ಆ್ಯಪ್ನಗರ

ಸಮ-ಬೆಸ ಸಂಚಾರದಿಂದ ಮಾತ್ರ ಮಾಲಿನ್ಯ ನಿಯಂತ್ರಣ ಅಸಾಧ್ಯ: ದಿಲ್ಲಿ ಸರಕಾರಕ್ಕೆ ಸುಪ್ರೀಂ ಸೂಚನೆ

ಸಮ-ಬೆಸ ಸಂಖ್ಯೆಯ ವಾಹನ ಸಂಚಾರ ದಿಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಶಾಶ್ವತ ಪರಿಹಾರವಲ್ಲ ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂ ಸಾರ್ವ­ಜನಿಕ ಸಾರಿಗೆ ವ್ಯವಸ್ಥೆ ಉತ್ತಮ ಪಡಿಸುವಂತೆ ದಿಲ್ಲಿ ಸರಕಾರಕ್ಕೆ ಸೂಚಿಸಿದೆ.

Vijaya Karnataka Web 16 Nov 2019, 10:43 am
ಹೊಸದಿಲ್ಲಿ: ಸಮ-ಬೆಸ ಸಂಖ್ಯೆಯ ವಾಹನ ಸಂಚಾರ ದಿಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಶಾಶ್ವತ ಪರಿಹಾರವಲ್ಲಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್‌, ರಾಜಧಾನಿಯಲ್ಲಿಸಾರ್ವ­ಜನಿಕ ಸಾರಿಗೆ ವ್ಯವಸ್ಥೆ ಉತ್ತಮ ಪಡಿಸುವಂತೆ ದಿಲ್ಲಿ ಸರಕಾರಕ್ಕೆ ಸೂಚಿಸಿದೆ.
Vijaya Karnataka Web Odd-even scheme


'ದಿಲ್ಲಿ ಮಾಲಿನ್ಯ' ರಾಜಕೀಯ! ಎಎಪಿಗೆ ಕ್ಲಾಸ್‌ ತಗೊಂಡಿದ್ದ ಗಂಭೀರ್ ಸಭೆಗೇ ಬರ್ಲಿಲ್ಲ: ಜಿಲೇಬಿ ಅಷ್ಟೊಂದು ಟೇಸ್ಟಾ?

ಇದೇ ವೇಳೆ, ನಗರದಾದ್ಯಂತ ಜಾಗತಿಕ ಗುಣಮಟ್ಟದ ಗಾಳಿ ಶುದ್ಧೀಕರಣ ಸ್ಥಾವರ­ಗಳನ್ನು ನಿರ್ಮಿಸುವಂತೆ ಕೇಂದ್ರ ಸರಕಾರಕ್ಕೂ ನಿರ್ದೇಶನ ನೀಡಿದೆ. ಒಂದು ಹಂತದಲ್ಲಿನ್ಯಾಯಪೀಠವು, ''ರಾಷ್ಟ್ರ ರಾಜಧಾನಿ ವಲಯ (ಎನ್‌ಸಿಆರ್‌)ದಲ್ಲಿಇಂದು ವಾಯು ಗುಣಮಟ್ಟ ಸೂಚ್ಯಂಕ 600ರ ಸಮೀಪ ಇದೆ. ಇಂತಹ ಸ್ಥಿತಿಯಲ್ಲಿ ಜನ ಉಸಿರಾಡುವುದಾ­ದರೂ ಹೇಗೆ? ನಾವು ಮಾಲಿನ್ಯ ನಿಯಂತ್ರಣಕ್ಕೆ ಪ್ರಯತ್ನ ಮಾಡುತ್ತಿದ್ದೇವೆ ನಿಜ, ಆದರೆ ಪ್ರಕೃತಿ ನಮ್ಮ ನಿಯಂತ್ರಣದಲ್ಲಿಇಲ್ಲ. ನಾವು ಪ್ರಕೃತಿಯ ದುರ್ಬಳಕೆ ಮಾಡಿಕೊಂಡರೆ ಏನಾಗುತ್ತದೆ ಎನ್ನುವುದಕ್ಕೆ ಇದೇ ನಿದರ್ಶನ,'' ಎಂದು ಹೇಳಿತು. ದಿಲ್ಲಿ, ಹರಿಯಾಣ, ಪಂಜಾಬ್‌ ಮತ್ತು ಉತ್ತರ ಪ್ರದೇಶ ಸರಕಾರಗಳ ಮುಖ್ಯ ಕಾರ್ಯದರ್ಶಿಗಳು ನ.29ರಂದು ಖುದ್ದಾಗಿ ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದೂ ಆದೇಶಿಸಿತು.

Oxygen Cafe: ದಿಲ್ಲಿಯ ಕೆಫೆಯಲ್ಲಿ ಆಮ್ಲಜನಕವೂ ಸಿಗುತ್ತೆ!

ಸಭೆ ರದ್ದು: ದಿಲ್ಲಿ ವಾಯು ಮಾಲಿನ್ಯಕ್ಕೆ ಸಂಬಂಧಿಸಿದಂತೆ ಶುಕ್ರವಾರ ನಿಗದಿಯಾಗಿದ್ದ ಸಂಸದೀಯ ಸಮಿತಿ ಸಭೆಗೆ ಪ್ರಮುಖ ಅಧಿಕಾರಿಗಳು ಹಾಗೂ ಹೆಚ್ಚಿನ ಸಂಸದರು ಗೈರಾಗಿದ್ದರು. ಹೀಗಾಗಿ ಸಭೆ­ಯನ್ನು ರದ್ದುಪಡಿಸಲಾಯಿತು. ಲೋಕ­ಸಭೆಯ 21 ಹಾಗೂ ರಾಜ್ಯಸಭೆಯ ಎಂಟು ಸದಸ್ಯರ ಪೈಕಿ ಸಮಿತಿ ಅಧ್ಯಕ್ಷೆ ಜಗದಾಂಬಿಕಾ ಪಾಲ್‌ ಸೇರಿ ನಾಲ್ವರು ಸಂಸದರು ಮಾತ್ರ ಪಾಲ್ಗೊಂಡಿದ್ದರು. ದಿಲ್ಲಿಯ ಮೂರು ನಗರಪಾಲಿಕೆ­ಗಳ ಆಯುಕ್ತರು, ದಿಲ್ಲಿಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ, ಪರಿಸರ ಸಚಿವಾಲಯದ ಕಾರ್ಯ­ದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಸೇರಿದಂತೆ ಬಹುತೇಕ ಹಿರಿಯ ಅಧಿಕಾರಿಗಳು ಗೈರಾಗಿದ್ದರು. ಹೀಗಾಗಿ ಸಭೆ ರದ್ದು ಪಡಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ