ಆ್ಯಪ್ನಗರ

ಅಂಬಾನಿ ಭದ್ರತೆ ಪ್ರಶ್ನಿಸಿದ್ದ ಅರ್ಜಿ ವಜಾ: ಅಗತ್ಯ ವೆಚ್ಚವನ್ನು ರಕ್ಷಣೆ ಪಡೆದವರು ಭರಿಸುವುದು ತಪ್ಪೇನಿಲ್ಲ ಎಂದ ಸುಪ್ರೀಂ

ಜೀವಕ್ಕೆ ರಕ್ಷಣೆ ಬೇಕಾಗಿರುವ ಪ್ರಜೆಗಳಿಗೆ ಭದ್ರತೆ ಒದಗಿಸುವುದು ಸರಕಾರದ ಕರ್ತವ್ಯವಾಗಿದೆ. ಅಂಬಾನಿಗಳ ಕಂಪನಿಯಲ್ಲಿನ ಏರುಪೇರಿನಿಂದ ದೇಶದ ಜಿಡಿಪಿ ಮೇಲೆ ಪರಿಣಾಮ ಆಗಲಿದೆ. ಹಾಗಾಗಿ ಅವರ ಜೀವಕ್ಕಿರುವ ಬೆದರಿಕೆಯನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲಎಂದು ಈ ಹಿಂದೆ ಹೈ ಕೋರ್ಟ್‌ ಅಭಿಪ್ರಾಯಪಟ್ಟಿತ್ತು. ಇದೀಗ ಸುಪ್ರೀಂಕೋರ್ಟ್ ಇದೇ ವಾದವನ್ನು ಎತ್ತಿ ಹಿಡಿದಿದೆ.

Vijaya Karnataka Web 29 Oct 2020, 7:33 am
ಹೊಸದಿಲ್ಲಿ: ದೇಶದಲ್ಲೇ ಅತಿ ಶ್ರೀಮಂತರೆನಿಸಿರುವ ಅಂಬಾನಿ ಕುಟುಂಬ ಸದಸ್ಯರಿಗೆ ಸರಕಾರದಿಂದ 'ಝಡ್‌+' ಭದ್ರತೆ ನೀಡಿರುವುದನ್ನು ಪ್ರಶ್ನಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ. ಹಿಮಾಂಶು ಅಗರ್ವಾಲ್‌ ಎಂಬಾತ ಇದೇ ಸಂಬಂಧ ಬಾಂಬೆ ಹೈಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಿದ್ದರು.
Vijaya Karnataka Web Mukesh Ambani


ಆದರೆ ಪಿಐಎಲ್‌ ವಜಾಗೊಳಿಸಿದ್ದ ಹೈಕೋರ್ಟ್‌, ಜೀವಕ್ಕೆ ರಕ್ಷಣೆ ಬೇಕಾಗಿರುವ ಪ್ರಜೆಗಳಿಗೆ ಭದ್ರತೆ ಒದಗಿಸುವುದು ಸರಕಾರದ ಕರ್ತವ್ಯವಾಗಿದೆ. ಅಂಬಾನಿಗಳ ಕಂಪನಿಯಲ್ಲಿನ ಏರುಪೇರಿನಿಂದ ದೇಶದ ಜಿಡಿಪಿ ಮೇಲೆ ಪರಿಣಾಮ ಆಗಲಿದೆ. ಹಾಗಾಗಿ ಅವರ ಜೀವಕ್ಕಿರುವ ಬೆದರಿಕೆಯನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲಎಂದು ಅಭಿಪ್ರಾಯಪಟ್ಟಿತ್ತು. ಇದನ್ನು ಪ್ರಶ್ನಿಸಿ ವಿಶೇಷ ಅರ್ಜಿಯನ್ನು ಹಿಮಾಂಶು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದರು.

ಹೈಕೋರ್ಟ್‌ನ ಅಭಿಪ್ರಾಯವನ್ನೇ ಸುಪ್ರೀಂಕೋರ್ಟ್‌ ಪೀಠ ಎತ್ತಿ ಹಿಡಿದಿದ್ದು, ಭದ್ರತೆ ಅಗತ್ಯವಿರುವವರಿಗೆ ಪೊಲೀಸರು ರಕ್ಷಣೆ ನೀಡುವುದು ಮತ್ತು ಅದಕ್ಕೆ ಅಗತ್ಯ ವೆಚ್ಚವನ್ನು ರಕ್ಷಣೆ ಪಡೆದವರು ಭರಿಸುವುದು ತಪ್ಪೇನಿಲ್ಲಎಂದಿದೆ. ಆದರೆ ತಮ್ಮ ಅರ್ಜಿಯಲ್ಲಿ ಹಿಮಾಂಶು ಅವರು ವಾದಿಸಿದ್ದಂತೆ, ಅಂಬಾನಿ ಕುಟುಂಬಸ್ಥರು ಖಾಸಗಿ ಭದ್ರತೆಯನ್ನು ಆಧುನಿಕ ತಂತ್ರಜ್ಞಾನದ ನೆರವಿನ ಸಮೇತ ನಿಯೋಜಿಸಿಕೊಳ್ಳುವಷ್ಟು ಆರ್ಥಿಕವಾಗಿ ಸದೃಢರಿದ್ದಾರೆ. ಹಾಗಾಗಿ ಸರಕಾರಿ ವೆಚ್ಚದಲ್ಲಿಅವರಿಗೆ ಭದ್ರತೆ ಒದಗಿಸುವುದು ಬೇಡ ಎಂದಿದ್ದರು.

ನವೆಂಬರ್‌ 5ಕ್ಕೆ ಎರಡನೇ ಹಂತದ ರಫೇಲ್‌ ಜೆಟ್‌ಗಳು ಭಾರತಕ್ಕೆ ಆಗಮನ, ಸೇನೆಗೆ ಮತ್ತಷ್ಟು ಭೀಮಬಲ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ