ಆ್ಯಪ್ನಗರ

ಅಕ್ಟೋಬರ್ 17ರೊಳಗೆ ಅಯೋಧ್ಯೆ ವಿಚಾರಣೆ ಪೂರ್ಣಗೊಳಿಸಲು ಸುಪ್ರೀಂ ನಿರ್ಧಾರ

ಅಯೋಧ್ಯಾ ರಾಮಮಂದಿರ ಭೂ ವಿವಾದ ಆದಷ್ಟು ಬೇಗ ಬಗೆಹರಿಯುವ ಲಕ್ಷಣಗಳು ಕಂಡುಬರ್ತಿದೆ. ಪ್ರತಿದಿನ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ಅಕ್ಟೋಬರ್ 17ರ ಒಳಗೆ ವಿಚಾರಣೆ ಪೂರ್ಣಗೊಳಿಸಲು ನಿರ್ಧರಿಸಿದೆ.

Vijaya Karnataka 4 Oct 2019, 9:57 pm
ಹೊಸ ದಿಲ್ಲಿ: ಧಾರ್ಮಿಕವಾಗಿ ಹಾಗೂ ರಾಜಕೀಯವಾಗಿ ಸೂಕ್ಷ್ಮವಾಗಿರುವ ಅಯೋಧ್ಯೆ ಭೂ ವಿವಾದ ಪ್ರಕರಣದ ವಿಚಾರಣೆಯನ್ನು ಇದೇ ತಿಂಗಳ 17ರೊಳಗೆ ಪೂರ್ಣಗೊಳಿಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪಂಚ ಸದಸ್ಯರ ಸಂವಿಧಾನ ಪೀಠವು ಆಗಸ್ಟ್‌ನಿಂದ ದಿನವಹಿ ವಿಚಾರಣೆ ನಡೆಸುತ್ತಿದೆ.
Vijaya Karnataka Web ayodhya ram mandir


ಶುಕ್ರವಾರ ನಡೆದ 37ನೇ ದಿನದ ವಿಚಾರಣೆ ವೇಳೆ, ಅಕ್ಟೋಬರ್ 17ರೊಳಗೆ ಹಿಂದೂ ಹಾಗೂ ಮುಸ್ಲಿಂ ಕಕ್ಷಿದಾರರ ಎಲ್ಲವಾದ ಪ್ರತಿವಾದಗಳನ್ನು ಆಲಿಸಿ ವಿಚಾರಣೆ ಪೂರ್ಣಗೊಳಿಸಲಾಗುವುದೆಂದು ಹೇಳಿದೆ. ಮುಸ್ಲಿಂ ಅರ್ಜಿದಾರರಿಗೆ ವಾದ ಪೂರ್ಣಗೊಳಿಸಲು ಅ.14ರವರೆಗೆ ಸಮಯ ನೀಡಲಾಗುವುದು ಮತ್ತು ನಂತರದ ಎರಡು ದಿನಗಳನ್ನು ಹಿಂದೂ ಕಕ್ಷಿದಾರರಿಗೆ ಪ್ರತಿ ವಾದ ಸಲ್ಲಿಸಲು ಅವಕಾಶ ನೀಡಲಾಗುವುದು.

ಅಕ್ಟೋಬರ್ 17ಕ್ಕೆ ವಿಚಾರಣೆ ಅಂತ್ಯಗೊಳಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಸಿಜೆಐ ರಂಜನ್‌ ಗೊಗೋಯ್‌ ನವೆಂಬರ್‌ 17ಕ್ಕೆ ನಿವೃತ್ತಿ ಹೊಂದಲಿದ್ದು, ಅಷ್ಟರೊಳಗೆ ತೀರ್ಪು ಪ್ರಕಟಿಸುವ ಗುರಿ ನ್ಯಾಯಪೀಠದ ಮುಂದಿದೆ.

ಮನೆ ರೆಡಿ ಇದೆ ಅಂದ್ರೂ ಬರ್ತಿಲ್ಲ ಗ್ರಾಹಕರು!: ಬಾಕಿ ಕೊಡಿ ಇಲ್ಲವೇ ಹಣ ಕಳ್ಕೊಳ್ಳಿ ಅಂತಿದೆ 'ರೇರಾ'

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ