ಆ್ಯಪ್ನಗರ

ಆನ್‌ಲೈನ್‌ ವಿಚಾರಣೆ ವೇಳೆ ಅರೆಬೆತ್ತಲೆ ವ್ಯಕ್ತಿ ಕಂಡು ಸಿಟ್ಟಿಗೆದ್ದ ಸುಪ್ರೀಂ ನ್ಯಾಯಮೂರ್ತಿ!

ಪ್ರಕರಣವೊಂದರ ವಿಡಿಯೋ ಕಾನ್ಫರೆನ್ಸ್‌ ವಿಚಾರಣೆ ಸಂದರ್ಭದಲ್ಲಿ ಅಂಗಿ ಧರಿಸದೇ ಇರುವ ವ್ಯಕ್ತಿಯೊಬ್ಬ ಹಿನ್ನೆಲೆಯಲ್ಲಿ ಗೋಚರಿಸಿದ ಬಗ್ಗೆ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತ ವರದಿ ಇಲ್ಲಿದೆ.

Vijaya Karnataka Web 1 Dec 2020, 9:15 pm
ಹೊಸದಿಲ್ಲಿ: ಪ್ರಕರಣವೊಂದರ ವಿಡಿಯೋ ಕಾನ್ಫರೆನ್ಸ್‌ ವಿಚಾರಣೆ ಸಂದರ್ಭದಲ್ಲಿ ಅಂಗಿ ಧರಿಸದೇ ಇರುವ ವ್ಯಕ್ತಿಯೊಬ್ಬ ಹಿನ್ನೆಲೆಯಲ್ಲಿ ಗೋಚರಿಸಿದ ಬಗ್ಗೆ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
Vijaya Karnataka Web Supreme Court


ಕೋವಿಡ್‌ ಸೋಂಕು ಹಾಳಿ ಬಳಿಕ ಆನ್‌ಲೈನ್‌ ವಿಚಾರಣೆಯನ್ನೇ ನೆಚ್ಚಿಕೊಂಡಿರುವ ಕೋರ್ಟ್‌ ಕಲಾಪಗಳು ಆರಂಭದಿಂದಲೂ ಈ ರೀತಿಯ ಅಶಿಸ್ತಿನ ಪ್ರಕರಣಗಳಿಗೆ ಸಾಕ್ಷಿಯಾಗುತ್ತಲೇ ಬಂದಿವೆ. ಕೆಲವು ವಕೀಲರು ವಿಚಾರಣೆ ವೇಳೆ ರಾತ್ರಿ ಧರಿಸುವ ದಿರಿಸಿನಲ್ಲಿಯೇ ಹಾಜರಾಗಿ ನ್ಯಾಯಮೂರ್ತಿಗಳ ಆಕ್ರೋಶಕ್ಕೆ ತುತ್ತಾಗಿದ್ದರು. ಈ ಕುರಿತು ಅನೇಕ ಬಾರಿ ಸುಪ್ರೀಂ ಕೋರ್ಟ್‌ ಎಚ್ಚರಿಕೆ ನೀಡಿದ್ದರೂ ಮಂಗಳವಾರ ಮತ್ತೊಂದು ಅಶಿಸ್ತಿನ ಪ್ರಕರಣ ಮರು ಕಳಿಸಿದೆ.

ವಾರಣಾಸಿಯಿಂದ ಮೋದಿ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

ವಿಡಿಯೊ ಕಾನ್ಫರೆನ್ಸ್‌ ಮೂಲಕ ಪ್ರಕರಣದ ಗಂಭೀರ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿಯೇ ನ್ಯಾಯವಾದಿಗಳ ಹಿನ್ನೆಲೆಯಲ್ಲಿ ಅಂಗಿ ಧರಿಸದ ಅರೆಬೆತ್ತಲೆ ವ್ಯಕ್ತಿಯೊಬ್ಬರು ಸುಳಿದಾಡಿ, ನ್ಯಾಯಮೂರ್ತಿಗಳಿಗೆ ಕಿರಿಕಿರಿ ಉಂಟು ಮಾಡಿದರು. ಎಚ್ಚರಿಕೆ ನಂತರ ವಕೀಲ ಪ್ರಮಾದವನ್ನು ಸರಿಪಡಿಸಿಕೊಂಡರು. ''ಏಳು-ಎಂಟು ತಿಂಗಳಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಯುತ್ತಿದೆ. ಆದರೂ ಇಂತಹ ಅಶಿಸ್ತು ನಿವಾರಣೆಯಾಗಿಲ್ಲ ಎಂದರೆ ಏನರ್ಥ, ಇದು ಸಹಿಸಲು ಸಾಧ್ಯವಿಲ್ಲ'' ಎಂದು ನ್ಯಾಯಮೂರ್ತಿಗಳಾದ ಎಲ್‌.ನಾಗೇಶ್ವರ ರಾವ್‌ ಮತ್ತು ಹೇಮಂತ್‌ ಗುಪ್ತ ಅವರ ಪೀಠ ಆಕ್ರೋಶ ವ್ಯಕ್ತಪಡಿಸಿತು.

ಅರ್ನಬ್ ಗೋಸ್ವಾಮಿ‌ಗೆ ಜೈಲೇ ಗತಿ, ಜಾಮೀನು ನಿರಾಕರಿಸಿದ ಬಾಂಬೆ ಹೈಕೋರ್ಟ್‌

ಹಿಂದಿನ ಪ್ರಕರಣಗಳು
  • *ಅಕ್ಟೋಬರ್‌ 26ರಂದು ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್‌ ಪೀಠದ ಮುಂದೆ ಶರ್ಟ್‌ ಧರಿಸದೇ ವಕೀಲರೊಬ್ಬರು ವಿಚಾರಣೆಗೆ ಹಾಜರಾಗಿ ಕಿರಿಕಿರಿ ಉಂಟು ಮಾಡಿದ್ದರು.
  • *ಜೂನ್‌ನಲ್ಲಿ ಹಾಸಿಗೆ ಮೇಲೆ ಮಲಗಿಕೊಂಡೇ ಟೀ ಶರ್ಟ್‌ಧಾರಿ ವಕೀಲರೊಬ್ಬರು ವಾದ ಮಂಡಿಸಲು ಮುಂದಾಗಿ ನ್ಯಾಯಮೂರ್ತಿಗಳ ಆಕ್ರೋಶಕ್ಕೆ ತುತ್ತಾಗಿದ್ದರು.
  • *ಏಪ್ರಿಲ್‌ನಲ್ಲಿ ರಾಜಸ್ಥಾನ ಹೈಕೋರ್ಟ್‌ ನ್ಯಾಯಪೀಠದ ಮುಂದೆ ಇಂತಹದ್ದೇ ಅಶಿಸ್ತು ಪ್ರದರ್ಶಿಸಿದ್ದ ವಕೀಲರು ಕಟು ಎಚ್ಚರಿಕೆಗೆ ಒಳಗಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ