ಆ್ಯಪ್ನಗರ

ಮಂದಿರ ನಿರ್ಮಾಣ, ಮಸೀದಿಗೆ ಭೂಮಿ ನೀಡಲು ಟ್ರಸ್ಟ್‌ ರಚನೆಗೆ ಕೇಂದ್ರಕ್ಕೆ 3 ತಿಂಗಳ ಗಡುವು

ಸಾಂವಿಧಾನಿಕ ಪೀಠದ ಐದೂ ಜನ ನ್ಯಾಯಮೂರ್ತಿಗಳು ಸರ್ವಾನುಮತದದ ಸಮ್ಮತಿಯೊಂದಿಗೆ ಅಯೋಧ್ಯೆ ಪ್ರಕರಣದ ತೀರ್ಪು ಪ್ರಕಟಿಸಿದ್ದು, ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮತ್ತು ಬಾಬರಿ ಮಸೀದಿಗೆ ಪರ್ಯಾಯ ಭೂಮಿ ನೀಡಲು 3-4 ತಿಂಗಳೊಳಗೆ ಟ್ರಸ್ಟ್‌ ರಚಿಸುವಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.

Vijaya Karnataka Web 9 Nov 2019, 4:20 pm
ಹೊಸದಿಲ್ಲಿ: ಸಾಂವಿಧಾನಿಕ ಪೀಠದ ಐದೂ ಜನ ನ್ಯಾಯಮೂರ್ತಿಗಳು ಸರ್ವಾನುಮತದ ಸಮ್ಮತಿಯೊಂದಿಗೆ ಅಯೋಧ್ಯೆ ಪ್ರಕರಣದ ತೀರ್ಪು ಪ್ರಕಟಿಸಿದ್ದು, ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮತ್ತು ಬಾಬರಿ ಮಸೀದಿಗೆ ಪರ್ಯಾಯ ಭೂಮಿ ನೀಡಲು 3-4 ತಿಂಗಳೊಳಗೆ ಟ್ರಸ್ಟ್‌ ರಚಿಸುವಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.
Vijaya Karnataka Web supeme court




ವಿವಾದಿತ 2.77 ಎಕರೆ ಜಮೀನು ಪ್ರಕರಣದ ಅರ್ಜಿದಾರ ರಾಮಲಲ್ಲಾಗೆ ನೀಡಲು ಆದೇಶಿಸಿದೆ. ರಾಮಮಂದಿರ ನಿರ್ಮಾಣದ ಹೊಣೆಯನ್ನು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನೀಡಿದ್ದು ಮೂರು ತಿಂಗಳ ಒಳಗಾಗಿ ನಿಯಮ ರೂಪಿಸುವಂತೆ ಆದೇಶಿಸಿದೆ.

ಅಯೋಧ್ಯ: ವಿವಾದಿತ ಜಾಗ ರಾಮ್‌ಲಲ್ಲಾ ಪಾಲು, ಸುನ್ನಿ ವರ್ಕ್‌ ಬೋರ್ಡ್‌ಗೂ ಐದು ಎಕರೆ ಜಾಗ

ಪುರಾತತ್ವ ಇಲಾಖೆ ವರದಿಯಂತೆ ಬಾಬರಿ ಮಸೀದಿಯನ್ನು ಖಾಲಿ ಜಾಗದಲ್ಲಿ ನಿರ್ಮಿಸಲಾಗಿಲ್ಲ. ಬಾಬರಿ ಮಸೀದಿ ನಿರ್ಮಾಣಕ್ಕೂ ಮುನ್ನ ಅಲ್ಲಿ ಬೃಹತ್‌ ಕಟ್ಟಡವಿತ್ತು. ಆ ಕಟ್ಟಡವು ಇಸ್ಲಾಮಿಕ್‌ ಶೈಲಿಯದ್ದಲ್ಲ. ಬಾಬರಿ ಮಸೀದಿಯ ಅಡಿಯಲ್ಲಿ ಇಸ್ಲಾಮೇತರ ಕಟ್ಟಡದ ಅವಶೇಷವಿತ್ತು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಹಿಂದೂಗಳು ಅಯೋಧ್ಯೆಯನ್ನು ರಾಮನ ಜನ್ಮಸ್ಥಳ ಎಂದು ನಂಬಿದ್ದಾರೆ. ಈ ವಿಚಾರದಲ್ಲಿ ಅವರಿಗೆ ಧಾರ್ಮಿಕ ನಂಬಿಕೆಗಳಿವೆ. ಆದರ ಮುಸ್ಲಿಮ ರು ಕೂಡ ಆ ಜಾಗವನ್ನು ಬಾಬರಿ ಮಸೀದಿಗೆ ಸೇರಿದ್ದು ಎನ್ನುತ್ತಾರೆ. ರಾಮ ಅಲ್ಲಿ ಜನಿಸಿದ್ದು ಎಂಬ ಹಿಂದುಗಳ ನಂಬಿಕೆಯೂ ವಿವಾದರಹಿತವಾದದ್ದು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಅಯೋಧ್ಯೆ ತೀರ್ಪು ಹಿನ್ನೆಲೆ: ಸೆಕ್ಷನ್‌ 144 ಜಾರಿಯಾಗಿರುವ ದಿಲ್ಲಿಯ ಚಿತ್ರಣ ಇದು!!

ಈ ಹಿಂದೆ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ತೀರ್ಪು ದೋಷಪೂರಿತವಾಗಿದೆ. ವಿವಾದಿತ ಸ್ಥಳವನ್ನು ಮೂರು ಭಾಗವಾಗಿ ವಿಂಗಡಿಸಿದ್ದು ಸರಿಯಲ್ಲ ಎಂದು ಸಾಂವಿಧಾನಿಕ ಪೀಠ ಅಭಿಪ್ರಾಯಪಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ