ರೂಪಿಸುವಂತೆ ಆದೇಶಿಸಿದೆ.

ಅಯೋಧ್ಯ ತೀರ್ಪು: ಸುಪ್ರೀಂ ಆದೇಶದಲ್ಲಿ ಸೋಲು-ಗೆಲುವಿನ ದೃಷ್ಟಿಯಲ್ಲಿ ಕಂಡಿಲ್ಲ: ಮೋಹನ್‌ ಭಾಗವತ್‌

ಸುನ್ನಿ ವಕ್ಫ್‌ ಬೋರ್ಡ್‌ ಅಸಮಾಧಾನ: ತೀರ್ಪು ಕುರಿತು 'ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ' (ಎಐಎಂಪಿಎಲ್‌ಬಿ) ಅಸಮಾಧಾನ ವ್ಯಕ್ತಪಡಿಸಿದೆ. ನಾವು ಸುಪ್ರೀಂ ಕೋರ್ಟ್‌ ತೀರ್ಪನ್ನು ಗೌರವಿಸುತ್ತೇವೆ. ಆದರೆ ಈ ತೀರ್ಪು ನಮಗೆ ತೃಪ್ತಿ ತಂದಿಲ್ಲ. ಮುಂದೆ ಏನು ಮಾಡಬಹುದು ಎಂಬುದನ್ನು ನಿರ್ಧಸರಿಸಲಾಗುವುದು ಎಂದು ಸುನ್ನಿ ವಕ್ಫ್‌ ಬೋರ್ಡ್‌ ವಕೀಲ ಝಾಫರ್ ಆಯಾಬ್‌ ಜಿಲಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುನ್ನಿ ವಕ್ಫ್ ಬೋರ್ಡ್‌ಗೆ ಪ್ರತ್ಯೇಕ ಜಾಗ ಭೂಮಿ ನೀಡಿವಂತೆ ಸೂಪ್ರೀಂ ಕೋರ್ಟ್‌ ಸೂಚಿಸಿದೆ. ಆದರೆ, ಮಸೀದಿ ನಿರ್ಮಾಣಕ್ಕೆ ಬೇರೊಂದು ಜಾಗದಲ್ಲಿ ಪರ್ಯಾಯ ಭೂಮಿ ನೀಡುತ್ತಿರುವುದು ಸರಿಯಲ್ಲ. ತೀರ್ಪನ್ನು ಪೂರ್ಣವಾಗಿ ಪರಿಶೀಲಿಸಿ, ಮುಂದೆ ಯಾವ ಕಾನೂನು ಕ್ರಮ ಕೈಗೊಳ್ಳಬಹುದೆಂದು ನಿರ್ಧರಿಸಲಾಗುವುದು ಎಂದು ವಕೀಲ ಜಿಲಾನಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ